ಕ್ಷುಲ್ಲಕ ಕಿಡಿಗೇಡಿ ಕೃತ್ಯಗಳಿಗೆ ಕೋಮು ಬಣ್ಣ!


Team Udayavani, Sep 8, 2019, 12:02 PM IST

kolar-tdy-1

ಕೋಲಾರ ನಗರದಲ್ಲಿ ಗುರುವಾರ ರಾತ್ರಿ ನಡೆದ ಅಹಿತಕರ ಘಟನೆಗಳ ಕುರಿತು ಗಲ್ಪೇಟೆ ಠಾಣೆ ಬಳಿ ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ, ಎಸ್ಪಿ ಕಾರ್ತಿಕ್‌ರೆಡ್ಡಿ ಮತ್ತು ಎಎಸ್ಪಿ ಜಾಹ್ನವಿ ಮಾಹಿತಿ ಕಲೆ ಹಾಕಿದರು.

ಕೋಲಾರ: ಕಿಡಿಗೇಡಿಗಳ ಕ್ಷುಲ್ಲಕ ಕಾರಣಗಳಿಗೆ ಕೋಮು ಬಣ್ಣ ಬಳಿದು ಕೋಲಾರ ನಗರದ ಶಾಂತಿ ಸೌಹಾರ್ದತೆ ಕದಡುವ ವ್ಯವಸ್ಥಿತ ಷಡ್ಯಂತ್ರ ಪ್ರಕರಣಗಳು ನಾಗರಿಕರ ಆತಂಕಕ್ಕೆ ಕಾರಣವಾಗುತ್ತಿದೆ.

ನಗರ ತೊಂಬತ್ತರ ದಶಕದಲ್ಲಿ ಕಂಡಂತೆ ಈ ಘಟನಾವಳಿಗಳು ಅತಿರೇಕ ತಲುಪಿ, ಕರ್ಫ್ಯೂ ವಿಧಿಸುವ ಅಪಾಯದ ಮಟ್ಟಕ್ಕೆ ತಲುಪಿಬಿಡುತ್ತದೆಯೇ ಎಂಬುದು ನಗರದ ಶಾಂತಿಪ್ರಿಯ ಸಾರ್ವಜನಿಕರನ್ನು ಭಯಭೀತಗೊಳಿಸುತ್ತಿದೆ.

ಕರ್ಫ್ಯೂ ಕೋಲಾರ: ಹಿಂದೊಮ್ಮೆ ಕೋಲಾರ ಕೋಮು ಗಲಭೆಗಳಿಗೆ ಹೆಸರುವಾಸಿಯಾಗಿತ್ತು. ತೊಂಬತ್ತರ ದಶಕಗಳಲ್ಲಿ ನಡೆದ ಸತತ ಕೋಮು ಗಲಭೆಗಳು ಕೋಲಾರದಲ್ಲಿ ತಿಂಗಳುಗಟ್ಟಲೇ ಕರ್ಫ್ಯೂ ವಿಧಿಸುವ ಮಟ್ಟಿಗೆ ಹರಡಿತ್ತು. ಕಾಶ್ಮೀರ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ತಿಂಗಳುಗಳ ಕಾಲ ಕರ್ಫ್ಯೂ ವಿಧಿಸಿಕೊಂಡಿದ್ದ ಕೋಲಾರದ ಅಭಿವೃದ್ಧಿ ಕೋಮು ಗಲಭೆಗಳ ಕಾರಣಕ್ಕಾಗಿಯೇ ಇಪ್ಪತ್ತು ಮೂವತ್ತು ವರ್ಷಗಳಷ್ಟು ಹಿಂದಕ್ಕೆ ಸರಿಯುವಂತಾಗಿತ್ತು.

ಭಯದ ವಾತಾವರಣ: ತೊಂಬತ್ತರ ದಶಕದಲ್ಲಿ ನಡೆದ ಕೋಮು ಗಲಭೆಗಳ ಭೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ, ಯಾರಾದರು ಯಾವುದೋ ಕಾರಣಕ್ಕೆ ಬಿರುಸಾಗಿ ಕೂಗುತ್ತಾ ಪೇಟೆ ಬೀದಿಯಲ್ಲಿ ಓಡಿ ಹೋದರೂ ಕ್ಷಣ ಮಾತ್ರದಲ್ಲಿ ಕೋಲಾರದಲ್ಲಿ ಅಘೋಷಿತ ಬಂದ್‌ನ ವಾತಾವರಣ ಸೃಷ್ಟಿಯಾಗಿಬಿಡುತ್ತಿತ್ತು. ಅಂಗಡಿ ಮುಂಗಟ್ಟುಗಳು ಕೆಲವೇ ಕ್ಷಣಗಳಲ್ಲಿ ಬಂದ್‌ ಆಗಿಬಿಡುತ್ತಿದ್ದವು. ಜನಜಂಗುಳಿ ಮಾಯವಾಗಿಬಿಡುತ್ತಿತ್ತು. ರಾತ್ರಿ ಎಂಟರ ಹೊತ್ತಿಗೆ ಕೋಲಾರ ನಿರ್ಜನವಾಗಿಬಿಡುತ್ತಿತ್ತು. ಈ ಭಯದ ಸುಳಿಯಿಂದ ಕೋಲಾರದ ನಾಗರಿಕರ ಹೊರ ಬರಲು 20 ವರ್ಷಗಳೇ ಸರಿಯಬೇಕಾಯಿತು.

ಮತ್ತೆ ಗಲಭೆ ಬೇಡ: ಅಂದಿನ ಕೋಮು ಗಲಭೆಗಳ ಬಿಸಿಯನ್ನು ಅನುಭವಿಸಿದ್ದ ಯಾರೊಬ್ಬರು ಕೋಲಾರಕ್ಕೆ ಮತ್ತೆ ಕೋಮು ಗಲಭೆಯ ಹಣೆಪಟ್ಟಿ ಬೇಡ ಎಂದೇ ಭಾವಿಸುತ್ತಾರೆ. ಏಕೆಂದರೆ, ಕೋಲಾರ ನಗರದಲ್ಲಿ ಅಂದಿನ ಕರ್ಫ್ಯೂ ದಿನಗಳಲ್ಲಿ ದಿನದ ಊಟಕ್ಕೆ ಕೂಲಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಕುಟುಂಬಗಳು ಹಸಿವಿನಿಂದ ನರಳಬೇಕಾಗಿತ್ತು. ಆಸ್ಪತ್ರೆ, ಶಾಲಾ ಕಾಲೇಜು, ಸಾರಿಗೆ ಸೌಕರ್ಯಗಳು ಸ್ತಬ್ಧಗೊಂಡಿತ್ತು.

ಕರ್ಫ್ಯೂ ಅವಧಿಯಲ್ಲಿನ ಪರಿಸ್ಥಿತಿ ಇದಾದರೆ, ಕೋಮುಗಲಭೆಗಳ ನಿಂತ ನಂತರವೂ ಕೋಲಾರಕ್ಕೆ ಕೋಮುಗಲಭೆ ಜಿಲ್ಲೆಯೆಂಬ ಕಪ್ಪು ಚುಕ್ಕೆ ಅಳಿಸಲು ಆಗಿರಲಿಲ್ಲ. ಇದರಿಂದಲೇ ರಾಜಧಾನಿ ಬೆಂಗಳೂರಿಗೆ ಅತಿ ಹತ್ತಿರವಿದ್ದರೂ ಕೋಲಾರ ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳಿಂದ ದೂರ ಉಳಿಯಬೇಕಾಯಿತು. ಇದರ ಸಂಪೂರ್ಣ ಲಾಭ ಪಡೆದುಕೊಂಡಿದ್ದ ತುಮಕೂರು ಇದೀಗ ಕೈಗಾರಿಕಾ ನಗರವಾಗಿ ಮಾರ್ಪಟ್ಟಿದ್ದರೆ, ಕೋಲಾರ ಇಂದಿಗೂ ಅತ್ತ ಹಳ್ಳಿಯೂ ಅಲ್ಲದ, ಇತ್ತ ನಗರವೂ ಆಗದ ದುಸ್ಥಿತಿಯಲ್ಲಿರುವಂತಾಗಿದೆ.

ಕೋಮುಗಲಭೆಗೆ ಹಪಾಹಪಿಸುವ ಬಿಸಿ ರಕ್ತ: ಆದರೆ, ಇದರ ಅರಿವಿಲ್ಲದ ಕೋಲಾರದ ಬಿಸಿ ರಕ್ತದ ಯುವಕರು ಕೋಮುಗಲಭೆಗಾಗಿ ಹಪಾಹಪಿಸುತ್ತಿರುವುದು ಕಂಡು ಬರುತ್ತಿದೆ. ಇದರ ದುಷ್ಪರಿಣಾಮದ ಅರಿವಲ್ಲದ ಸಂಘಟನೆಗಳು ಕೋಮು ಗಲಭೆಗಳನ್ನು ಸೃಷ್ಟಿಸುವ ಸಲುವಾಗಿ ಕ್ಷುಲ್ಲಕ ಘಟನೆಗಳನ್ನು ನೆಪವಾಗಿಟ್ಟುಕೊಳ್ಳುತ್ತಿರುವುದು ಕೋಲಾರದಲ್ಲಿ ಶಾಂತಿ ಸುವ್ಯವಸ್ಥೆ ಅಂದುಕೊಂಡಂತೆ ಇಲ್ಲ ಎಂಬ ವಾತಾವರಣವನ್ನು ಕಾಣುವಂತಾಗಿಬಿಟ್ಟಿದೆ.

ಯಾವುದೇ ಧರ್ಮ ದ್ವೇಷ, ಗಲಭೆ, ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳು ಪರಸ್ಪರವಾಗಿ ಧರ್ಮಗಳ ನಡುವೆ, ವಿವಿಧ ಧರ್ಮೀಯರ ನಡುವೆ ಸೌಹಾರ್ದತೆ, ಸಹಬಾಳ್ವೆ ಮೂಡಿಸುವಂತಿರಬೇಕು. ಶಾಂತಿ ಬೋಧಿಸುವಂತಿರಬೇಕು. ಆದರೆ, ಕೋಲಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ಮತ್ತೂಬ್ಬರಿಗೆ ಕಿರಿಕಿರಿಯನ್ನುಂಟು ಮಾಡುವಂತೆ, ಪ್ರಚೋದಿಸುವಂತೆ, ಭೀಕರವಾಗಿ ಘೋಷಣೆಗಳನ್ನು ಕೂಗುವಂತೆ, ಅಸಭ್ಯವಾಗಿ ಕುಣಿಯುವಂತೆ ನಡೆಸುತ್ತಿರುವುದು ಯಾವುದೇ ಧರ್ಮಕ್ಕೆ ಗೌರವ ತರುವಂತದ್ದಲ್ಲ. ಇಂತ ಕೃತ್ಯಗಳಿಂದ ಯಾವ ಧರ್ಮವೂ ಉದ್ಧಾರವೂ ಆಗುವುದಿಲ್ಲ.

ಇಂತ ಕೃತ್ಯಗಳಲ್ಲಿ ಬಹುತೇಕ ಯುವ ಪೀಳಿಗೆಯೇ ಪಾಲ್ಗೊಳ್ಳುತ್ತಿದ್ದು, ಈ ಯುವ ಮನಸ್ಸುಗಳಿಗೆ ಕೋಲಾರದ ಕೋಮುಗಲಭೆಯ ಇತಿಹಾಸ ಮತ್ತು ಅದರ ದುಷ್ಪರಿಣಾಮಗಳ ಅರಿವಿಲ್ಲದಿರುವುದರಿಂದ. ಇಬ್ಬರ ವ್ಯಕ್ತಿಗಳ ನಡುವಿನ ಸಣ್ಣ ಪುಟ್ಟ ಘಟನೆಗಳನ್ನು ದೊಡ್ಡದು ಮಾಡುವಂತಾಗಿಬಿಟ್ಟಿದೆ. ಇಂತ ಘಟನೆಗಳಿಗೆ ಬಹುಬೇಗ ಕೋಮು ಬಣ್ಣ ಬಳಿಯುವ ಸಾಮಾಜಿಕ ಜಾಲತಾಣಗಳ ವ್ಯವಸ್ಥೆಯೂ ಯುವ ಮನಸ್ಸುಗಳನ್ನು ಕದಡುತ್ತಿದೆ.

 

● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

11

Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.