ರಸ್ತೆ ಒತ್ತುವರಿ ತೆರವಿಗೆ ನಾಗರಿಕರ ಸಹಕಾರ ಅಗತ್ಯ


Team Udayavani, Mar 8, 2022, 3:45 PM IST

ರಸ್ತೆ ಒತ್ತುವರಿ ತೆರವಿಗೆ ನಾಗರಿಕರ ಸಹಕಾರ ಅಗತ್ಯ

ಕೋಲಾರ: ನಗರದ ಅಭಿವೃದ್ಧಿಗೆ ರಸ್ತೆ ಅಗಲೀಕರಣ ಅಗತ್ಯವಿದೆ, ಸಾರ್ವಜನಿಕರು ಅನಗತ್ಯವಾಗಿಅಡ್ಡಿಪಡಿಸದೇ ಸಹಕರಿಸಿ ಎಂದು ಸಂಸದ ಎಸ್‌.ಮುನಿಸ್ವಾಮಿ ಸಲಹೆ ನೀಡಿದರು.

ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹಾಗೂ ನಗರಸಭೆ ಆಯುಕ್ತ ಪ್ರಸಾದ್‌,ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ ಜತೆಗೂಡಿ ದಿಢೀರ್‌ ನಗರ ಸಂಚಾರ ನಡೆಸಿದ ಅವರು, ಮೊದಲುನಗರದ ಸರ್ವಜ್ಞ ಉದ್ಯಾನವನದ ಸಮೀಪ ಇರುವಶನೇಶ್ವರ ಸ್ವಾಮಿ ದೇವಾಲಯದ ಬಳಿ ರಸ್ತೆಅಗಲೀಕರಣಕ್ಕೆ ಇರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.

ಪಕ್ಕದಲ್ಲೇ ಇರುವ ಗೌರವ ಆಸ್ಪತ್ರೆ ಮಾಲೀಕರುನಿಯಮಾನುಸಾರ ಕಟ್ಟಡವನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡುವಂತೆ ಸಂಸದರುಸೂಚಿಸಿದ್ದು, ಅದಕ್ಕೆ ಆಸ್ಪತ್ರೆ ಮಾಲೀಕರು ಒಪ್ಪಿಗೆ ಸೂಚಿಸಿದರು.

ಇದಾದ ನಂತರ ನಗರದ ಹಳೆ ಬಸ್‌ನಿಲ್ದಾಣಕ್ಕೆಭೇಟಿ ನೀಡಿದ ಸಂಸದರ ತಂಡ, ಅಲ್ಲಿ ಎಲ್ಲೆಂದರಲ್ಲಿತಲೆಯೆತ್ತಿರುವ ಅಂಗಡಿಗಳನ್ನು ತೆರವುಗೊಳಿಸಿ, ಈಅಂಗಡಿಗಳಿಗೆ ಪಕ್ಕದ ಇಂದಿರಾ ಕ್ಯಾಂಟೀನ್‌ ಸಮೀಪಅವಕಾಶ ಮಾಡಿಕೊಡಿ ಎಂದು ನಗರಸಭೆಆಯುಕ್ತರಿಗೆ ಸೂಚಿಸಿದರು.

ಕೆಲವು ಅಂಗಡಿ ಮಾಲೀಕರು ನಮಗೂ ಅಂಗಡಿ ನಿರ್ಮಿಸಿಕೊಡಲು ಕೋರಿದಾಗ ನಗರಸಭೆಆಯುಕ್ತರಿಗೆ ಸೂಚಿಸಿದ ಸಂಸದರು, ಶೀಘ್ರವಾಗಿಶೀಟ್‌ ಅಳವಡಿಸಿ ಅಂಗಡಿ ಮಾಡಿಕೊಡಿ, ಇದರಿಂದನಗರಸಭೆಗೆ ಆದಾಯವೂ ಬರಲಿದೆ ಎಂದು ಸಲಹೆ ನೀಡಿದರು.

ದೇಗುಲಕ್ಕೆ ಜಾಗ: ನಗರದ ಡೂಂಲೆ„ಟ್‌ ವೃತ್ತದ ಸಮೀಪ ಕಠಾರಿ ಗಂಗಮ್ಮ ದೇಗುಲವನ್ನು ರಸ್ತೆಅಗಲೀಕರಣದ ಸಂದರ್ಭದಲ್ಲಿ ಧ್ವಂಸ ಮಾಡಿದ್ದು, ದೇಗುಲ ಮರು ನಿರ್ಮಾಣಕ್ಕಾಗಿ ನಗರದ ಸಂಚಾರ ಠಾಣೆ ಸಮೀಪ 50 ಅಡಿ ಅಗಲ ಹಾಗೂ 50 ಅಡಿ ಉದ್ದದ ಜಾಗವನ್ನು ನಿಗ ದಿ ಮಾಡಲಾಗಿದ್ದು, ಈ ಜಾಗವನ್ನು ದೇಗುಲ ಸಮಿತಿ ವಶಕ್ಕೆ ನೀಡಲು ಸೂಚಿಸಿದರು.

ವೇಣುಗೋಪಾಲಸ್ವಾಮಿ ಪುಷ್ಕರಣಿ ಸಮೀಪ ದೇಗುಲದ 4 ಅಡಿ ಜಾಗ ತೆರವುಗೊಳಿಸಿ ರಸ್ತೆಅಗಲೀಕರಣಕ್ಕೆ ನೆರವಾಗಲು ಮನವಿ ಮಾಡಿದಾಗದೇವಾಲಯ ಸಮಿತಿ ಒಪ್ಪಿಗೆ ನೀಡಿತು.ಇದಾದ ನಂತರ ಸಂಸದರು, ಡಿಸಿಯವರಿದ್ದ ತಂಡನಗರದ ನಾಗರಕುಂಟೆ ನವೀಕರಣ ಕಾಮಗಾರಿ ಸ್ಥಗಿತದ ಕುರಿತು ಪರಿಶೀಲನೆ ನಡೆಸಿತು.

ಈ ವೇಳೆ ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಪ್ರಸ್ತಾಪಿಸಿದ ಸಂಸದರು, ಇಲ್ಲಿ ಸುಂದರ ವಾಕಿಂಗ್‌ ಪಾಥ್‌ ಮಾಡಿ, ಅದಕ್ಕೆ ಅನುದಾನ ಕೊಡಿಸಿಕೊಡುವ ಭರವಸೆ ನೀಡಿದರು. ಇದೇ ಸಂದಭದಲ್ಲಿ ಅಲ್ಲಿಗೆ ಸಮೀಪದಲ್ಲೇಕಾಂಗ್ರೆಸ್‌ ಮುಖಂಡ ಊರುಬಾಗಿಲು ಶ್ರೀನಿವಾಸ್‌ರಸ್ತೆ ಒತ್ತುವರಿ ಮಾಡಿ ಕಟ್ಟಿದ್ದ ಗೋಡೆಯನ್ನು ತೆರವುಗೊಳಿಸಲಾಯಿತು.

ರಾಜ್ಯ ಬಜೆಟ್‌ನಲ್ಲಿ ಕೋಲಾರಕ್ಕೆ ಏನೂ ನೀಡಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ, ಅವರು ಸ್ವಲ್ಪಕಾಲ ಸುಮ್ಮನಿರಲಿ ಬಜೆಟ್‌ನಲ್ಲಿ ಏನು ಸಿಕ್ಕಿದೆ ಎಂಬುದು ಗೊತ್ತಾಗುತ್ತದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

ಬಜರಂಗದಳ ಮುಖಂಡಬಾಲಾಜಿ, ಮುಖಂಡರಾದ ಸಾಮಾ ಬಾಬು, ನಾಮಾಲ ಮಂಜು, ವಕೀಲ ನಾಗೇಂದ್ರ, ಮುಖಂಡವಿಜಯಕುಮಾರ್‌, ಶ್ರೀಗಂಧ ರಾಜೇಶ್‌ ಮತ್ತಿತರರಿದ್ದರು.

ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ನಗರ ಸುಂದರಗೊಳ್ಳಲು ಸಾಧ್ಯ,ಇದಕ್ಕೆ ಎಲ್ಲರ ಸಹಕಾರ ಅಗತ್ಯ, ಹಲವಾರುವರ್ಷಗಳಿಂದ ನಗರದಲ್ಲಿ ರಸ್ತೆಗಳುಸರಿಯಿಲ್ಲದೇ ಹಳ್ಳಿಯಂತಿದೆ, ಇದನ್ನುಸರಿಪಡಿಸಿ ಸುಂದರ ಕೋಲಾರ ಮಾಡುವನಮ್ಮ ಆಶಯ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವದು. -ಮುನಿಸ್ವಾಮಿ, ಸಂಸದ

ಟಾಪ್ ನ್ಯೂಸ್

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

11

Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಜೆಡಿಎಸ್‌ ಮುಖಂಡರು ಗೈರು

LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಜೆಡಿಎಸ್‌ ಮುಖಂಡರು ಗೈರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.