ವೈಜ್ಞಾನಿಕ ಕ್ರಮ ಅನುಸರಿಸಿ ಹೆಚ್ಚಿನ ಆದಾಯ ಗಳಿಸಿ
Team Udayavani, Mar 18, 2021, 10:29 AM IST
ಶ್ರೀನಿವಾಸಪುರ: ಪ್ರಪಂಚದಲ್ಲಿ ಇಲ್ಲಿನ ಮಾವು ಹೆಸರು ಮಾಡಿದ್ದು, ಇಲ್ಲಿನ ಬೆಳೆಗೆ ರೈತರ ಜಮೀನುಗಳಲ್ಲಿ ವೈಜ್ಞಾನಿಕ ಕ್ರಮಗಳನ್ನುಅನುಸರಿಸುವ ಮೂಲಕ ಹೆಚ್ಚಿನ ಆದಾಯ ಪಡೆಯಲು ತೋಟಗಾರಿಕೆ ಅಧಿಕಾರಿಗಳು ಶ್ರಮವಹಿಸಬೇಕೆಂದು ದಕ್ಷಿಣ ಭಾರತಕ್ಕೆ ಇಸ್ರೇಲ್ಕೌನ್ಸಿಲ್ ಜನರಲ್ ಜನಾಥನ್ ಜಡಕಾ ಹೇಳಿದರು.
ಶ್ರೀನಿವಾಸಪುರ ತಾಲೂಕು ಹೊಗಳಗೆರೆತೋಟಗಾರಿಕೆ ಮಾವು ಉತ್ಕೃಷ್ಟ ಕೇಂದ್ರಕ್ಕೆ ಬುಧವಾರ ಇಸ್ರೇಲ್ ದೇಶದ ವಿಜ್ಞಾನಿಗಳು ಹಾಗೂ ರಾಜ್ಯದ ಕೃಷಿ ಕಲ್ಪ, ಮಾರುಕಟ್ಟೆ ಲಿಂಕ್ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿ ಗಳೊಂದಿಗೆ ಇಲ್ಲಿನ ಮಾವು ಬೆಳೆ ಬಗ್ಗೆ ತೋಟಗಾರಿಕೆಇಲಾಖೆ ಕೈಗೊಂಡಿರುವ ಮಾದರಿಯ ಬಗ್ಗೆಸುಮಾರು ಎರಡು ಗಂಟೆಗಳ ಕಾಲ ಗಿಡಗಳು, ಬೆಳೆ,ಭೂಮಿ ವಿಸ್ತಾರ ಅನುಸರಿಸುತ್ತಿರುವ ವಿಧಾನಗಳಬಗ್ಗೆ ಪರಿಶೀಲನೆ ನಡೆಸಿದರು.
ತಾಂತ್ರಿಕ ವ್ಯವಸ್ಥೆ: ನಂತರ ತೋಟಗಾರಿಕೆ ಸಭಾಂಗಣ.ದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ, ರೈತರಿಗೆ ಹೊಸ ಹೊಸ ವಿಧಾನ ಅನುಸರಿಸಲು ತಾವುಮಾರ್ಗದರ್ಶನ ನೀಡಬೇಕು. ಹೆಚ್ಚು ಆದಾಯಪಡೆಯಲು, ಗುಣಮಟ್ಟದಲ್ಲಿ ಬೆಳೆಯಲು ತಾಂತ್ರಿಕವ್ಯವಸ್ಥೆ ಅಳವಡಿಸಿಕೊಳ್ಳಬೇಕೆಂದರು.
ಗುಣಮಟ್ಟದ ಗಿಡ ತರಬೇಕು: ಇಸ್ರೇಲ್ನಲ್ಲಿಗುಣಮಟ್ಟದಿಂದ ಮಾವು ಬೆಳೆಸಲಾಗಿ ಉತ್ತಮಮಾರುಕಟ್ಟೆ ದೊರೆಯುತ್ತಿದೆ. ಇಲ್ಲಿಯೂಗುಣಮಟ್ಟದಲ್ಲಿ ಬೆಳೆದು ನೀಡಿದರೆ ಅದನ್ನುತಮ್ಮಿಂದ ಖರೀದಿ ಮಾಡಲಾಗುತ್ತದೆ ಎಂದರು.ಗಿಡ ನಾಟಿ ಮಾಡುವ ಮೊದಲು ಗುಣಮಟ್ಟದ ಗಿಡಗಳನ್ನು ತರಬೇಕು ಎಂದರು.
ಮಾರ್ಗದರ್ಶನ: ರೈತರಿಗೆ ತರಬೇತಿ ನೀಡುವಮೂಲಕ ಪ್ರಾಯೋಗಿಕವಾಗಿ ಅವರಿಗೆ ತಿಳಿಸಿಕೊಡುವಂತಾಗಬೇಕು. ಹೆಚ್ಚು ಲಾಭ ಪಡೆಯಲು ಹೊಸ ವಿಧಾನ ಅನುಸರಿಸಲು ಮಾರ್ಗದರ್ಶನಅಗತ್ಯ. ರೈತರು ಕಡ್ಡಾಯವಾಗಿ ಇನ್ಶೂರೆನ್ಸ್ಮಾಡಿದಲ್ಲಿ ಅಕಾಲಿಕವಾಗಿ ಮಳೆಗೆ ಬೆಳೆಹಾನಿಯಾದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೊಸ ಯೋಜನೆ: ಲಾಲ್ಬಾಗ್ನ ಕೆಎಸ್ಹೆಚ್ ಎಂಎ ಎಕ್ಸ್ಕ್ಯೂಟಿವ್ ಡೈರಕ್ಟರ್ ಡಾ.ಪರಶಿವಮೂರ್ತಿ ಮಾತನಾಡಿ, ಇಲ್ಲಿನ ಮಾವು ವಿದೇ ಶಗಳಿಗೆ ರಫ್ತು ಮಾಡಲು ರೈತ ಉತ್ಪಾದಕ ಗುಂಪುಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿಇದನ್ನು ಕೈಗಾರಿಕಾ ವಲಯವಾಗಿ ನೋಡಲುಹೊಸ ಹೊಸ ಯೋಜನೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯಿಸಿದರು.
ಹೊಗಳಗೆರೆ ತೋಟಗಾರಿಕೆ ಉತ್ಕೃಷ್ಟ ಕೇಂದ್ರದ ಯೋಜನಾಧಿಕಾರಿ ಎಂ.ಲಾವಣ್ಯ, ಇಸ್ರೇಲ್ದೇಶದ ಡೆಪ್ಯೂಟಿ ಚೀಫ್ ಮಿಷನ್ನ ಏರಿಯಲ್ಸೈದಾಮನ್, ಕೃಷಿ ಕಲ್ಪ ಚೀಫ್ ಎಕ್ಸ್ಕ್ಯೂಟಿವ್ಕಚೇರಿಯ ಸಿ.ಎಂ.ಪಾಟೀಲ್, ಕೃಷಿ ಕಲ್ಪ ಮುಖ್ಯ ಪಾಟ್ನರ್ಶಿಪ್ ಮತ್ತು ಮಾರ್ಕೆಟಿಂಗ್ನ ಪವನ್ ಪಾಟೀಲ್, ತೊಟಗಾರಿಕೆಯ ಬಾಲಾಜಿ, ಬಾಲಕೃಷ್ಣ, ರೇವಂತ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು