ಸವಾಲು ಎದುರಿಸಲು ಕನ್ನಡ ಪ್ರಜ್ಞೆ ಒಗ್ಗೂಡಿಸಿ
Team Udayavani, Jan 28, 2021, 12:40 PM IST
ಕೋಲಾರ: 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ಸಮ್ಮೇಳನ ನಡೆಯುವ ಟಿ.ಚನ್ನಯ್ಯ ರಂಗಮಂದಿರದ ಶತಶೃಂಗ ಪರ್ವತ ಮಹಾದ್ವಾರದ ಆವರಣದಲ್ಲಿ ಮೂರು ಧ್ವಜಗಳನ್ನು ಆರೋಹಣೆ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರಧ್ವಜವನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆರೋಹಣ ಮಾಡಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ರಕ್ತಗತವಾಗಿ ಸುಪ್ತವಾಗಿರುವ ಕನ್ನಡ ಪ್ರಜ್ಞೆಯನ್ನು ಕನ್ನಡಕ್ಕೆ ಸವಾಲು ಎದುರಾಗಿರುವ ಸಂದರ್ಭದಲ್ಲಿ ಒಗ್ಗೂಡಿಸಬೇಕೆಂದು ತಿಳಿಸಿದರು.
ಇದನ್ನೂ ಓದಿ:ಸರ್ಕಾರಿ ಶಾಲಾ ಕಾಲೇಜಿಗೆ ಮೂಲ ಸೌಲಭ್ಯ ಒದಗಿಸಿ
ಕನ್ನಡ ಧ್ವಜವನ್ನು ಸಾಹಿತಿ ಕವಿ ಕೋಟಿಗಾನಹಳ್ಳಿ ರಾಮಯ್ಯ ಆರೋಹಣೆ ಮಾಡಿ, ದೇಶಾದ್ಯಂತ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಘಟನಾವಳಿ ಆಧರಿಸಿ ಬರೆದ ಬಾಬಾ ಅಂಬೇಡ್ಕರ್ ಎಂಬ ಪದ್ಯವನ್ನು ವಾಚಿಸಿದರು. ಕಸಾಪ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್ ಆರೋಹಣ ಮಾಡಿದರು. ಭಾರತ ಸೇವಾದಳದ ಎಂ.ಬಿ.ದಾನೇಶ್ ಧ್ವಜ ನಿರ್ವಹಣೆ ಮಾಡಿದರು. ಸುಲೇಮಾನ್ಖಾನ್ರಿಂದ ರಾಷ್ಟ್ರಗೀತೆ ಹಾಗೂ ನಾಡಗೀತೆಗಳ ಗಾಯನ ನಡೆಯಿತು. ಸಿ.ಪುಟ್ಟರಾಜು ನಿರೂಪಿಸಿ, ಎಂ.ಎಸ್. ಶ್ರೀನಿವಾಸ್ ಮಾಗೇರಿ ಸ್ವಾಗತಿಸಿ, ಎನ್.ಮುನಿರಾಜು ನಿರ್ವಹಣೆ ಮಾಡಿ, ವಿ.ತಿಲಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್