ರಸ್ತೆ ಅಭಿವೃದ್ಧಿ, ಅಂಗನವಾಡಿ ಕಟ್ಟಡ ಕಾಮಗಾರಿಗೆ ಚಾಲನೆ
Team Udayavani, Feb 15, 2020, 7:10 AM IST
ಗೋಣಿಕೊಪ್ಪಲು: ದೇವರಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ರೂ. 1 ಕೋಟಿ 2 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಮತ್ತು ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಹೆಬ್ಟಾಲೆ ಪಟ್ಟಣ ರಸ್ತೆ, ಹೆಬ್ಟಾಲೆ ಅಯ್ಯಪ್ಪ ಭದ್ರಕಾಳಿ ದೇವಸ್ಥಾನ ಸಂಪರ್ಕ ರಸ್ತೆ ಮತ್ತು ಕಮಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. 18 ಲಕ್ಷ ರೂ. ಅನುದಾನದಲ್ಲಿ ಹೆಬ್ಟಾಲೆ ಪಟ್ಟಣ ರಸ್ತೆ, 5 ಲಕ್ಷ ರೂ. ಕನ್ನಂಬಾಡಿ ಕಳ್ಳಿಚಂಡ ರಸ್ತೆ, 30 ಲಕ್ಷ ರೂ. ಕಮಟೆ ರಸ್ತೆ, 5 ಲಕ್ಷ ಭದ್ರಕಾಳಿ ದೇವಸ್ಥಾನ ರಸ್ತೆ, 4 ಲಕ್ಷ ಅಯ್ಯಪ್ಪ ದೇವಸ್ಥಾನ ಸಂಪರ್ಕ ರಸ್ತೆ, ಐದು ಲಕ್ಷ ರೂ. ನೆಹರೂ ಕಾಲೋನಿ ರಸ್ತೆ ಅಭಿವೃದ್ದಿ, 5 ಲಕ್ಷ ರೂ. ಗಿರಿಜನ ರೇಷ್ಮೆ ಹಡ್ಲು ಸಂಪರ್ಕ ರಸ್ತೆ, 5 ಲಕ್ಷ ರೂ. ಗಿರಿಜನ ಕಾಲೋನಿ, 5 ಲಕ್ಷ ರೂ. ಪರಿಶಿಷ್ಟ ಪಂಗಡ ಅಕ್ಕಿಮಾಳ ಮುಖ್ಯ ರಸ್ತೆ, ಕಾರೆಹಡ್ಲು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ. , ದೇವಮಚ್ಚಿ ಕಾರೆಹಡ್ಲು ಕಾಂಕ್ರೀಟ್ ರಸ್ತೆಗೆ 5 ಲಕ್ಷ ರೂ., ರೇಷ್ಮೆಹಡ್ಲುವಿಗೆ ಹೋಗುವ ಸಂಪರ್ಕ ರಸ್ತೆ 5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಚಾಲನೆ ನೀಡಿದರು.
ಬಿಜೆಪಿ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪ. ಪಂ. ಮಾಜಿ ಅಧ್ಯಕ್ಷ ಇ.ಸಿ. ಜೀವನ್, ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಎನ್.ಎನ್. ಅನೂಪ್ಕುಮಾರ್, ದೇವರಪುರ ಗ್ರಾ.ಪಂ. ಸದಸ್ಯರಾದ ವಾಸು, ಕಿರಣ್ಕುಮಾರ್, ಹಿರಿಯರಾದ ಚಕ್ಕೇರ ಸೊಮಯ್ಯ, ದೇವರಪುರ ಗ್ರಾಮದ ಬಿಜೆಪಿ ಪ್ರಮುಖರಾದ ಮನೆಯಪಂಡ ಮಹೇಶ್, ಕಾಣತಂಡ ನವೀನ್, ಮನೆಯಪಂಡ ಬಿಪಿನ್, ಮನೆಯಪಂಡ ಬೋಪಣ್ಣ, ಮನೆಯಪಂಡ ಸಚಿನ್, ನಿರಂಜನ್, ರಾಜ್ಕುಮಾರ್, ಮಹೇಶ್, ಚಕ್ಕೇರ ತಮ್ಮಯ್ಯ, ಬೆಳ್ಳಿಕಟ್ಟಿ, ತಿತಿಮತಿ ಗೋವಿಂದ, ಎಂಜಿನಿಯರ್ಗಳಾದ ಮಹಾದೇವ್, ಸಣ್ಣುವಂಡ ನವೀನ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ನರಸಿಂಹ ಉಪಸ್ಥಿತರಿದ್ದರು.