ಲೆ| ಜ| ಬಿ.ಸಿ. ನಂದ ಅಂತ್ಯಸಂಸ್ಕಾರ
Team Udayavani, Dec 14, 2018, 10:08 AM IST
ಮಡಿಕೇರಿ: ಭಾರತೀಯ ಸೇನಾ ಪಡೆಯಲ್ಲಿ ತಮ್ಮ ಉನ್ನತ ಸ್ತರದ ಕಾರ್ಯವೈಖರಿಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದ ಲೆ| ಜ| ಬಿ.ಸಿ. ನಂದ ಅವರ ಅಂತ್ಯಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ನಗರದಂಚಿನ ಅವರ ತೋಟದಲ್ಲಿ ನೆರವೇರಿತು.
ಮೂಲತಃ ಮಹರ್ ರೆಜಿಮೆಂಟಿನ, ಪ್ರಸ್ತುತ ಮೈಸೂರಿನಲ್ಲಿ ಎನ್ಸಿಸಿ ಕಮಾಂಡೆಂಟ್ ಆಗಿರುವ ಕ| ಎಂ.ಕೆ. ಬೆಳ್ಯಪ್ಪ ಮತ್ತು ಮದ್ರಾಸ್ ಸ್ಯಾಪರ್ಸ್ ತಂಡದ ನೇತೃತ್ವ ವಹಿಸಿದ್ದ ಲೆ| ಕ| ದಿನೇಶ್ ಕುಮಾರ್ ನೇತೃತ್ವದ 21 ಮಂದಿಯ ತಂಡ ಅಗಲಿದ ಸೇನಾಧಿಕಾರಿಗೆ ಮೂರು ಸುತ್ತಿನ ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಲ್ಲಿಸಿತು.
ಪತ್ನಿ ಲೀಲಾ ನಂದ ಹಾಗೂ ದ್ವಿತೀಯ ಪುತ್ರಿ ದೇವಿಕಾ ಕೊಡವ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನೆರವೇರಿಸಿದರು. ಫೀ|ಮಾ| ಕಾರ್ಯಪ್ಪ ಮತ್ತು ಜ| ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕ| ಕಂಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕರಾದ ಮೇ| ಬಿ.ಎ. ನಂಜಪ್ಪ ಮತ್ತು ಕುಟುಂಬಸ್ಥರು ಸಹಕರಿಸಿದರು. ನಂದ ಅವರ ಆಶಯದಂತೆ ಪಾರ್ಥಿವ ಶರೀರವನ್ನು ತೋಟದಲ್ಲಿ ಭೂ ತಾಯಿಯ ಮಡಿಲಿಗೆ ಅರ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ