ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮ ದಿನೋತ್ಸವ
Team Udayavani, Nov 26, 2019, 5:17 AM IST
ಗೋಣಿಕೊಪ್ಪಲು: ಶಾಫಿ ಮುಸ್ಲಿಂ ಜಮಾಅತ್ ಇವರ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1461 ಜನ್ಮ ದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಪಟ್ಟಣದ ಜುಮಾ ಮಸೀದಿಯವರೆಗೆ ಮೆರವಣಿಗೆ ನಡೆಸಿ ಮೊಹಮ್ಮದ್ ಪೈಗಂಬರ್ರವರ ಸಂದೇಶವನ್ನು ಸಾರಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದರು.
ಹಾಡು, ನೃತ್ಯಗಳ ಮೂಲಕ ಪ್ರವಾದಿ ಮೊಹಮ್ಮದ್ರ ಜೀವನ ಬಗ್ಗೆ ಅರಿವು ಮೂಡಿಸಿದರು. ಮೆರವಣಿಗೆ ಸಂದರ್ಭ ಪಟ್ಟಣದ ಹಿಂದೂಪರ ಸಂಘಟನೆಗಳು ಪಾಯಸ ವಿತರಿಸುವ ಮೂಲಕ ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸಿದರು.
ಇದೇ ಸಂದರ್ಭ ಕ್ರೈಸ್ತ ಸಮುದಾಯದವರು ಕುಡಿಯುವ ನೀರನ್ನು ನೀಡಿ ಬಿಸಿಲಿನಲ್ಲಿ ನಡೆದು ಬಂದವರ ಬಾಯಾರಿಕೆಯನ್ನು ನೀಗಿಸಿದರು. ಗೋಣಿಕೊಪ್ಪಲು ಶಾಫಿ ಮುಸ್ಲಿಂ ಜಮಾಹತ್ ಅಧ್ಯಕ್ಷ ಬಷೀರ್ ಹಾಜಿ, ಕಾರ್ಯದರ್ಶಿ ಹಕೀಂ, ಸಂಚಾಲಕ ಪಿ.ಎ. ರಷೀದ್, ಉಸ್ತಾದ್ ತಂಲಿಕ್ ದಾರಿಮಿ ಸೇರಿದಂತೆ ಪ್ರಮುಖರು ಹಾಜರಿದ್ದರು. ಸಿಹಿ ವಿತರಿಸುವ ಸಂದರ್ಭ ಹಿಂದೂಪರ ಸಂಘಟನೆಯ ಸುರೇಶ್ ರೈ, ರಾಜೇಶ್, ಭರತ್, ಮಂಜು, ಪುನೀತ್, ಕಿಶೋರ್, ಸತೀಶ್, ವೇಣು, ರವೀಂದ್ರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ