ಬಡವರಿಗೆ ಸ್ಪಂದಿಸುವ ಕಾಳಜಿ ಹೆಚ್ಚಾಗಲಿ
Team Udayavani, Apr 11, 2021, 4:53 PM IST
ಶ್ರೀನಿವಾಸಪುರ: ಸಮಾಜದಲ್ಲಿ ಬಡವರ ಪರ ಕೆಲಸ ಮಾಡುವುದು ಕಡಿಮೆಯಾಗಿದೆ. ರಾಜಕಾರಣಕ್ಕೆ ದುಡ್ಡು ದೊಡ್ಡದಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳು ಸಿಗುವುದು ಪ್ರಯಾಸವಾಗಿದೆ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಸಹಕಾರ ಕೇಂದ್ರ ಬ್ಯಾಂಕ್ ಶ್ರೀನಿವಾಸಪುರಶಾಖೆ, ದಳಸನೂರು ರೇಷ್ಮೆ ಬೆಳೆಗಾರರಮತ್ತು ರೈತರ ಸೇವಾ ಸಹಕಾರ ಸಂಘದಿಂದ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಸುಮ್ಮನೆ ಮಾಡುವುದಿಲ್ಲ. ಉದ್ದೇಶವಿಟ್ಟುಕೊಂಡು ಮಾಡುತ್ತಿದೆ. ಮುಖ್ಯವಾಗಿ ಬಡವರಿಗೆ ಸ್ಪಂದಿಸುವ ಕಾಳಜಿ ಹೆಚ್ಚಾಗಬೇಕು. ಇದರಿಂದ ಸೌಲಭ್ಯಗಳು ಸಿಗುತ್ತವೆ. ನಮ್ಮಲ್ಲಿ ಮೊದಲು ಪ್ರಾಮಾಣಿಕತೆ ಇರಬೇಕು. ಆಗ ನಾವು ನಾಯಕರೆನಿಸಿಕೊಳ್ಳುತ್ತೇವೆ ಎಂದರು.
ಎಲ್ಲಾ ಸಂಘಗಳಿಗೆ 25 ಕೋಟಿ ರೂ. ಸಾಲ ನೀಡಿ: ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಸಾಲ ನೀಡುವ ವಿಚಾರದಲ್ಲಿ ತಮ್ಮ ಸೊಸೈಟಿ ವ್ಯಾಪ್ತಿಗೆಬರುವ ಎಲ್ಲಾ ಗ್ರಾಮಗಳ ಮಹಿಳಾ ಸಂಘಗಳಿಗೆ ತಾರತಮ್ಯವಿಲ್ಲದೇ ಕ್ರಮ ಕೈಗೊಳ್ಳಬೇಕು. ಈಗಾಗಲೇ ಎಷ್ಟು ಸಂಘಗಳಿಗೆ ಕೊಟ್ಟಿದ್ದೇವೆ. ಮರುಪಾವತಿ ಎಷ್ಟಾಗಿದೆ ಎಂದು ತಿಳಿದುಕೊಳ್ಳಬೇಕು. ಸಣ್ಣ ಮೊತ್ತದ ಸಾಲ ಬಿಟ್ಟು ಮುಂದೆ ಸೊಸೈಟಿ ವ್ಯಾಪ್ತಿಯ ಎಲ್ಲಾ ಸಂಘಗಳಿಗೆ 25 ಕೋಟಿ ರೂ. ಸಾಲ ನೀಡುವಂತಹ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ದಿಂಬಾಲ್ ಅಶೋಕ್, ಅಶ್ವಥ್, ಬಿ.ವಿ.ವೆಂಕಟರೆಡ್ಡಿ,ತಿಮ್ಮಯ್ಯ, ಎಸ್.ವಿ.ಸುಧಾಕರ್, ಹೂಹಳ್ಳಿ ಬಾಬು, ಬಗಲಹಳ್ಳಿ ಚಂದ್ರೇಗೌಡ,ಟಿ.ಎಂ.ಶ್ರೀನಿವಾಸಗೌಡ, ಬಂಗವಾದಿಕೃಷ್ಣಮೂರ್ತಿ, ಎನ್.ಬೈಚೇಗೌಡ,ಗಾಂಡ್ಲಹಳ್ಳಿ ಶಶಿಕುಮಾರ್, ಮಾಸ್ಥೆàನಹಳ್ಳಿನಾರಾಯಣಸ್ವಾಮಿ, ದಳಸನೂರು ಶ್ರೀನಿವಾಸ್, ನಂಬಿಹಳ್ಳಿ ಎನ್.ಜಿ.ಶ್ರೀರಾಮರೆಡ್ಡಿ, ಶ್ರೀನಾಥ್, ಗಾಂಡ್ಲಹಳ್ಳಿ ನಾರಾಯಣಸ್ವಾಮಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ