ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ
Team Udayavani, Sep 11, 2019, 11:57 AM IST
ಕೋಲಾರ ತಾಲೂಕಿನ ಹೋಳೂರು ಹೋಬಳಿಯ ಗಂಗರಸನಹಳ್ಳಿಯಲ್ಲಿ ವೆಂಕಟೇಶ್ಬೋವಿ ಮತ್ತು ಕರ್ನಾಟಕ ರೈತ ಸೇನೆ ಕಾರ್ಯಕರ್ತರು ಜಮೀನು ಬಿಡಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಕೋಲಾರ: ತಾಲೂಕಿನ ಹೋಳೂರು ಹೋಬಳಿಯ ಗಂಗರಸನಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ಆಂಧ್ರ ಮೂಲದ ಹರಿರೆಡ್ಡಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕೈಗೊಂಡು ಜಮೀನನ್ನು ಬಿಡಿಸಿಕೊಡಬೇಕೆಂದು ರೈತ ಸೇನೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿತು.
ಗ್ರಾಮದ ವೆಂಕಟಸ್ವಾಮಿ ಬೋವಿ ಮರಣ ಹೊಂದಿದ ನಂತರ ಅವರ ಆಸ್ತಿಪಾಸ್ತಿಗಳ ಜವಾಬ್ದಾರಿ ಅಳಿಯನಿಗೆ ಸೇರುತ್ತದೆ. ವೆಂಕಟಸ್ವಾಮಿ ಬೋವಿ ಅವರ ಮೂರನೇ ಪುತ್ರಿ ಗಾಯತ್ರಿ ಹೆಸರಿಗೆ ಖಾತೆ ಬದಲಾವಣೆ 81/5 ಪೈಕಿ ಹೊಸ ನಂ. 102 ಆಗಿರುತ್ತದೆ. ಕಾಲದ ನಂತರ ಗ್ರಾಮದಲ್ಲಿ ಸಾಲ ಹೆಚ್ಚಾಗಿ ತಮ್ಮ ಜೀವನ ಸಾಗಿಸಲು 1991-92ರಲ್ಲಿ ಬೇರೆಡೆಗೆ ವಲಸೆ ಹೋಗಿರುತ್ತಾರೆ. 2009ರಲ್ಲಿ ಗ್ರಾಮದ ಕಡೆ ಬಂದು ತಮ್ಮ ಆಸ್ತಿಪಾಸ್ತಿ ನೋಡಿದರೆ ಬೇರೊಬ್ಬರು ತಮ್ಮ ಜಮೀನು ಕಬಳಿಸಿರುವುದಾಗಿ ತಿಳಿದು ಬಂದಿತು. ನಂತರ ನಮ್ಮಲ್ಲಿದ್ದ ದಾಖಲೆಗಳನ್ನು ತೆಗೆದುಕೊಂಡು ಸಹಾಯಕ ಕಮೀಷನರ್ ನ್ಯಾಯಾಲಯದಲ್ಲಿ ಕಾನೂನು ರೀತಿಯಲ್ಲಿ ನಮಗೆ ನ್ಯಾಯ ಸಿಕ್ಕಿದೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದ್ದರೂ, ನಮಗೆ ಜಮೀನು ಬಿಡಲು ಹರಿರೆಡ್ಡಿ ಮುಂದಾ ಗುತ್ತಿಲ್ಲ. ಹರಿರೆಡ್ಡಿ ರವರು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠವಾಗಿದ್ದು, ನಮಗೆ ನ್ಯಾಯ ಒದಗಿಸಿಕೊಡಬೇಕು. ಹರಿರೆಡ್ಡಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹರಿರೆಡ್ಡಿ ರವರಿಗೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಲು ಖಾತೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜನಾಂಗಕ್ಕೆ ಸೇರಿರುವುದರಿಂದ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಇರುವುದರಿಂದ ಕಾನೂನು ರೀತಿಯಲ್ಲಿ ಗಾಯತ್ರಿ ಮತ್ತು ವೆಂಕಟೇಶ್ ಬೋವಿ ಅವರ ಜಮೀನನ್ನು ಬಿಡುಗಡೆಗೊಳಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರೈತ ಸೇನೆಯ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ, ಪ್ರಧಾನಕಾರ್ಯದರ್ಶಿ ಮುಜೀಬ್ ಪಾಷ, ಸಂಘಟನಾ ಕಾರ್ಯದರ್ಶಿ ಶ್ರೀಧರ್, ಕಾರ್ಯಾಧ್ಯಕ್ಷ ಟಿ.ಎ ನಾಗರಾಜ್, ಉಪಾಧ್ಯಕ್ಷ ಆನಂದಗೌಡ, ಕೋಲಾರ ತಾಲೂಕು ಅಧ್ಯಕ್ಷ ದೊಡ್ನಹಳ್ಳಿ ಕೃಷ್ಣಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ಮಾರ್ಕೆಟ್ ಕೆಂಪಣ್ಣರವರು ಒತ್ತಾಯಿಸಿದ್ದಾರೆ.
ಸಬ್ರಿಜಿಸ್ಟ್ರಾರ್ ಅಧಿಕಾರಿ ಹರಿರೆಡ್ಡಿ ಅವರಿಗೆ ಅಕ್ರಮ ದಾಖಲೆ ಮಾಡಿದ್ದು, ಇದರಲ್ಲಿ ಭಾಗಿಯಾಗಿರುವ ಎಲ್ಲಾ ಸಂಬಂಧಪಟ್ಟವರ ವಿರುದ್ಧ ವಾರದೊಳಗೆ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಜೆಡಿಎಸ್ ಮುಖಂಡರು ಗೈರು
MUST WATCH
ಹೊಸ ಸೇರ್ಪಡೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ