ಸಂತ್ರಸ್ತರಿಗೆ ಪ್ರಿಯಾಂಕ ಉಪೇಂದ್ರ ಸಾಂತ್ವನ
Team Udayavani, Aug 25, 2018, 6:05 AM IST
ಮಡಿಕೇರಿ: ಖ್ಯಾತ ನಿರ್ದೇಶಕ ಹಾಗೂ ನಟ ಉಪೇಂದ್ರ ಅವರ ಪತ್ನಿ, ನಟಿ ಪ್ರಿಯಾಂಕ ಉಪೇಂದ್ರ ಅವರು ಸುಂಟಿಕೊಪ್ಪ ಭಾಗದ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು. ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಉಪಾಹಾರ ವಿತರಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬಿದರು. ಹೊದಿಕೆ, ಔಷಧಿ ಮತ್ತು ಮಕ್ಕಳಿಗೆ ಬಟ್ಟೆಗಳನ್ನು ಹಂಚಿದ ಪ್ರಿಯಾಂಕ, ಹೊಸ ಬದುಕು ಕಂಡುಕೊಳ್ಳಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಪ್ರಜಾಕೀಯ ಪಕ್ಷದ ಕೊಡಗು ಜಿಲ್ಲಾ ಪ್ರಮುಖ ಬಡ್ಡನ ಚಿರಾಗ್ ಸೋಮಣ್ಣ ಈ ಸಂದರ್ಭ ಹಾಜರಿದ್ದರು.