ತಂಬಾಕು ನಿಯಂತ್ರಣಕ್ಕೆ 120 ಶಾಲೆಗಳಲ್ಲಿ ಜಾಗೃತಿ
ವಿಶ್ವ ತಂಬಾಕು ರಹಿತ ದಿನ • ಕೋಟ್ಪಾದಡಿ 6,227 ಪ್ರಕರಣ ದಾಖಲು • 3.27 ಲಕ್ಷ ರೂ ದಂಡ ವಸೂಲು
Team Udayavani, May 31, 2019, 10:05 AM IST
ಕೋಲಾರ ಜಿಲ್ಲೆಯಲ್ಲಿ ತಂಬಾಕು ಸೇವನೆ ಹಾನಿಕರ ಕುರಿತ ಭಿತ್ತಿಫಲಕಗಳನ್ನು ಅಂಗಡಿಗಳ ಮುಂದೆ ತಂಬಾಕು ನಿಯಂತ್ರಣಘಟಕದ ಅಧಿಕಾರಿಗಳು ಅಳವಡಿಸಿದರು.
ಕೋಲಾರ: ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಮೇ.31 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಈ ಬಾರಿ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಘೋಷಣೆಯಡಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
10 ಲಕ್ಷ ಮಂದಿ ಸಾವು: ಪ್ರತಿ ನಿತ್ಯವೂತಂಬಾಕು ಸೇವನೆಯಿಂದ 2200 ಕ್ಕೂ ಹೆಚ್ಚು ಭಾರತೀಯರು ಸಾಯುತ್ತಿದ್ದು, ವರ್ಷವೊಂದರಲ್ಲಿ 10 ಲಕ್ಷಕ್ಕೂ ಅಧಿಕ ಭಾರತೀಯರು ತಂಬಾಕು ಸೇವನೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ ಜನರ ಸಾವಿಗೆ ಅತಿದೊಡ್ಡ ಕಾರಣವಾಗಿರುವ ತಂಬಾಕು ಸೇವನೆಯಿಂದಾಗಿ ಶೇ.40 ರಷ್ಟು ಕ್ಯಾನ್ಸರ್, ಶೇ.90ರಷ್ಟು ಬಾಯಿ ಕ್ಯಾನ್ಸರ್ ಕಾರಣವಾಗುತ್ತಿದೆ.
ಇದಲ್ಲದೆ ತಂಬಾಕು ಸೇವನೆಯಿಂದ ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶದ ಕಾಯಿಲೆ, ಕುರುಡುತನ ಹಾಗೂ ಬೇರೆ ಕಾಯಿಲೆಗಳಿಗೂ ಹರಡುತ್ತಿದೆ. ಒಂದು ಅಂದಾಜಿನ ಪ್ರಕಾರ ತಂಬಾಕು ಸೇವನೆ ಮಾಡುವರು ಹತ್ತು ವರ್ಷ ವಯಸ್ಸಾದಂತೆ ಕಾಣಿಸುತ್ತಾರೆ, ಹತ್ತು ವರ್ಷ ಬೇಗನೆ ಸಾಯುತ್ತಾ ರೆಂದು ಹೇಳಲಾಗಿದೆ.
ತಂಬಾಕಿನಲ್ಲಿ ಏನಿದೆ: ಸಿಗರೇಟಿನಲ್ಲಿ 4 ಸಾವಿರಕ್ಕೂ ಅಧಿಕ ರಾಸಾಯನಿಕಗಳಿದ್ದು, ಈ ಪೈಕಿ 400 ರಷ್ಟು ವಿಷದ ವಸ್ತುಗಳಿವೆ. ಒಂದು ಪ್ಯಾಕೇಟ್ ಗುಟ್ಕಾ, ಕೈನಿಯಲ್ಲಿ 3 ಸಾವಿರದಷ್ಟು ರಾಸಾಯನಿಕಗಳಿದ್ದು, ಪ್ರತಿ ಸೇವನೆಯಿಂದ ಜೀವನದ 4 ನಿಮಿಷದ ಆಯಸ್ಸನ್ನು ಕಡಿಮೆ ಮಾಡುತ್ತದೆ. ನಿಕೋಟಿನ್ ಒಂದು ವ್ಯಸನವಾಗಿದ್ದು, ಇದು ವ್ಯಕ್ತಿಯನ್ನು ತಂಬಾಕಿನ ಗುಲಾಮನನ್ನಾಗಿ ಮಾಡುತ್ತದೆ.
ತಂಬಾಕು ಸೇವನೆ ದುರಭ್ಯಾಸದಿಂದ ಜನರ ಆರೋಗ್ಯ ಆತಂಕಕಾರಿಯಾಗಿದ್ದು, ಬಡವ, ಬಲ್ಲಿದ, ಹೆಣ್ಣುಗಂಡು ಬೇಧವಿಲ್ಲದೆ ಎಲ್ಲಾ ವರ್ಗದ ಜನರನ್ನು ಚಟದ ದಾಸರನ್ನಾಗಿ ಮಾಡಿಕೊಳ್ಳುತ್ತಿದೆ. ಈ ದುಷ್ಪರಿಣಾಮಗಳಿಂದ ಪಾರಾಗಲು ಚಟ ಹೊಂದಿರುವವರು ತಮ್ಮ ನಡವಳಿಕೆಗಳನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
ನಿಯಂತ್ರಣ: ಕೋಲಾರ ಜಿಲ್ಲೆಯಲ್ಲಿರುವ ತಂಬಾಕು ನಿಯಂತ್ರಣ ಘಟಕವು ತಂಬಾಕು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಹದಿಹರೆಯದವರಲ್ಲಿ ಅರಿವು ಮೂಡಿಸಿ ವ್ಯಸನಕ್ಕೆ ಒಳಗಾಗದಂತೆ ಮಾಡುವ ಸಲುವಾಗಿ 120 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
6220 ಪ್ರಕರಣ: ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ ಕೋಟ್ಪಾ ಕಾಯ್ದೆಯ ಉಲ್ಲಂಘನೆಗಳ ವಿರುದ್ಧ ಪೊಲೀಸ್ ಇಲಾಖೆ ಮತ್ತು ಆರೋಗ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟು 6220 ಪ್ರಕರಣಗಳನ್ನು ದಾಖಲಿಸಿ, 3,72,135ರೂ. ದಂಡ ವಸೂಲು ಮಾಡಲಾಗಿದೆ.
697 ವ್ಯಸನ ಮುಕ್ತ: ತಂಬಾಕು ಸೇವನೆ ವ್ಯಸನಕ್ಕೆ ಒಳಗಾಗಿರುವರಿಗೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಕೊಠಡಿ ಸಂಖ್ಯೆ 53 ರಲ್ಲಿ ವ್ಯಸನ ಮುಕ್ತ ಕೇಂದ್ರವನ್ನು ಆರಂಭಿಸಲಾಗಿದೆ. ಉಚಿತವಾಗಿ ಆಪ್ತ ಸಮಾಲೋಚನೆ ಮತ್ತು ನಿಕೋಟಿನ್ ರೀಪ್ಲೇಸ್ಮೆಂಟ್ ಥೆರಫಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಈವರೆವಿಗೂ 3,698 ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮಾಡಿದ್ದು, ಇದರಲ್ಲಿ 697 ಮಂದಿ ವ್ಯಸನ ಬಿಟ್ಟಿದ್ದಾರೆ. ಜಿಲ್ಲೆಯಾದ್ಯಂತ 48 ಗುಂಪು ಚರ್ಚೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಾಹೀರಾತು ಫಲಕ ತೆರವು: ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಪರೋಕ್ಷವಾಗಿ ಜಾಹೀರಾತು ಮಾಡುತ್ತಿದ್ದ 300 ಕ್ಕಿಂತ ಹೆಚ್ಚು ಜಾಹೀರಾತು ಫಲಕಗಳನ್ನು ಅಂಗಡಿ ಮಾಲೀಕರಿಗೆ ಅರಿವು ಮೂಡಿಸಿ ಅವರಿಂದಲೇ ತೆಗೆಸಲಾಗಿದೆ.
ಪೊಲೀಸರಿಗೆ ತರಬೇತಿ: ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ, ಆರೋಗ್ಯ ಇಲಾಖೆಯ ವೈದ್ಯರಿಗೆ, ಆರೋಗ್ಯ ನಿರೀಕ್ಷಕರಿಗೆ ಹಾಗೂ ಶಿಕ್ಷಕರಿಗೆ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಹಾಗೂ ಪರಿಣಾಮಕಾರಿ ಕೋಟ್ಪಾ ಕಾಯ್ದೆ ಅನುಷ್ಠಾನದ ಕುರಿತು ಐದು ದಿನಗಳ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಂಬಾಕಿನ ಉತ್ಪನ್ನಗಳಾದ ಸಿಗರೇಟು, ಬೀಡಿ, ಜಗಿಯುವ ತಂಬಾಕು ಇವುಗಳಿಂದ ಸಂಪೂರ್ಣವಾಗಿ ದೂರ ಇದ್ದು, ದೇಶದ ಯುವ ಜನತೆಯನ್ನು ಆರೋಗ್ಯವಂತರನ್ನಾಗಿ ಮಾಡುವುದು ಎಲ್ಲರ ಹೊಣೆಯಾದಾಗ ಮಾತ್ರವೇ ತಂಬಾಕು ನಿಯಂತ್ರಣ ಸಾಧ್ಯವೆಂದು ತಂಬಾಕು ನಿಯಂತ್ರಣ ಘಟಕಾಧಿಕಾರಿ ಮಹಮದ್ ಅಭಿಪ್ರಾಯಪಡುತ್ತಾರೆ.
ಇಂದು ವಿಶ್ವ ತಂಬಾಕು ರಹಿತ ದಿನಾಚರಣೆ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ