ಬಸವನ ಹುಳುಗಳ ಉಪಟಳ: ರೈತರಿಗೆ ಸಲಹೆ


Team Udayavani, Jul 31, 2017, 7:10 AM IST

Z-RAITHA-SALAHE-2.jpg

ಮಡಿಕೇರಿ: ಬಸವನ ಹುಳು ಎಂದರೆ ಹೊಸದೇನು ಅಲ್ಲ. ಕೊಡಗಿನಂಥ ಪರಿಸರದಲ್ಲಿ ಮಳೆಗಾಲದ ತೇವಾಂಶವಿರುವ ಜಮೀನಿನಲ್ಲಿ ಸ್ವಾಭಾವಿಕವಾಗಿ ಕಾಣುವಂತಹ ಒಂದು ಹುಳು. 

ಇದು ವೈಜ್ಞಾನಿಕವಾಗಿ ಅಚಾಟಿನಿಡೇ ಕುಟುಂಬಕೆ ಸೇರಿದ್ದು ಅಚಾಟಿನಾ ನಾಮಾಂಕಿತದೊಂದಿಗೆ ಸಾಮಾನ್ಯವಾಗಿ ಜೈಂಟ್‌ ಆಫ್ರಿಕನ್‌ ಸ್ನೆ„ಲ್‌ ಎಂದು ಕರೆಯುತ್ತಾರೆ. ಹಿಂದೆ ಅವುಗಳಿಂದ ಅಂಥ ಹಾನಿಯ ಅನುಭವ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪೂರಕ ವಾತಾವರಣದಿಂದ ಅವುಗಳ ಸಂತಾನೋತ್ಪತ್ತಿ ಹೆಚ್ಚಾಗಿ ರೈತ ರಲ್ಲಿ ಆತಂಕ ಮೂಡಿಸಿದೆ. 

ಇದು ಒಂದು ಸ್ವಾಭಾವಿಕ ಕ್ರಿಯೆಯಿಂದ ಬರುವ ಹುಳವಾಗಿದ್ದು ಇದರ ಚಟುವಟಿಕೆ ಮಳೆಗಾಲದಿಂದ ಪ್ರಾರಂಭವಾಗಿ ಚಳಿಗಾಲದವರೆಗೂ ಇರುತ್ತದೆ. ಮಳೆಗಾಲದಲ್ಲಿ ಗಿಡ, ಎಲೆ, ಕಾಂಡಗಳು ತುಂಬಾ ಮೃದುವಾಗಿದ್ದು ಈ ಹುಳುಗಳು ಅವುಗಳ ಮೃದು ಭಾಗದಲ್ಲಿರುವ ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಗಿಡಗಳಲ್ಲಿ ಆಹಾರ ತಯಾರಿಕೆಗೆ ಬೇಕಾದ ಕ್ಲೋರೋಫಿಲ್‌ ಅಂಶ ಕಡಿಮೆಯಾಗಿ ಗಿಡಗಳ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ. 

ಅಧುನಿಕ, ವೈಜ್ಞಾನಿಕ  ತೋಟಗಾರಿಕೆ ಪದ್ಧತಿ ಅಳವಡಿಕೆ ಸಂರ್ದರ್ಭದಲ್ಲಿ ಕೃಷಿ ಪರಿಕರಗಳ ಬೆಲೆ ಹೆಚ್ಚಾಗಿರುವುದರಿಂದ ಬೆಳೆಯ  ಬೆಳವಣಿಗೆಯ ಖರ್ಚು  ಅಧಿಕವಾಗುವ ಸಂಭವವಿದ್ದು ಎಲ್ಲ ವಿಧಗಳಲ್ಲೂ  ವ್ಯವಹರಿಸಿ,
ವಿಚಾರಿಸಿ, ಚರ್ಚಿಸಿ, ಸಾಧ್ಯ ವಾದ ಮಟ್ಟಿಗೆ ಖರ್ಚು ಕಡಿಮೆ ಮಾಡಿ ಲಾಭ ಮಾಡುವುದು ತೋಟಗಾರಿಕೆ ಇಲಾಖೆಯ ಕರ್ತವ್ಯಗಳಲ್ಲೊಂದು.

ಕರ್ನಾಟಕ ರಾಜ್ಯಾದ್ಯಂತ ಈ ವರ್ಷದ ಜೂನ್‌ಜುಲೈ (ಮೊದಲನೇ ಎರಡು ವಾರ) ತಿಂಗಳ ಹವಾಮಾನ ಗಮನಿಸಿದಾಗ ಮೋಡ ಕವಿದ ವಾತಾವರಣವಿದ್ದು ಮನುಷ್ಯನಿಂದ ಹಿಡಿದು ಗಿಡಗಳವರೆಗೂ ಹಲವು ತರಹದ ರೋಗ ಹಾಗೂ ಕೀಟಗಳ ಅಭಿವೃದ್ಧಿಗೆ ಹೇಳಿಮಾಡಿಸಿದ ಹಾಗಿತ್ತು. ಸಾಮಾನ್ಯವಾಗಿ ಕೊಡಗು ಜಿಲ್ಲೆಯ ಹವಾಮಾನ ಈ ಎರಡು ತಿಂಗಳಲ್ಲಿ ಹೀಗೆಯೇ ಇರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆ ಪ್ರಯುಕ್ತ ಕೊಡಗಿನ ಹವಾಮಾನ ಆಧರಿಸಿ  ಬಸವನ ಹುಳುವಿನ ಭಾದೆ ನಿಯಂತ್ರಿಸಲು ಈ ಕೆಳಗಿನ ಹತೋಟಿ ಕ್ರಮಗಳನ್ನು ತಿಳಿಸಲಾಗಿದೆ.  

ಹತೋಟಿ ಕ್ರಮಗಳು: ಸರಿಯಾದ ಸಮಯಕ್ಕೆ ನೆರಳು ನಿಂಯತ್ರಣ ಮಾಡುವುದರಿಂದ ಸೂರ್ಯನ ಕಿರಣಗಳು ಒಳಹೊಕ್ಕು ರೋಗ ಹಾಗು ಕೀಟಗಳನ್ನು ನಿಂಯತ್ರಿಸುತ್ತದೆ. ಇವುಗಳಲ್ಲಿ ಕಂಬಳಿ ಹುಳು, ಬಸವನ ಹುಳು ಪ್ರಮುಖವಾಗಿವೆ. 

ಕೈಯಿಂದ ತೆಗೆಯುವುದು ಹುಳಗಳನ್ನು ಹಾಗೂ ಅದರ ಚಿಪ್ಪುಗಳನ್ನು ಗುರುತಿಸಿ ಕೈಯಿಂದ ತೆಗೆದು ನಾಶ
ಪಡಿಸಬೇಕು. ಗೋಣಿಚೀಲಗಳನ್ನು ನೀರಿನಲ್ಲಿ ನೆನೆಸಿ ಅದನ್ನ ಕೀಟ ಬಾಧೆಯಿರುವ ತೋಟದ ವಿವಿಧ ಭಾಗ ಗಳಲ್ಲಿ ಹರಡಬೇಕು, ಪ್ರೌಢಾವಸ್ಥೆಯಲ್ಲಿರುವ ಕೀಟಗಳು ತೇವಾಂಶವನ್ನು ಇಷ್ಟಪಡುವುದರಿಂದ ತೇವಾಂಶ ಇರುವ ಚೀಲದ ಕೆಳಗೆ ಹೋಗಿ ಸೇರಿಕೊಳ್ಳುತ್ತದೆ. ಅನಂತರ ಅದನ್ನು ತೆಗೆದು ಸುಡಬೇಕು. ಕೆಲವೊಮ್ಮೆ ಬೆಳ್ಳುಳ್ಳಿ ರಸ ಅಥವಾ ಉಪ್ಪನ್ನು ನೀರಿನಲ್ಲಿ ಬೆರೆಸಿ ಸ್ಪ್ರೆà ಮಾಡುವುದರಿಂದ ಮೃದುವಾದ ಹುಳಗಳನ್ನು ನಾಶಪಡಿಸಬಹುದು.

ರಾಸಾಯನಿಕ ಹತೋಟಿ ಕ್ರಮ
ಮೆಟಾಲ್ಡಿಹೈಡ್‌ ಗುಳಿಗೆಗಳನ್ನು ತೋಟದ ವಿವಿಧ ಭಾಗಗಳಲ್ಲಿ ಇಡುವುದರಿಂದ ಹುಳುಗಳು ಅಲ್ಲಿಗೆ ಆಕರ್ಷಿತವಾಗುತ್ತದೆ. ಈ ಗುಳಿಗೆಗಳನ್ನು ಮಾರ್ಚ್‌ ಎಪ್ರಿಲ್‌ ತಿಂಗಳು ಅಥವಾ ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ಅಥವಾ ಮಳೆಗಾಲ ಮುಗಿದ ಕೂಡಲೇ ಬಳಸುವುದರಿಂದ ಪ್ರೌಢಾವಸ್ಥೆಯಲ್ಲಿರುವ ಹುಳಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿಯಾಗುವುದನ್ನು ತಡೆಯಬಹುದು. ಸಮಸ್ಯೆ ಕಡಿಮೆ ಇದ್ದಲಿ ತಾಳ್ಮೆ ವಹಿಸಿದರೆ ಸಮಯ ಹಾಗೂ ವಾತಾವರಣ  ಬದಲಾವಣೆಯಿಂದ ಕೂಡ  ರೋಗ ಹಾಗೂ ಕೀಟಗಳ ನಿಯಂತ್ರಣ ಸಾಧ್ಯ. 

ಸಂಪರ್ಕ ಮಾಹಿತಿ
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ದೂ. ಸಂಖ್ಯೆ: 08272-228432,  ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಮಡಿಕೇರಿ ದೂ: 08272-220555, ಹಾರ್ಟಿ ಕ್ಲಿನಿಕ್‌ (ಮಾಹಿತಿ ಮತ್ತು ಸಲಹಾ ಕೇಂದ್ರ) ದೂ: 08272-220232, ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕರು (ಜಿಪಂ), ಸೋಮವಾರಪೇಟೆ ದೂ: 08276-281364, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಪೊನ್ನಂಪೇಟೆ ದೂ: 08274-249637 ರವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಮಾಹಿತಿ ಮತ್ತು ಸಲಹ ಕೇಂದ್ರದ ವಿಷಯ ತಜ್ಞರು ತಿಳಿಸಿದ್ದಾರೆ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.