ಗುರುಭವನದ ಮುಂದೆ ಕಸದ ರಾಶಿ
Team Udayavani, Jun 22, 2020, 7:18 AM IST
ಕೆಜಿಎಫ್: ಗುರುಭವನಕ್ಕೆಂದು ಮೀಸಲಾದ ಪ್ರದೇಶವನ್ನು ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಘಟಕವಾಗಿ ಮಾರ್ಪಡಿಸಿಕೊಂಡಿದ್ದಾರೆ. ನಗರದ 6ನೇ ಕ್ರಾಸ್ ಬಳಿ ಇರುವ ಗುರುಭವನ ಶಿಕ್ಷಕರ ಬಹುದಿನದ ಕನಸಾಗಿದೆ. ಆದರೆ, ಹಲವು ಕಾರಣಗಳಿಂದಾಗಿ ಭವನ ಕೈಗೂಡಲಿಲ್ಲ. ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿದೆ.
ಇದನ್ನೇ ದುರುಪಯೋಗ ಪಡೆದ ನಗರಸಭೆ ಸಿಬ್ಬಂದಿ, ಕಟ್ಟಡದ ಆವರಣವನ್ನು ತ್ಯಾಜ್ಯ ವಸ್ತು ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದೆ. ಒಂದೆಡೆ ಗುರುರಾಘವೇಂದ್ರ ಸ್ವಾಮಿಗಳ ಮಠ ಇದೆ. ಮತ್ತೂಂದೆಡೆ ಬಾಲಕಿಯರ ಪಿಯು ಕಾಲೇಜು ಇದೆ. ಇನ್ನೊಂದೆಡೆ ಖಾಸಗಿ ಶಾಲೆ ಇದೆ. ಇಂತಹ ಆಯಕಟ್ಟಿನ ಜಾಗ, ಸದಾ ಜನದಟ್ಟಣೆ ಇರುವ ಪ್ರದೇಶದಲ್ಲಿ ನಗರಸಭೆ ಸಿಬ್ಬಂದಿಯೇ ಈ ರೀತಿ ತ್ಯಾಜ್ಯ ಸಂಗ್ರಹ ಮಾಡಿದರೆ, ಸಾರ್ವಜನಿಕರು ಹೇಗೆ ಮಾಡಬಹುದು ಎಂಬುದು ಚರ್ಚಿತ ವಿಷಯವಾಗಿದೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿ ಕೈಗಾಡಿಗಳಲ್ಲಿ ತರುತ್ತಾರೆ. ಅವುಗಳನ್ನೆಲ್ಲ, ಈ ಆವರಣದಲ್ಲಿ ಸುರಿಯುತ್ತಾರೆ. ಹಲವು ದಿನಗಳ ಬಳಿಕ ಒಂದಷ್ಟು ತ್ಯಾಜ್ಯವನ್ನು ಟ್ರ್ಯಾಕ್ಟರ್ನಲ್ಲಿ ಸುರಿದುಕೊಂಡು ಹೋಗುತ್ತಾರೆ. ಪುನಃ ಅದೇ ಚಾಳಿ ಮುಂದುವರಿಯುತ್ತದೆ. ಕಸ ಕಡ್ಡಿ ಸುರಿಯುವುದರಿಂದ ಕಟ್ಟಡ ಒಳಗೆ ಯಾರೂ ಬರಲು ಸಾಧ್ಯವಾಗುತ್ತಿಲ್ಲ.
ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗಿದೆ. ಸಾರ್ವಜನಿಕರು ಮಲ ಮೂತ್ರ ವಿಸರ್ಜನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವತ್ಛ ಭಾರತ್ ಆಂದೋಲನ ಅಂಗವಾಗಿ ನಗರದ ಕೋರ್ಟ್ ನ್ಯಾಯಾಧೀಶರು ಇದೇ ಆವರಣದಲ್ಲಿ ಸ್ವತ್ಛ ಭಾರತ ದಿನದ ಪ್ರಯುಕ್ತ ಶ್ರಮದಾನ ಹಮ್ಮಿಕೊಂಡಿದ್ದರು. ಸ್ವಲ್ಪ ದಿನದ ನಂತರ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿದೆ ಎಂದು ಸ್ಥಳೀಯ ನಿವಾಸಿ ಆನಂದ್ ಅಭಿಪ್ರಾಯ ಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ