ವಿಸ್ಟ್ರಾನ್ನಲ್ಲಿ 60 ಸೋಂಕಿತರು
Team Udayavani, May 5, 2021, 6:08 PM IST
ಕೋಲಾರ: ಪ್ರಸಿದ್ಧ ಐಫೋನ್ ತಯಾರಿಕಾ ಘಟಕ ವಿಸ್ಟ್ರಾನ್ ಕಂಪನಿಯಲ್ಲಿ 60ಕ್ಕೂಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ತಯಾರಿಕಾ ಘಟಕವನ್ನುಒಂದು ವಾರ ಸ್ಥಗಿತಗೊಳಿಸಿ ಸ್ವತ್ಛತಾ ಕಾರ್ಯಕೈಗೆತ್ತಿಕೊಳ್ಳಲಾಗಿದೆ.ವಿಸ್ಟ್ರಾನ್ ಕಂಪನಿಯಲ್ಲಿ ಹಲವರಿಗೆ ಕೊರೊನಾ ಮೆದು ಲಕ್ಷಣಗಳಿರುವಶಂಕೆಯಲ್ಲಿ ಕಾರ್ಮಿಕರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, 60 ಮಂದಿಕಾರ್ಮಿಕರಿಗೆ ಸೋಂಕು ದೃಢವಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ.ಕಾರ್ತಿಕ್ ರೆಡ್ಡಿ ಘಟಕಕ್ಕೆ ಭೇಟಿ ನೀಡಿಪರಿಶೀಲಿಸಿ ಇದೇ ಪರಿಸ್ಥಿತಿಯಲ್ಲಿ ಕಂಪನಿಮುಂದುವರಿದರೆ ಮತ್ತಷ್ಟು ಕೊರೊನಾಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.ಆದ್ದರಿಂದ ಮೇ 1ರಿಂದ 7ರವರೆಗೂಐಫೋನ್ ತಯಾರಿಕಾ ಘಟಕದ ಎಲ್ಲಾವಿಭಾಗಗಳನ್ನು ಮುಚ್ಚಲು ಸೂಚಿಸಿದ್ದಾರೆ.
ಇದೀಗ ಆರೋಗ್ಯ ಇಲಾಖೆಯ ತಂಡವುಕಂಪನಿಯ ಇನ್ನಿತರೆ ಕಾರ್ಮಿಕರ ಆರೋಗ್ಯತಪಾಸಣೆ ಮಾಡುತ್ತಿದ್ದು, ಇಡೀಕಾರ್ಖಾನೆಯಲ್ಲಿ ಸ್ವತ್ಛತಾ ಕಾರ್ಯಗಳನ್ನುನಡೆಸಲಾಗುತ್ತಿದೆ. ಮೇ 8ರ ನಂತರ ಕೆಲಸಕ್ಕೆಹಾಜರಾಗಬೇಕಾದರೆ ಪ್ರತಿ ಕಾರ್ಮಿಕರುಕೊರೊನಾ ಸೋಂಕಿನ ತಪಾಸಣಾ ವರದಿತರಬೇಕೆಂದು ಕಂಪನಿಯು ಸೂಚಿಸಿದೆ.
ವೇಮಗಲ್ ಮತ್ತು ನರಸಾಪುರಸುತ್ತಮುತ್ತಲಿನ ಹಲವು ಕೈಗಾರಿಕೆಗಳುಕೋವಿಡ್ ಮಾರ್ಗಸೂಚಿ ಪ್ರಕಾರನಡೆಯುತ್ತಿದ್ದರೂ, ಯಾವುದೇ ಕಾರ್ಮಿಕಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಯಗಮನಕ್ಕೆ ತರುವಂತೆ ಅಧಿಕಾರಿಗಳು ಕಂಪನಿಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.ಈ ಸಂಬಂಧ ಆರೋಗ್ಯ ಇಲಾಖೆಯಸಿಬ್ಬಂದಿ ಕೈಗಾರಿಕೆಗಳನ್ನು ನಿಯಮಿತವಾಗಿಭೇಟಿ ನೀಡಿ ವರದಿ ನೀಡುವಂತೆಯೂ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ