ಕೋಚಿಮುಲ್ನಿಂದ 31.25 ಲಕ್ಷ ರೂ. ದೇಣಿಗೆ
Team Udayavani, Apr 8, 2020, 12:50 PM IST
ಕೋಲಾರ: ಜಿಲ್ಲೆಯ ಹಾಲು ಒಕ್ಕೂಟದಿಂದ ಸಿಎಂ ಕೋವಿಡ್-19 ಪರಿಹಾರ ನಿಧಿಗೆ 31.25 ಲಕ್ಷ ರೂ. ದೇಣಿಗೆ ನೀಡಲಾಯಿತು. ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ನೇತೃತ್ವದ ತಂಡವು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರನ್ನು ಭೇಟಿ ಮಾಡಿ ಪರಿಹಾರ ನಿಧಿಗೆ ಚೆಕ್ ಹಸ್ತಾಂತರಿಸಿತು.
ದೇಶಾದ್ಯಂತ ಕೋವಿಡ್-19 ರೋಗಾಣು ಹರಡದಂತೆ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ರಾಜ್ಯ ದಲ್ಲಿಯೂ ತುರ್ತು ಪರಿಹಾರ ಕಾರ್ಯ ಕೈಗೊಳ್ಳುತ್ತಿರುವ ಸಲುವಾಗಿ ಒಕ್ಕೂಟದಿಂದ 25 ಲಕ್ಷ ರೂ. ಮತ್ತು ಒಕ್ಕೂಟದ ಅಧಿಕಾರಿ, ನೌಕರರ ಒಂದು ದಿನದ ವೇತನ 6.25 ಲಕ್ಷ ರೂ. ಸೇರಿ 31.25 ಲಕ್ಷ ರೂ.ನ ಚೆಕ್ ಅನ್ನು ಸಿಎಂ ಪರಿಹಾರ ನಿಧಿ ನೀಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಮಂಡಳಿ ನಿರ್ದೇಶಕರಾದ ಕೆ.ಎನ್.ನಾಗರಾಜ್, ವೈ.ಬಿ.ಅಶ್ವತ್ಥ ನಾರಾಯಣ, ಆರ್.ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ವಿ. ತಿಪ್ಪಾರೆಡ್ಡಿ ಉಪಸ್ಥಿತರಿದ್ದರು.