ಕೊಡಗಿನಲ್ಲಿ ಹುಲಿ ದಾಳಿ ; ಎರಡು ಎಮ್ಮೆಗಳ ಸಾವು, ಜೀವಭಯದಲ್ಲಿ ಗ್ರಾಮಸ್ಥರು
Team Udayavani, Oct 8, 2022, 11:05 AM IST
ಮಡಿಕೇರಿ : ಕೊಡಗಿನಲ್ಲಿ ಹುಲಿ ಉಪಟಳ ಮುಂದುವರಿದಿದ್ದು, ಎರಡು ಎಮ್ಮೆಗಳು ಬಲಿಯಾಗಿವೆ. ವಿರಾಜಪೇಟೆಯ ಹರಿಹರ ಗ್ರಾಮದ ತೀತಿರ ಸದಾ ಬೋಪಯ್ಯ ಅವರಿಗೆ ಸೇರಿದ ಎಮ್ಮೆಗಳ ಮೇಲೆ ಹುಲಿ ದಾಳಿ ಮಾಡಿದೆ. ಎರಡು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ಹಸುವೊಂದು ಹುಲಿ ದಾಳಿಯಿಂದ ಮೃತಪಟ್ಟಿತ್ತು. ಕಳೆದ ತಿಂಗಳು ಸಿದ್ದಾಪುರ ವ್ಯಾಪ್ತಿಯಲ್ಲಿ ಹುಲಿಯೊಂದನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿತ್ತು. ಆದರೆ ಇದೀಗ ಮತ್ತೂಂದು ಹುಲಿ ಉಪಟಳ ನೀಡಲು ಆರಂಭಿಸಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕಾಡಾನೆ ದಾಳಿಯಿಂದ ಗದ್ದೆ, ತೋಟ ನಾಶ
ಮಡಿಕೇರಿ : ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ತೋಟ ಹಾಗೂ ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಭಾರೀ ನಷ್ಟ ಉಂಟು ಮಾಡುತ್ತಿವೆ.
ಕಳೆದೊಂದು ವಾರದಿಂದ ಬೀಡು ಬಿಟ್ಟಿರುವ ಕಾಡಾನೆಗಳು ಕೃಷಿಕರಾದ ಕೆ. ಎಂ.ಚಂದ್ರಶೇಖರ್ ಹಾಗೂ ಬೆಟ್ಟದಕಾಡು ರಮೇಶ್ ಅವರ ಅಡಿಕೆ ತೋಟ ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಹಾನಿ ಮಾಡಿದೆ. ಫಸಲು ಬಿಡಲು ಸಿದ್ಧವಾಗಿದ್ದ ಅಡಿಗೆ ಮರಗಳು ನೆಲಕಚ್ಚಿವೆ. ಗದ್ದೆಯಲ್ಲಿದ್ದ ಸಸಿಗಳು ನಾಶವಾಗಿವೆ.
ಕಾಡಾನೆಗಳ ಉಪಟಳದಿಂದ ಬೇಸತ್ತಿರುವ ಕೃಷಿಕರು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳೆಹಾನಿ ನಿರಂತರವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಪರಿಹಾರದ ಅರ್ಜಿಯನ್ನು ವಿಲೇವಾರಿ ಮಾಡಿಲ್ಲ. ಇದೀಗ ಮತ್ತೆ ಬೆಳೆನಾಶವಾಗಿದ್ದು, ಕಳೆದ ಬಾರಿಯ ಪರಿಹಾರವೇ ಬಿಡುಗಡೆಯಾಗದೇ ಇರುವಾಗ ಮತ್ತೆ ಅರ್ಜಿ ಸಲ್ಲಿಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಯೂಟ್ಯೂಬರ್ ನನ್ನು ಭೇಟಿ ಮಾಡಲು 250 ಕಿಮೀ ದೂರ ಸೈಕಲ್ ತುಳಿದ ಬಾಲಕ ; ಕೊನೆಗೆ ಆಗಿದ್ದೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ