ಕನ್ನಡಿಗ ಯೋಧನಿಗೆ ಗುಂಡೇಟು; ಚೇತರಿಕೆ
ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ
Team Udayavani, Jun 9, 2019, 10:15 AM IST
ಮಡಿಕೇರಿ: ಭಾರತೀಯ ಸೇನೆಯ 44ನೇ ರಾಷ್ಟ್ರೀಯ ರೈಫಲ್ಸ್ನಲ್ಲಿ ಸೇವೆ ಸಲ್ಲಿಸುತ್ತಿರುವ ಶೌರ್ಯಚಕ್ರ ಪುರಸ್ಕೃತ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ನಿವಾಸಿ ಎಚ್.ಎನ್. ಮಹೇಶ್ ಅವರಿಗೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡೇಟು ತಗುಲಿದ್ದು, ಪಂಜಾಬಿನ ಚಂಡೀಗಢ ಸೇನಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮೇ 29ರಂದು ಈ ಘಟನೆ ನಡೆದಿದ್ದು ತಡ ವಾಗಿ ಬೆಳಕಿಗೆ ಬಂದಿದೆ. ಜೂ. 6ರಂದು ಪೋಷಕರಿಗೆ ಕರೆ ಮಾಡಿರುವ ಮಹೇಶ್ ಘಟನೆಯ ಬಗ್ಗೆ ಮಾಹಿತಿ ನೀಡಿ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಪೊನ್ನಂಪೇಟೆ ಗಾಂಧಿನಗರದ ನಾಗರಾಜ್ ಮತ್ತು ಲಕ್ಷ್ಮೀ ದಂಪತಿ ಪುತ್ರ ಮಹೇಶ್ 7 ವರ್ಷದ ಹಿಂದೆ ಆರ್ಮಿ ಎಂಜಿನಿಯರಿಂಗ್ ಕಾಪ್ಸ್ìಗೆ ಸೇರಿದ್ದರು. ಬಳಿಕ ಅವರನ್ನು ಜಮ್ಮು ಕಾಶ್ಮೀರದಲ್ಲಿರುವ 44ನೇ ರಾಷ್ಟ್ರೀಯ ರೈಫಲ್ಸ್ಗೆ ನೇಮಕ ಮಾಡಲಾಗಿತ್ತು.
ಉಗ್ರರಿಂದ ಫೈರಿಂಗ್
ಮೇ 29ರಂದು ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಮನೆಯೊಂದರಲ್ಲಿ ನಾಲ್ವರು ಉಗ್ರರು ಆಶ್ರಯ ಪಡೆದಿರುವ ಮಾಹಿತಿ ಕಲೆ ಹಾಕಿದ ರಾಷ್ಟ್ರೀಯ ರೈಫಲ್ಸ್ನ 60 ಮಂದಿ ಯೋಧರು ಮನೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದರು. ಈ ವೇಳೆ ಉಗ್ರರು ಸಿಡಿಸಿದ ಗುಂಡು ಮಹೇಶ್ ಅವರ ಮುಖಕ್ಕೆ ಬಡಿಯಿತು. ಇದೇ ವೇಳೆ ಮಹೇಶ್ ಜತೆಗಿದ್ದ ಯೋಧರು ಉಗ್ರರು ಅವಿತಿದ್ದ ಮನೆಯನ್ನೇ ಸ್ಫೋಟಿಸಿ ನಾಲ್ವರು ಉಗ್ರರನ್ನೂ ಕೊಂದು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ