ಕುಸಿದ ಶಾಲೆ: ಮರದ ಕೆಳಗೆ ಮಕ್ಕಳಿಗೆ ಪಾಠ
Team Udayavani, May 18, 2022, 3:27 PM IST
ಶ್ರೀನಿವಾಸಪುರ: ತಾಲೂಕಿನ ಮೊಗಿಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕಶಾಲೆಯಲ್ಲಿ ಕಟ್ಟಡ ಕುಸಿತವಾಗಿ ಉಳಿದಕೊಠಡಿಗಳು ಬಿರಕು ಬಿಟ್ಟು ಅಪಾಯದ ನಡುವೆ ಶಾಲಾರಂಭದ ದಿನ ಮಕ್ಕಳು ಮರದ ಕೆಳಗೆ ಪಾಠ ಕೇಳಿದರು.
ಶ್ರೀನಿವಾಸಪುರ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವವಕ್ಕೆ ಮಕ್ಕಳು ಸಡಗರದಿಂದಆಗಮಿಸಿದರೂ ಕೂರಲು ಕೊಠಡಿಗಳಿಲ್ಲ ಕಳೆದ ನವಂಬರ್ ಮಾಹೆಯಲ್ಲಿ ರಜಾ ದಿನವಾದ ಭಾನುವಾರ ಕಟ್ಟಡ ಕುಸಿದು ಬಿದ್ದಿರುವುದರಿಂದ ಅನೇಕ ಎಳೆಯ ಮಕ್ಕಳ ಜೀವ ಉಳಿದಂತಾಗಿದೆ.
ಅದೃಷ್ಟವ ಶಾತ್ ಭಾನುವಾರ ಕಟ್ಟಡ ಕುಸಿದು ಬಿದ್ದಿದೆ. ಇದರಿಂದ ಮಕ್ಕಳು ಪಾರಾಗಿದ್ದಾರೆ ಈ ಘಟನೆಯಿಂದ ತಿಳಿದು ಬಂದಿದೆ. ಕೊಠಡಿ ಉರಳಿದ ಕಟ್ಟಡಕ್ಕೆ ಒಂದೇ ಗೋಡೆಯಿರುವುದರಿಂದ ಉಳಿದ ಕೊಠಡಿಗಳು ಬಿರಕು ಬಿಟ್ಟು ಮಳೆ ನೀರು ಸೋರಿಕೆಯಾಗಿ ಇಂದೋ ನಾಳೆ ಬೀಳುವಂತಾಗಿದೆ ಇದರಿಂದ ಮಕ್ಕಳನ್ನು ಶಾಲೆಯ ಆವರಣದ ಮರದ ಕೆಳಗೆ ಪಾಠ ಮಾಡುವಂತಾಗಿದೆ.
ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ತಾಪಂ ಇಒ ಎಸ್. ಆನಂದ್ ರವರು ಮಂಗಳವಾರ ಭೇಟಿ ಪರಿಶೀಲನೆ ನಡೆಸಿದರು. ಶಾಸಕರ ಅನುದಾನ ದಲ್ಲಿ ಶೀಘ್ರದಲ್ಲಿಯೇ ಕೊಠಡಿ ನಿರ್ಮಾಣ ಮಾಡ ಲಾಗುತ್ತದೆ ಎಂದರು.
ಬಿಇಓ ಉಮಾ ದೇವಿ, ಬಿಆರ್ಸಿ ಸಂಯೋಜಕಿ ಕೆ.ಸಿ.ವಸಂತ,ಸಿಆರ್ಪಿ ಮಮತ, ಶಾಲೆಯ ಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು.
ಮಕ್ಕಳ ಹಿತದೃಷ್ಟಿಯಿಂದ ಗ್ರಾಮದ ಮನೆಯಲ್ಲಿ ಮಕ್ಕಳ ಪಾಠ ಪ್ರವಚನಗಳನ್ನು ನಡೆಸಲುಅದರ ಬಾಡಿಗೆ ತಾಪಂನಿಂದಭರಿಸಲಾಗುತ್ತದೆ. ಹಾಗೆಯೇಗ್ರಾಮದಲ್ಲಿ ಮಾದರಿ ಅಂಗನವಾಡಿಕಟ್ಟಡ ನಿರ್ಮಾಣಕ್ಕೆ ಪ್ರಾರಂಬಿಸಲಾಗುತ್ತದೆ. ಜೊತೆಗೆಅಡುಗೆ ಕೋಣೆ, ಅದೇ ರೀತಿಶಾಲೆಯ ಒಂದು ಭಾಗದಕಾಂಪೌಂಡ್ ನಿರ್ಮಿಸಲಾಗುವುದು – ಆನಂದ್, ಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?