ಶ್ರೀ ಕೋಟೆ ಮಹಾಗಣಪತಿ ಚಿನ್ನದ ಕಿರೀಟ ಸಮರ್ಪಣೆ ವಾರ್ಷಿಕೋತ್ಸವ
Team Udayavani, May 22, 2019, 6:10 AM IST
ಮಡಿಕೇರಿ: ಮಡಿಕೇರಿ ಶ್ರೀ ಕೋಟೆ ಮಹಾಗಣಪತಿ ದೇವರಿಗೆ ಚಿನ್ನದ ಕಿರೀಟ ಸಮರ್ಪಣೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಮೇ 22 ರಂದು ಬುಧವಾರ ವಿವಿಧ ದೈವಿಕ ಕೈಂಕರ್ಯಹಮ್ಮಿಕೊಳ್ಳಲಾಗಿದೆ.
ಅಂದು ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಮುಂಜಾನೆ 6.30ಕ್ಕೆ ದೇವರಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಕೋಮುನಾರಿ ಕೇಳ ಅಭಿಷೇಕ, ದ್ವಾದಶಾ ನಾರಿಕೇಳ ಗಣಯಾಗ, 10 ಸಹಸ್ರ ಸಂಖ್ಯೆ ದುರ್ವಾಂಕುರ ಸಮರ್ಪಣೆ, 1 ಸಹಸ್ರ ಸಂಖ್ಯೆ ಎಕ್ಕದ ಹೂವಿನ ಸಮರ್ಪಣೆ, 1 ಸಹಸ್ರ ಮೋದಕ ಸಮರ್ಪಣೆ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾನೈವೇದ್ಯ , 12.30 ಕ್ಕೆ ಮಂಗಳಾರತಿ ನಡೆಯಲಿದೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಲಿದೆ ಎಂದು ಶ್ರೀಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಪ್ರಕಟಣೆ ತಿಳಿಸಿದೆ.