ಬಡತನದ ನೋವು ನರಳಾಟದಿಂದ ಸಾಧನೆ ಗುರಿಯತ್ತ ಸಾಗುವ ಮಾರ್ಗ ಸುಗಮ


Team Udayavani, Feb 4, 2020, 5:29 AM IST

01-GKL-01

ಗೋಣಿಕೊಪ್ಪಲು: ಬಡತನದ ನೋವಿನ ನರಳಾಟದಿಂದ ಮಾತ್ರ ಸಾಧನೆಯ ಗುರಿಯತ್ತ ಸಾಗುವ ಮಾರ್ಗ ಸುಗಮವಾಗುತ್ತದೆ. ಶ್ರೀಮಂತಿಕೆ ನಮ್ಮ ಪ್ರತಿಭೆಗಳನ್ನೇ ಚಿವುಟುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಅಂತರ್‌ರಾಷ್ಟ್ರೀಯ ಹಾಕಿ ಕ್ರೀಡಾಪಟು ಮೊಳ್ಳೇರ .ಪಿ. ಗಣೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕೋಣನಕಟ್ಟೆ ಕಲ್ಚರಲ್‌ ಅಂಡ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ ವತಿಯಿಂದ ಆಯೋಜಿಸಿದ ಪದ್ಮಶ್ರೀ ಪುರಸ್ಕೃತ ಎಂ.ಪಿ ಗಣೇಶ್‌ ದಂಪತಿಯ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.ಶ್ರೀಮಂತಿಕೆ ಪ್ರತಿಭೆಗಳಿಗೆ ಕಪ್ಪು ಚುಕ್ಕಿ ಇದ್ದಂತೆ, ಪ್ರತಿಭೆಗಳು ಅರಳಲು ಸೂಕ್ತ ಹಾದಿ ಲಕ್ಷ್ಮೀ ಕೃಪಕಟಾಕ್ಷದಿಂದ ದೂರ ಉಳಿಯುವುದು. ಹೆಚ್ಚು ಆಸ್ತಿ, ಹಣ ಇಲ್ಲದೇ ಇರುವುದೇ ನನ್ನ ಈ ಸಾಧನೆಗೆ ಸುಗಮ ಹಾದಿಯಾಗಿದೆ. ಕಾಫಿ ತೋಟಗಳನ್ನು ಹೊಂದಿ ಶ್ರೀಮಂತ ಜೀವನ ನನ್ನದಾಗಿದ್ದರೆ ಕ್ರೀಡೆಯಲ್ಲಿ ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಅರ್ಜಿ ಹಾಕದಿದ್ದರೂ ನನ್ನ ಪ್ರತಿಭೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶೀ ಗೌರವ ಪುರಸ್ಕಾರ ನೀಡಿದೆ. ಇದು ನನ್ನ ಗುರಿಯ ಹಾದಿಯತ್ತ ಬೆಳಕು ನೀಡಿದ ಮಹನೀಯರಿಗೆ ಅರ್ಪಣೆ ಎಂದು ‌ ಸಂತಸದ ಕ್ಷಣವನ್ನು ಹಂಚಿಕೊಂಡರು. ನನ್ನ ಗುರುಗಳಾದ ಮುಂಡುಮಾಡ ರಾಮು ಅವರ ಮಾರ್ಗದರ್ಶನವೇ ನನ್ನ ಸಾಧನೆಯ ಬೆಳಕು ಎಂದು ಅವರು ಹೇಳಿದರು.

ಬಹುತೇಕ ಸಾಧನೆಗಳನ್ನು ಮಾಡಿ ಕ್ರೀಡೆಯಲ್ಲಿ ಗುರುತಿಸಿಕೊಂಡ ನನ್ನನ್ನು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕೋಣನಕಟ್ಟೆಯ ಕಲ್ಚರಲ್‌ ಅಂಡ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ನ ಸದಸ್ಯರು ಸನ್ಮಾನಿಸಿ ಗೌರವಿಸಿದ್ದಾರೆ. ಇವರ ಈ ಕಾರ್ಯಕ್ಕೆ ಬಾವುಕನಾಗಿದ್ದೇನೆ. ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತಗೊಂಡಗಲು ಇಷ್ಟು ಸಂತೋಷ ಮತ್ತು ಬಾವುಕನಾಗಿರಲಿಲ್ಲ. ಕ್ರೀಡೆಯಲ್ಲಿ ನನ್ನ ಸಾಧನೆಯನ್ನು ಕೊಡಗಿನ ಜನತೆ ಗುರುತಿಸಿದ್ದರೂ ಈ ದೀರ್ಘ‌ ಪ್ರಯಾಣದಲ್ಲಿ ಒಮ್ಮೆಯೂ ನನ್ನನ್ನು ಯಾವುದೇ ಸಂಘ ಸಂಸ್ಥೆಗಳು ಸನ್ಮಾನಿಸಿಲ್ಲ ಎಂದು ದುಃಖದ ಮನದಲ್ಲಿ ತಮ್ಮ ಅಭಿಪ್ರಾಯವನ್ನು ಅನಾವರಣಗೊಳಿಸಿದರು.

ನನ್ನಂತಯೇ ಬಹಳಷ್ಟು ಪ್ರತಿಭೆಗಳು ಕೊಡಗಿನಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದರು. ರಾಷ್ಟ್ರ, ಅಂತರ್‌ರಾಷ್ಟ್ರ ಮಟ್ಟದಲ್ಲೂ ಆಡುವ ಸಾಮಾರ್ಥ್ಯವಿತ್ತು. ಆದರೆ ಕೊಡಗು ಮತ್ತು ಕರ್ನಾಟಕ ರಾಜ್ಯದಿಂದ ಹೊರಗೆ ಆಡುವ ಅಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಬಹಳಷ್ಟು ಪ್ರತಿಭೆಗಳು ಅವಕಾಶ ವಂಚಿತರಾಗಿದ್ದಾರೆ ಎಂದು ಹೇಳಿದ ಅವರು ತನ್ನ ಜೀವನ ಯಾತ್ರೆಯಲ್ಲಿನ ವಿವಿಧ ಅನುಭವಗಳನ್ನು ಹಂಚಿಕೊಂಡು ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅಮೂಲ್ಯ ಕ್ಷಣಗಳನ್ನು ನೆನೆದು ಬಾವುಕರಾದ ಅವರು ಸೇನೆಯ ಸೇವೆಯನ್ನು ತ್ಯಜಿಸಿ ಬಂದ ನಂತರ ಅರ್ಜುನ್‌ ಪ್ರಶಸ್ತಿ ಪುರಸ್ಕೃತರಾಗಿದ್ದರೂ ಉದ್ಯೋಗವಿಲ್ಲದೇ ಅಲೆದಾಡಿದ ಕ್ಷಣಗಳಲ್ಲಿನ ನೋವನ್ನು ಜನರ ಮುಂದೆ ತೆರೆದಿಟ್ಟರು. ನನ್ನ ಈ ಎಲ್ಲಾ ಸಾಧನೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನನ್ನ ಪತ್ನಿ ಪ್ರೇಮ ಅವರ ತ್ಯಾಗವನ್ನು ಸ್ಮರಿಸಿಕೊಂಡರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಚೆಪ್ಪುಡೀರ ಅರುಣ್‌ ಮಾಚಯ್ಯ ಮಾತನಾಡಿ ಕೊಡಗಿನ ಕ್ರೀಡಾಪಟುಗೆ ಪದ್ಮಶ್ರೀ ಗೌರವ ನೀಡಿರುವುದು ನಮ್ಮ ನಾಡಿಗೆ ಹೆಮ್ಮೆ. ಇಂತಹ ಮಹನೀಯರೊಂದಿಗೆ ನಾವು ಜೀವಂತ ಸಾಕ್ಷಿಯಾಗಿರುವುದು ನಮ್ಮ ಅದೃಷ್ಟ ಎಂದು ಶ್ಲಾಘೀಸಿದ ಅವರು ಮುಂದಿನ ದಿನಗಳಲ್ಲಿ ಎಂ.ಪಿ. ಗಣೇಶ್‌ ಅವರು ರಾಜ್ಯ ಸಭಾ ಸದಸ್ಯರಗುವ ಎಲ್ಲಾ ಲಕ್ಷಣಗಳು ಇವೆ. ಇದಕ್ಕೆ ಕೊಡಗಿನ ಕುಲದೇವರ ಮತ್ತು ಹಿರಿಯರ ಆಶೀರ್ವಾದ ಇರಲಿ ಎಂದು ಹೇಳಿದರು.

ಚೆಪ್ಪುಡೀರ ಕುಶಾಲಪ್ಪ ಬಿನ್ನವತ್ತಾಲೆ ಅರ್ಪಿಸಿದರು. ಪುಚ್ಚಿಮಾಡ ಪೂಣಚ್ಚ, ವಕೀಲ ಅಜ್ಜಿನಿಕಂಡ ಭೀಮಯ್ಯ, ಕುಳುವಂಡ.ಪಿ. ಸುಬ್ರಮಣಿ, ಸಿ.ಪಿ. ಅಯ್ಯಪ್ಪ ಇವರುಗಳು ಎಂ.ಪಿ. ಗಣೇಶ್‌ ಅವರ ಸಾಧನೆಯ ಬಗ್ಗೆ ಸಭೆಯಲ್ಲಿ ಮಾತನಾಡಿದರು. ಪುಚ್ಚಿಮಾಡ ಆಶೋಕ್‌ ಸನ್ಮಾನ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸಿದರು.

ಇದೇ ಸಂದರ್ಭ ಎಂ.ಪಿ ಗಣೇಶ್‌ ಅವರೊಂದಿಗೆ ಅವರ ಪತ್ನಿ ಪ್ರೇಮಾ ಮತ್ತು ಗುರು ರಾಮು ಅವರನ್ನು ಸಮ್ಮಾನಿಸಲಾಯಿತು.

ಕಲ್ಚರಲ್‌ ಅಂಡ್‌ ರಿಕ್ರಿಯೇಷನ್‌ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಕಳ್ಳಿಚಂಡ ಕಾಶಿ, ಅಧ್ಯಕ್ಷ ಅಜ್ಜಿನಿಕಂಡ ತಿಮ್ಮಯ್ಯ, ಸದಸ್ಯರು ಹಾಗೂ ಕುಟುಂಬಸ್ಥರು ಹಾಜರಿದ್ದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.