ಮಾಕುಟ್ಟ-ಕೇರಳ ಅಂತಾರಾಜ್ಯ ಹೆದ್ದಾರಿಯಲ್ಲಿ ಆತಂಕ


Team Udayavani, Aug 15, 2019, 5:56 AM IST

Z-KUTTA-ROAD-2

ಮಡಿಕೇರಿ: ಕೊಡಗಿಗೆ ಮಳೆ ಹರಿಸುವ ಮಾಕುಟ್ಟ -ಕೇರಳ ಅಂತರಾಜ್ಯ ಹೆದ್ದಾರಿಯ ಆಸು ಪಾಸಿನ ಮಳೆಕಾಡುಗಳು ಈ ಬಾರಿ ಇನ್ನಷ್ಟು ಅನಾಹುತಗಳಿಗೆ ಕಾರಣವಾಗಿದೆ. ರಸ್ತೆ ಸಂಚಾರ ನಿಷೇಧದಿಂದಾಗಿ ಮಾನವ ಹಾನಿಯ ಮತ್ತಷ್ಟು ಘಟನಾವಳಿಗಳು ತಪ್ಪಿದೆ.

ಮಾಕುಟ್ಟ ರಸ್ತೆಯಲ್ಲಿ ಸಿಗುವ ಹನುಮಾನ್‌ ದೇವಾಲಯ ಮುಂಭಾಗದ ರಸ್ತೆ ಸಮೀಪದ ಬೆಟ್ಟವೊಂದು ಎರಡು ದಿನಗಳ ಹಿಂದೆ ಸ್ಫೋಟಗೊಂಡು ಭಾರೀ ಬಂಡೆಕಲ್ಲುಗಳು ರಸ್ತೆ ಉದ್ದಕ್ಕೂ ಉರುಳಿವೆ. ಬೆಟ್ಟ ಕುಸಿತದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು ಇದೀಗ ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಜೆಸಿಬಿ ಮೂಲಕ ರಸ್ತೆ ಮೇಲೆ ಬಿದ್ದ ಮಣ್ಣು, ಬಂಡೆಯನ್ನು ತೆರವುಗೊಳಿಸಿದೆ.

ಇಷ್ಟು ಮಾತ್ರವಲ್ಲದೆ, ಕೇವಲ 4-5 ದಿನಗಳಲ್ಲಿ ಭಾರೀ ಮಳೆ ಗಾಳಿಗೆ ಮಾಕುಟ್ಟ ರಸ್ತೆಯ ಉದ್ದಕ್ಕೂ ಸುಮಾರು 25ಕ್ಕೂ ಅಧಿಕ ಮರಗಳು ಉರುಳಿವೆ. ರಸ್ತೆಯಲ್ಲಿ ವಾಹನ ಸಂಚಾರವಿದ್ದಿದ್ದರೆ ಹಲವು ಜೀವಹಾನಿಗೆ ಇದೂ ಕಾರಣವಾಗುತ್ತಿತ್ತು. ಈ ಬಾರಿ ಬ್ರಹ್ಮಗಿರಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ಕೇಶವ್‌ ಅವರ ನೇತೃತ್ವದಲ್ಲಿ ಸುಮಾರು 12 ಮಂದಿ, ಮಾಕುಟ್ಟ ಮೀಸಲು ಅರಣ್ಯ ವಲಯಾರಣ್ಯಾಧಿಕಾರಿ ಸುಹಾನ ಹರೀಶ್‌ ನೇತೃತ್ವದಲ್ಲಿ 8 ಮಂದಿ ಅರಣ್ಯ ಸಿಬಂದಿಗು ರಸ್ತೆಯ ಉದ್ದಕ್ಕೂ ಬಿದ್ದಿದ್ದ ಮರಗಳನ್ನು ತೆರವು ಮಾಡಿದ್ದಾರೆ. ಆ.12 ರಂದು ಕೂಡಾ ಮಾಕುಟ್ಟ ರಸ್ತೆಯ ಮೇಲೆ ಬಿದ್ದ ಹಲವು ಸಣ್ಣ ಪುಟ್ಟ ಮರಗಳು, ಬಿದಿರು ಮೆಳೆಯನ್ನು ತೆರವುಗೊಳಿಸಲಾಗಿದೆ.

ಎರಡು ಮರಕೊಯ್ಯುವ ಯಂತ್ರ ಮಾಕುಟ್ಟ ಅರಣ್ಯ ವಲಯದ ಕಚೇರಿಯಲ್ಲಿದ್ದು ಅಂತರರಾಜ್ಯ ಹೆದ್ದಾರಿಯುದ್ದಕ್ಕೂ ಬೀಳುತ್ತಿರುವ ಮರಗಳನ್ನು ತೆರವು ಮಾಡುವ ಕಾರ್ಯಾಚರಣೆ ನಿರಂತರವಾಗಿ ನಡೆದಿದೆ. ಕಳೆದ ವರ್ಷ ಮಾಕುಟ್ಟ ಅರಣ್ಯದ ಮೇಲೆ ಸುಮಾರು 199 ಇಂಚಿಗೂ ಅಧಿಕ ಮಳೆ ದಾಖಲಾಗಿತ್ತು. ಕಳೆದ ವರ್ಷ ಆಗಸ್ಟ್‌ 10 ರವರೆಗೆ ಸುಮಾರು 83.52 ಇಂಚು ಮಳೆ ದಾಖಲಾಗಿತ್ತು. ಈ ಬಾರಿಯೂ ಮಾಕುಟ್ಟದ ಮೇಲೆ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚು ಕಮ್ಮಿ 85 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಕಳೆದ ಬಾರಿಗಿಂತಲೂ ಅಧಿಕ ಮಳೆಯಾಗಿರುವುದು ಗೋಚರಿಸಿದೆ.
ಒಟ್ಟಿನಲ್ಲಿ ಕಾಕತಾಳೀಯ ಎಂಬಂತೆ ಮಾಕುಟ್ಟ ರಸ್ತೆಯ ಇಬ್ಭಾಗ ಬರೆಕುಸಿತ, ಬೆಟ್ಟಕುಸಿತ, ರಸ್ತೆ ಕುಸಿತ ಜಲಸ್ಫೋಟದ ನಂತರವೇ ಜಿಲ್ಲೆಯ ಇತರೆಡೆ ಜಲಪ್ರಳಯ ಸಂಭವಿಸುತ್ತಿರುವದು ದುರಂತ. ಕೇರಳ ಮಾದರಿಯ ರಸ್ತೆ ಇಬ್ಬದಿ ಗುಣಮಟ್ಟದ ತಡೆಗೋಡೆ ಕಾಮಗಾರಿ ಇಲ್ಲಿ ಅಗತ್ಯವಾಗಿದೆ.ಮಾಕುಟ್ಟ ವ್ಯಾಪ್ತಿಗೆ ಕೇರಳದಿಂದ ವಿದ್ಯುತ್‌ ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನ ಮಾತ್ರ ವಿದ್ಯುತ್‌ ಕಡಿತ ಉಂಟಾಗಿದೆ. ಇಂದು ವಿದ್ಯುತ್‌ ಸರಬರಾಜು ಎಂದಿನಂತೆ ಇರುವುದಾಗಿ ಮಾಕುಟ್ಟ ವ್ಯಾಪ್ತಿಯ ಬೇಟೋಳಿ ಗ್ರಾ.ಪಂ.ಸದಸ್ಯ ಉಮ್ಮರ್‌ ತಿಳಿಸಿದ್ದಾರೆ. ಜಿಲ್ಲೆಯ ನೀರು ಕೇರಳದ ತೊಟ್ಟಿಪಾಲ, ಪೆರಟ್ಟ, ವಳ್ಳಿತೋಡು ಭಾಗದಲ್ಲಿಯೂ ಹರಿಯುತ್ತಿದ್ದು ಕಳೆದ 80 ವರ್ಷದ ಅವಧಿಯಲ್ಲಿ ಕಂಡು ಕೇಳರಿಯದ ಪ್ರವಾಹ ಈ ಭಾಗದಲ್ಲಿಯೂ ಉಂಟಾಗಿದೆ.

ವಾಹನ ಸಾಂದ್ರತೆ
ಸಾಧಾರಣವಾಗಿ ಓಣಂ, ರಂಜಾನ್‌ ಮತ್ತು ಬಕ್ರೀದ್‌ ಸಂದರ್ಭದಲ್ಲಿ ಕೇರಳ-ಕೊಡಗು ಮಾರ್ಗದಲ್ಲಿ ಅಧಿಕ ವಾಹನ ಸಾಂದ್ರತೆ ಕಂಡು ಬರುತ್ತದೆ. ಈ ಬಾರಿ ರಸ್ತೆ ಕಾಮಗಾರಿ, ತಡೆಗೋಡೆ ಕಾಮಗಾರಿ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ನೆರೆಯ ಕೇರಳಕ್ಕೆ ಕೊಡಗಿನ ಮಾಕುಟ್ಟ ಹಾಗೂ ಮಾನಂದವಾಡಿಯ ಮಾರ್ಗದಲ್ಲಿ ಬಸ್‌ ಸಂಚಾರ ರದ್ದು ಮಾಡಲಾಗಿದೆ. ಲಘು ವಾಹನಗಳ ಓಡಾಟ ಮಾತ್ರ ಗೋಣಿಕೊಪ್ಪಲು-ಕುಟ್ಟ ನಡುವಣ ಮಾರ್ಗದಲ್ಲಿ ಕಂಡು ಬಂದಿದೆ. ಮಾಕುಟ್ಟ ರಸ್ತೆ ವರ್ಷದಿಂದ ವರ್ಷಕ್ಕೆ ಜಲಸ್ಫೋಟದಿಂದಾಗಿ ಅಪಾಯಕಾರಿಯಾಗಿ ಗೋಚರಿಸತೊಡಗಿದೆ.

ಇಲ್ಲಿ ಗುಣಮಟ್ಟದ ಕಾಮಗಾರಿಯ ಅಗತ್ಯವಿದೆ.ಲೋಕೋಪಯೋಗಿ ಇಲಾಖೆ ಕೈಗೊಂಡ ದುರಸ್ತಿ ಕಾಮಗಾರಿಯ ಲೋಪದಿಂದಾಗಿ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ರಸ್ತೆ ಇಬ್ಭಾಗ ವಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.