3200 ಕಾರ್ಮಿಕರು ವಿಶೇಷ ರೈಲಲ್ಲಿ ರವಾನೆ
Team Udayavani, May 4, 2020, 5:49 PM IST
ಮಾಲೂರು: ಕೋವಿಡ್ 19 ಲಾಕ್ಡೌನ್ ವೇಳೆಯಲ್ಲಿ ಬೆಂಗಳೂರಿನಲ್ಲಿ ಸಿಲುಕಿ ಕೊಂಡಿದ್ದ 3200 ಕಾರ್ಮಿಕರನ್ನು ಮೂರು ವಿಶೇಷ ರೈಲುಗಳಲ್ಲಿ ಪಟ್ಟಣದ ರೈಲ್ವೆ ನಿಲ್ದಾಣದಿಂದ ಕಳುಹಿಸಲಾಯಿತು. ಬೆಂಗಳೂರು ಸೇರಿ ರಾಜ್ಯದ ಕೆಲವು ಭಾಗಗಳಲ್ಲಿ ಡುಡಿಯುತ್ತಿದ್ದ ಒಡಿಶಾ, ಬಿಹಾರ್ ಮತ್ತು ಜಾರ್ಖಾಂಡ್ನ 3200 ಕಾರ್ಮಿಕರು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕ್ಕಿದ್ದರು.
ಊಟ ತಿಂಡಿ ಇಲ್ಲದೆ ಪರಿತಪಿಸುತ್ತಿದ್ದ ಕಾರ್ಮಿಕರನ್ನು ರಾಜ್ಯದ ವಿವಿಧ ಸಂಘಟನೆಗಳು, ಸರ್ಕಾರ ಸಲಹಿದ್ದವು. ವಲಸೆ ಕಾರ್ಮಿಕರು ಅವರ ರಾಜ್ಯಕ್ಕೆ ತೆರಳಲು ಕೇಂದ್ರ ಸರ್ಕಾ ವಿಶೇಷ ಅನು ಕೂಲ ಕಲ್ಪಿಸಿ, ರಾಜ್ಯ ಸರ್ಕಾರಗಳಿಗೆಸೂಚನೆ ನೀಡಿತ್ತು. ಆದ ಕಾರಣ, ಬೆಂಗಳೂರಿನಿಂದ ವಿಶೇಷ ಬಸ್ಗಳಲ್ಲಿ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಕರೆತಂದ ಬೆಂಗಳೂರು ಜಿಲ್ಲಾಡಳಿತ, ಮೂರು ವಿಶೇಷ ರೈಲುಗಳಲ್ಲಿ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಿದೆ.
ರೈಲ್ವೆ ನಿಲ್ದಾಣದಲ್ಲಿ ಪ್ರತಿಯೊಬ್ಬರು ಸಾಲಿನಲ್ಲಿ ನಿಂತು ತಮ್ಮ ರಾಜ್ಯಗಳ ತೆರಳುವ ವಿಶೇಷ ರೈಲುಗಳಿಗೆ ಹತ್ತುವ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕೆಲವು ಕಾರ್ಮಿಕರು ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುತ್ತಿರುವ ಊಟ, ತಿಂಡಿ ಹಾಗೂ ಸಹಕಾರ ನೆನೆದು ಕಣ್ಣಿರು ಹಾಕಿದರು. ಬೆಂಗಳೂರು ಪೂರ್ವ ವಲ ಯದ ಡಿಸಿಪಿ ರೋಹಿಣಿ ಕಟೋಚಾ ಸಪೆಟ್, ಡಿಸಿಪಿ ಉಮೇಶ್, ಕೋಲಾರ ಎಸ್ಪಿ ಕಾರ್ತಿಕ್ರೆಡ್ಡಿ, ಎಎಸ್ಪಿ, ಜಾಹ್ನವಿ, ಬಿಬಿ ಎಂಪಿ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ