ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ: ಕೋಡಿಶ್ರೀ
Team Udayavani, Jun 10, 2023, 4:03 PM IST
ಶ್ರೀನಿವಾಸಪುರ: ಈ ವರ್ಷದಲ್ಲಿ ರೈಲು ದುರಂತಗಳು ಇನ್ನೂ ಒಂದೆರಡು ನಡೆಯಲಿವೆ. ಇದರಿಂದ ಸಾವು ನೋವು ಗಳು ಹೆಚ್ಚು ಸಂಭವಿಸಲಿವೆ. ಹಾಗೆಯೇ ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ. ಯುದ್ಧಗಳು ನಡೆಯುವುದರಿಂದ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ತಾಲೂಕು ನೆಲವಂಕಿ ಹೋಬಳಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಪ್ರಪಂಚದಲ್ಲಿ ಯುದ್ಧ ಭೀತಿ ಇದ್ದು, ಪ್ರಸಕ್ತ ವರ್ಷದಲ್ಲಿ ಗುಡುಗು, ಮಿಂಚು, ಮಳೆ ಹೆಚ್ಚಾಗಲಿದೆ. ಅನೇಕ ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದರು.
ಇದನ್ನೂ ಓದಿ:Shobha Karandlaje ಅವರಿಗೂ ಫ್ರೀ…; ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಗರಂ
ಈ ವರ್ಷದಲ್ಲಿ ಭೂಮಿ ಬಿರುಕು ಬಿಡಲಿದೆ. ಸಮಸ್ಯೆಗಳು ಎದುರಾಗಲಿದೆ, ಹಾಗಾಗಿ ಭಯ, ಭಕ್ತಿಯ ಜೊತೆಯಲ್ಲಿ ಜನ ಭಗವಂತನ ಮೊರೆ ಹೋಗಬೇಕಾಗಿದೆ ಎಂದರು. ಭಗವಂತ ಹಲವಾರು ನಾಮಗಳಲ್ಲಿ ಇದ್ದಾನೆ. ಶಿವ, ಯೇಸು, ರಾಮ, ಅಲ್ಲಾ ಇವರ ಸ್ಮರಣೆ ಅಗತ್ಯವಾಗಿದೆ ಮಾನವ ಕುಲವೊಂದೇ. ಹಾಗಾಗಿ ಸಾಮರಸ್ಯದ ನಡುವೆ ಮೋಕ್ಷಕ್ಕೆ ದೈವಾನುಗ್ರಹ ಬೇಕಾಗಿದೆ ಎಂದರು.
ಸಮಾಜಕ್ಕೆ ಸಾಮರಸ್ಯದ ಸೇತುವೆಯಾಗಿ ಈ ಗ್ರಾಮದಲ್ಲಿ ನಡೆಸುತ್ತಿರುವ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಮುಸ್ಲಿಂ ಸಹೋದರರು ಮುಂದೆ ಬಂದು ಈ ಕಾರ್ಯಕ್ರಮ, ನಡೆಸುತ್ತಿರುವುದು ಶ್ಲಾಘನೀಯವೆಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ