ಎನ್ಡಿಎ ಶಕ್ತಿ ಕ್ಷೀಣ: ವೀರಪ್ಪಮೊಯ್ಲಿ
Team Udayavani, Oct 10, 2018, 10:12 AM IST
ಮಡಿಕೇರಿ: ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಬಲಯುತವಾಗಿದ್ದು, ಚುನಾವಣೆ ಸಂದರ್ಭ ಎನ್ ಡಿಎಯ ಶಕ್ತಿ ಮತ್ತಷ್ಟು ಕ್ಷೀಣವಾಗಲಿದೆ ಎಂದು
ಸಂಸದೀಯ ಹಣಕಾಸು ಸಮಿತಿ ಅಧ್ಯಕ್ಷ ಎಂ. ವೀರಪ್ಪಮೊಯ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೃತೀಯ ರಂಗಗಳು ನಿರ್ಣಾಯಕ
ಧೋರಣೆ ತಾಳಿಲ್ಲ.
ಮುಂಬರುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ನಡೆಯಲಿದೆ. ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಸೀಟು ಹಂಚಿಕೆ ಮಾಡಲಾಗುವುದು ಎಂದರು. ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಕುರಿತು ಸಮಗ್ರ
ಮಾಹಿತಿ ಪಡೆಯಲಾಗಿದ್ದು, ಕೇಂದ್ರ ಸರಕಾರ ಜಿಲ್ಲೆಗೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಎಲ್ಲ ನಷ್ಟವನ್ನು ತುಂಬಲು ರಾಜ್ಯ ಸರಕಾರದಿಂದಷ್ಟೇ ಸಾಧ್ಯವಿಲ್ಲ. ಕೇಂದ್ರವು ಎನ್ಡಿಆರ್ಎಫ್ ಪರಿಹಾರ ಕಾರ್ಯವನ್ನು ಕೈಗೊಂಡರೆ ಮಾತ್ರ ಸಾಲದು, ವಿಶೇಷ ಪ್ಯಾಕೇಜನ್ನು ಘೋಷಿಸುವ ಅಗತ್ಯವಿದೆ. ಮತ್ತೂಂದು ಜಿಯಾಲಜಿಕಲ್ ಸರ್ವೆಯ ಅನಿವಾರ್ಯತೆಯೂ ಇದೆ ಎಂದರು.
ಸಂಸದರ ನಿಧಿಯಿಂದ 10 ಲಕ್ಷ ರೂ. ಮತ್ತು ತಮ್ಮ ಒಂದು ತಿಂಗಳ ವೇತನ ಕೊಡಗಿಗೆ ನೀಡುವುದಾಗಿ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ