ಸೇನೆ ಸೇರುವ ತವಕದಲ್ಲಿ ಸಂತ್ರಸ್ತ ಯುವಕರು
Team Udayavani, Oct 15, 2018, 7:43 AM IST
ಮಡಿಕೇರಿ: ವೀರರ ನಾಡು, ಕ್ರೀಡಾಕಲಿಗಳ ಬೀಡು ಎಂಬುದು ಕೊಡಗಿನ ಪ್ರಖ್ಯಾತಿ. ಸೇನೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಈ ಪುಟ್ಟ ಜಿಲ್ಲೆ, ಈಗ ಮಹಾಮಳೆಯಿಂದ ಬೆಟ್ಟದಷ್ಟು ಸಂಕಷ್ಟ ಹೊದ್ದುಕೊಂಡಿದೆ. ಆದರೆ, ಸಂತ್ರಸ್ತ ಯುವ ಸಮೂಹ ಈ ಕಹಿಯನ್ನು ಮೆಟ್ಟಿ ನಿಂತು ದೇಶ ಕಾಯುವ ಯೋಧರಾಗಲು ಸಜ್ಜಾಗುತ್ತಿದೆ. ಸುಮಾರು ಏಳು ಗ್ರಾ.ಪಂ ವ್ಯಾಪ್ತಿಯ 40ರಷ್ಟು ಗ್ರಾಮಗಳ ಸಾವಿರಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಈ ಕುಟುಂಬಗಳ ಯುವ ಸದಸ್ಯರಿಗೆ ಈಗ ಉದ್ಯೋಗದ ಅನಿವಾರ್ಯತೆ
ಎದುರಾಗಿದೆ.
ಕೂಲಿಯಲ್ಲ, ದೇಶಸೇವೆ: ಮಹಾಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಈ ಯುವಕರದು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಕೂಲಿ ಕೆಲಸವೂ ಮರೀಚಿಕೆ. ಇಂಥ ಹೊತ್ತಿನಲ್ಲೇ ಕೊಡವ ಸಮಾಜದ ಪ್ರಮುಖರು ಹಾಗೂ ನಿವೃತ್ತ ಸೇನಾಧಿಕಾರಿಗಳು ದೇಶ ಕಾಯುವ ಗೌರವಯುತ ವೃತ್ತಿಯನ್ನು ಆರಿಸಿಕೊಳ್ಳುವಂತೆ ಇವರನ್ನು ಪ್ರೇರೇಪಿಸಿದ್ದಾರೆ.
ಮಾನಸಿಕವಾಗಿ ಕುಸಿದಿದ್ದರೂ ದೈಹಿಕವಾಗಿ ಸದೃಢರಾಗಿರುವ ಈ ಯುವಕರನ್ನು ನಿವೃತ್ತ ಸೇನಾಧಿಕಾರಿಗಳು ಕೊಡವ ಸಮಾಜದ ಸಹಕಾರದೊಂದಿಗೆ ಸೇನಾ ನೇಮಕಾತಿ ರ್ಯಾಲಿಗೆ ಸಜ್ಜುಗೊಳಿಸಿದ್ದಾರೆ. ಅ.13ರಿಂದ ಮಂಡ್ಯದಲ್ಲಿ ಆರಂಭಗೊಂಡಿರುವ ಆಯ್ಕೆ ರ್ಯಾಲಿಯಲ್ಲಿ ಸಂತ್ರಸ್ತ ಕುಟುಂಬಗಳ 50ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದಾರೆ.
ಸೇನಾ ಮಾರ್ಗದರ್ಶನ, ಸಲಹೆ: ಸೇನಾಧಿಕಾರಿಗಳಾದ ಕ| ಬೆಳ್ಳಿಯಪ್ಪ, ಗಜಾನನ, ನಾಯಕ್ ವೀರೇಶ್ ಮತ್ತು ನಿವೃತ್ತ
ಸೇನಾಧಿಕಾರಿಗಳಾದ ಮೇ| ನಂದಾ ನಂಜಪ್ಪ, ಕ| ಮುತ್ತಣ್ಣ ಮತ್ತಿತರರು ಈ ಯುವಕರಿಗೆ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಲಿಖಿತ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆ ಎದುರಿಸುವ ಕುರಿತು ಸಲಹೆ ನೀಡಿದ್ದಾರೆ. ಈ ಪೂರ್ವಭಾವಿ ತರಬೇತಿ ವೇಳೆ ಶಿಬಿರಾರ್ಥಿಗಳಿಗೆ ಮಡಿಕೇರಿ ಕೊಡವ ಸಮಾಜ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿತ್ತು. ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್ .ದೇವಯ್ಯ, ಪದಾಧಿಕಾರಿಗಳಾದ ಕಾಳೇಂಗಡ ಮುತ್ತಪ್ಪ, ಪುಟ್ಟಿಚಂಡ ಡಾನ್, ಮಾದೇಟಿರ ಬೆಳ್ಳಪ್ಪ ಅವರು ಸಂತ್ರಸ್ತ ಯುವಕರನ್ನು ಸೇನೆಗೆ ಸೇರ್ಪಡೆಗೊಳಿಸಲೇ ಬೇಕೆಂದು ಪಣ ತೊಟ್ಟಿದ್ದಾರೆ.
ಸಂತ್ರಸ್ತ ಯುವಕರಿಗೆ ತರಬೇತಿ ನೀಡಿದ್ದೇವೆ. ದೇಶ ಸೇವೆಗೆ ಸೇನೆ ಉತ್ತಮ ವೇದಿಕೆ, ಇದರಿಂದ ಉದ್ಯೋಗವೂ ದೊರೆತಂತಾ ಗುತ್ತದೆ. ನೌಕಾದಳ ಮತ್ತು ವಾಯುಪಡೆ ಭರ್ತಿಗೂ ತರಬೇತಿ ನೀಡುವ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಇದು ನಡೆಯಲಿದೆ.
● ಮುತ್ತಣ್ಣ ನಿವೃತ್ತ ಕರ್ನಲ್
ಪ್ರಾಕೃತಿಕ ದುರಂತದಿಂದ ಗ್ರಾಮೀಣ ಕುಟುಂಬಗಳಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಇಂಥ ಪರಿಸ್ಥಿತಿಯಲ್ಲಿ ಯುವಕರು ಸೇನೆಗೆ ಸೇರ್ಪಡೆಗೊಂಡು ಬದುಕು ಕಟ್ಟಿಕೊಳ್ಳಲು ನೆರವಾಗುವ ದೃಷ್ಟಿಯಿಂದ ಕೊಡವ ಸಮಾಜ ಈ ಚಿಂತನೆ ನಡೆಸಿದೆ.
● ಕೆ ಎಸ್ ದೇವಯ್ಯ. ಕೊಡವ ಸಮಾಜದ ಅಧ್ಯಕ್ಷ
ಎಸ್ ಕೆ ಲಕ್ಷ್ಮೀಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ