ವಧು,ವರ ಎಸ್ಕೇಪ್ ! ಕೋಲಾರದಲ್ಲಿ ಮುರಿದು ಬಿದ್ದ ಮದುವೆ
Team Udayavani, Jan 28, 2018, 9:42 AM IST
ಕೋಲಾರ: ಸಾಮಾನ್ಯವಾಗಿ ವಧು ನಾಪತ್ತೆಯಾಗಿ ಮದುವೆ ಮುರಿದು ಬೀಳುವ ಪ್ರಸಂಗಗಳು ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯುತ್ತದೆ.ಆದರೆ ಕೋಲಾರದಲ್ಲಿ ವಧು, ವರ ಇಬ್ಬರೂ ನಾಪತ್ತೆಯಾಗಿ ಭಾನುವಾರ ನಡೆಯಬೇಕಿದ್ದ ಅದ್ಧೂರಿ ಮದುವೆಯೆ ಮುರಿದು ಬಿದ್ದಿದೆ.
ಬಂಗಾರಪೇಟೆಯ ನೇರ್ನಳ್ಳಿಯ ಎನ್ . ಸೌಮ್ಯ ಎಂಬಾಕೆಗೆ ಮಾಲೂರಿನಚನ್ನಕಲ್ಲಿನ ನಿವಾಸಿ ಸಿ.ಎಂ.ಗುರೇಶ್ ಜೊತೆ ವಿವಾಹ ನೆರವೇರಬೇಕಿತ್ತು. ಶನಿವಾರ ಸಂಜೆ ಇದ್ದಕ್ಕಿದ್ದಂತೆ ವಧು ಸೌಮ್ಯ ನಾಪತ್ತೆಯಾಗಿದ್ದಾಳೆ.
ವಧು ನಾಪತ್ತೆಯಾದ ಬೆನ್ನಲ್ಲೇ ವರ ಗುರೇಶ್ ಮತ್ತು ಸೌಮ್ಯ ಕಡೆಯವರು ಮದುವೆ ಮುರಿದು ಬೀಳಬಾರದು ಎಂದು ಬೇರೆ ಹುಡುಗಿಯೊಂದಿಗೆ ರಾತ್ರೋ ರಾತ್ರಿ ಮದುವೆ ನಿಗದಿ ಮಾಡಿದ್ದಾರೆ. ಸೌಮ್ಯ ಚಿಕ್ಕಪ್ಪನ ಪುತ್ರಿ ವೆಂಕಟರತ್ನಮ್ಮ ಳೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಮದುವೆಗೆ ಒಪ್ಪಿದ್ದ ವರ ಗುರೇಶ್ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ.
ವಧು,ವರ ಇಬ್ಬರೂ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಸಾವಿರಾರು ಜನರ ಔತಣಕ್ಕಾಗಿ ಮಾಡಿದ್ದ ಊಟ ವ್ಯರ್ಥವಾಗಿದೆ. ಮದುವೆಗಾಗಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ನೂರಾರು ಸಂಬಂಧಿಕರು ಬೇಸರದಿಂದ ಮನೆಗೆ ವಾಪಾಸ್ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ