ಪಟ್ಟಿಘಾಟ್ ಅರಣ್ಯಕ್ಕೆ ಬೆಂಕಿ: ಇಬ್ಬರ ಬಂಧನ
Team Udayavani, Mar 9, 2018, 11:12 AM IST
ಮಡಿಕೇರಿ: ಮದ್ಯದ ಅಮಲಿನಲ್ಲಿ ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದ ಉದಯಕುಮಾರ್ ಹಾಗೂ ಆತನ ಸ್ನೇಹಿತ ಡಿ.ಸಿ.ಪ್ರಸನ್ನ ಅವರನ್ನು ಮಡಿಕೇರಿ ಅರಣ್ಯ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
ಇಲಾಖೆಗೆ ಬಂದ ಖಚಿತ ಮಾಹಿತಿ ಅನ್ವಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅವರ ನೇತೃತ್ವದ ತಂಡ ಕಲ್ಲುಗುಂಡಿ ಸಮೀಪ ಆರೋಪಿಗಳ ಸಹಿತ ಕೃತ್ಯಕ್ಕೆ ಬಳಸಿದ್ದ ಜೀಪ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪಟ್ಟಿಘಾಟ್ ಮೀಸಲು ಅರಣ್ಯ ಪ್ರದೇಶದ ಪಣಿಯಾರ್, ಕಾಂತಬೈಲಿನ ಸುಮಾರು 40 ಎಕರೆ ಭಾಗ ಬೆಂಕಿಗೆ ಆಹುತಿಯಾಗಿತ್ತು ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.