ವಾಹನಗಳ ಬ್ಯಾಟರಿ ಕಳ್ಳತನ: ನಾಲ್ವರ ಬಂಧನ
Team Udayavani, Jul 1, 2019, 11:00 AM IST
ಮಡಿಕೇರಿ: ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ತಂಡವೊಂದನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರದ ಇಂದಿರಾ ಬಡಾವಣೆ ನಿವಾಸಿ ಎಂ.ಎಸ್. ತೌಸೀಫ್ (19) ಬಾಪೂಜಿ ಬಡಾವಣೆ ನಿವಾಸಿ ಸಮೀರ್(19), ಇಂದಿರಾ ಬಡಾವಣೆಯ ಮಹಮ್ಮದ್ ಬಶೀರ್ (19) ಹಾಗೂ ಮಾರ್ಕೆಟ್ ರಸ್ತೆಯ ಗುಜರಿ ವ್ಯಾಪಾರಿ ಎಂ.ಗುಣಶೇಖರ (51) ಬಂಧಿತರು.
ನಾಲ್ಕು ಪ್ರಕರಣ
ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಕಳವು ಮಾಡಿದ್ದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಬಂಧಿತರಿಂದ ವಶಪಡಿಸಿ ಕೊಳ್ಳಲಾಗಿದೆ. ಕುಶಾಲನಗರದ ಬೈಚನಹಳ್ಳಿ ನಿವಾಸಿ ಬಿ.ಎಸ್. ಬಾಬು ಅವರಿಗೆ ಸೇರಿದ ಲಾರಿಯಿಂದ ಜೂ.24ರಂದು ಬ್ಯಾಟರಿ ಕಳವು ಮಾಡಿದ್ದ ಆರೋಪಿಗಳು, ಅದೇ ದಿನ ಕರಿಯಪ್ಪ ಬಡಾವಣೆಯ ನಿವಾಸಿ ಸುರೇಶ್ ಎಂಬವರಿಗೆ ಸೇರಿದ ಬ್ಯಾಟರಿ, ಜೂ. 20ರಂದು ರಾತ್ರಿ ಬೈಚನಹಳ್ಳಿಯ ನಿವಾಸಿ ಚೇತನ್ ಅವರ ಟಿಪ್ಪರ್ನ ಬ್ಯಾಟರಿ ಮತ್ತು ಅದೇ ದಿನ ರಾತ್ರಿ ರಥಬೀದಿ ನಿವಾಸಿ ಗಣೇಶ್ ಅವ ರ ಲಾರಿಯ ಬ್ಯಾಟರಿಗಳನ್ನು ಕಳವು ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಪ್ರತ್ಯೇಕ ತಂಡ ರಚನೆ
ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಪ್ರಕರಣದ ತನಿಖೆಗಾಗಿ ಎಸ್ಪಿ ಡಾ| ಸುಮನ್ ಡಿ. ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ ಸೊಮವಾರಪೇಟೆ ಡಿವೈಎಸ್ಪಿ ಪಿ. ಕೆ. ಮುರಳೀಧರ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಕುಶಾಲ ನಗರ ಸಿಐ ಬಿ.ಎಸ್.ದಿನೇಶ್ಕುಮಾರ್, ಎಸ್ಐಗಳಾದ ಪಿ. ಜಗದೀಶ್, ಎಂ.ಕೆ. ಸದಾಶಿವ (ಅಪರಾಧ) ಮತ್ತು ಅಪರಾಧ ಪತ್ತೆದಳದ ಸಿಬಂದಿ ವರ್ಗದ ಎಂ.ರವೀಂದ್ರ, ಅರುಣ್ಕುಮಾರ್, ಸುಧೀಶ್ಕುಮಾರ್, ಸುನಿಲ್, ಚಾಲಕ ಪ್ರವೀಣ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್