ಜಿಪಂ,ತಾಪಂ ಚುನಾವಣೆ:ರಾಜಕೀಯ ಕಸರತ್ತು ಶುರು
Team Udayavani, Jul 5, 2021, 6:53 PM IST
ಬಂಗಾರಪೇಟೆ: ತಾಲೂಕು ವ್ಯಾಪ್ತಿಯಲ್ಲಿ ಐದುಜಿಪಂ,13 ತಾಪಂ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಮೀಸಲಾತಿ ಪ್ರಕಟಿಸಿದ್ದು, ಕೆಲವು ಆಕಾಂಕ್ಷಿಗಳು ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಬಾರಿಎಲ್ಲಾ ಜಿಪಂಕ್ಷೇತ್ರಗಳಲ್ಲಿ ಹೊರಗಿನವರು, ಅದರಲ್ಲೂಪ್ರಭಾವಿಗಳೇಕಣಕ್ಕಿಳಿಯಲು ಸಿದ œತೆ ನಡೆಸಿದ್ದಾರೆ.ಬೂದಿಕೋಟ ೆ ಹಾಗೂ ಡಿ.ಕೆ.ಹಳ್ಳಿ ಪಾ Éಂಟೇಶನ್ ಜಿಪಂಕ್ಷೇತ್ರ¨ ಮೀಸಲಾತಿ ಸಾಮಾನ್ಯ ಆಗುವಕನಸುಕಾಣುತ್ತಿದ ªಕಾಂಗ್ರೆಸ್,ಬಿಜೆಪಿಪ್ರಭಾವಿಮುಖಂಡರಿಗೆತೀವ್ರ ನಿರಾಸೆ ಮೂಡಿದೆ. ಕಾರಹಳ್ಳಿ ಕ್ಷೇತ್ರ ಎಸ್ಸಿಮೀಸಲಾತಿ ಬದಲಿಗೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಅಲ್ಲಿ ಹಿಂದೆ ಗೆದ್ದಿದ ª ಸದಸ್ಯರು ಬೇರೆಕ್ಷೇತ್ರಗಳತ ¤ ಮುಖ ಮಾಡುತ್ತಾà ಕಾದುನೋಡಬೇಕಿದೆ.
2015ರಲ್ಲಿ ನಡೆದ ಜಿಪಂ ಚುನಾವಣೆಯಲ್ಲಿಚಿಕ್ಕಅಂಕಂಡಹಳ್ಳಿ ಕ್ಷೇತ್ರದಿಂದ ಕೆ.ಎಸ್.ಮಾಲಾಶ್ರೀನಿವಾಸಗೌಡ (ಬಿಜೆಪಿ), ಡಿ.ಕೆ.ಹಳ್ಳಿ ಕ್ಷೇತ್ರದಲ್ಲಿಬಿ.ವಿ.ಮಹೇಶ್(ಬಿಜೆಪಿ),ಕಾಮಸಮುದ್ರಕ್ಷೇತ್ರದಲ್ಲಿಶಾಹಿದ್ ಶಹಾಜಾದ್ (ಕಾಂಗ್ರೆಸ್) ಹಾಗೂಬೂದಿಕೋಟೆ ಕ್ಷೇತ್ರದಲ್ಲಿ ಪಾರ್ವತಮ್ಮ ನಾಗರಾಜ್(ಕಾಂಗ್ರೆಸ್) ಗೆಲುವು ಸಾಧಿಸಿದ್ದರು.
ಪ್ರತಿಷ್ಠಿತ ಜಿಪಂ ಕ್ಷೇತ್ರಗಳು: ತಾಲೂಕಿನ ಐದೂಜಿಪಂ ಕ್ಷೇತ್ರಗಳು ಪ್ರತಿಷ್ಠಿತ ಕ್ಷೇತ್ರಗಳಾಗಿದ್ದು, ಡಿ.ಕೆ.ಹಳ್ಳಿ ಪ್ಲಾಂಟೇಶನ್, ಕಾಮಸಮುದ್ರ ಹಾಗೂಬೂದಿಕೋಟೆ ಕ್ಷೇತ್ರಗಳಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿರಿಸಿರುವುದರಿಂದ ಈ ಭಾಗದ ಪ್ರಭಾವಿಮುಖಂಡರು ಸ್ಪರ್ಧಿಸಲು ತಮ್ಮ ಪತ್ನಿಯರನ್ನುಕಣಕ್ಕಿಳಿಸಲು ಪ್ರಯತ ° ನಡೆಸುತ್ತಿದ್ದಾರೆ.ಸಾಮಾನ್ಯ ಮೀಸಲಾತಿಯಿಂದ ವಂಚಿತರಾಗಿರುÊ ಪ್ರಭಾವಿ ಮುಖಂಡರು ಪತ್ನಿಯರನ್ನು ಕಣಕ್ಕಿಳಿಸುವಅಂತಿಮ ಪ್ರಯತ ° ಸಹ ನಡೆಸುತ್ತಿರುವುದರಿಂದ ಕಾಂಗ್ರೆಸ್-ಬಿಜೆಪಿಯಲ್ಲಿ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ.
ಈ ಎರಡೂ ಪಕ್ಷದಿಂದ ಟಿಕೆಟ್ವಂಚಿತರಾದ ಮುಖಂಡರು, ಜೆಡಿಎಸ್ನಿಂದಸ್ಪರ್ಧಿಸಲು ಪ್ರಯತ್ನ ನಡೆಸಲಿದ್ದಾರೆ ಎಂದುಹೇಳಲಾಗುತ್ತಿದೆ.ತಾಲೂಕಿನ ಜಿಪಂ, ತಾಪಂ ಕ್ಷೇತ್ರಗಳಿಗೆ ಕರಡುಮೀಸಲಾತಿ ಪ್ರಕಟಗೊಂಡಒಂದೇ ದಿನದಲ್ಲಿ ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿದಿನೇ ದಿನೆ ಹೆಚ್ಚಾಗುತ್ತಿದೆ.ಮೂರು ಪಕ ÒಗÙ ಟಿಕೆಟ್ಆಕಾಂಕ್ಷಿಗಳು ಈಗಾಗಲೇಪ್ರಚಾರದಲ್ಲಿ ತೊಡಗಿದ್ದಾರೆ.
ರಾಜಕೀಯ ಪಕ್ಷಗಳು ಸಹಜಿಪಂ ಕ್ಷೇತ್ರವಾರು ಸಭೆ ಸಹಪ್ರಾರಂಭಿಸಿದ್ದಾರೆ.ಕಾರಹಳ್ಳಿ ಕ್ಷೇತ್ರ: ತಾಲೂಕಿನಲ್ಲಿಯೇ ಪ್ರತಿಷ್ಠಿತ ಕ್ಷೇತ್ರಕಾರಹಳ್ಳಿ. ಈ ಬಾರಿಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಈಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಭಾವಹೊಂದಿದೆ. ಈ ಮೂರೂ ಪಕ್ಷಗಳಲ್ಲಿ ಅಭ್ಯರ್ಥಿಗಳ ದಂಡೇ ಇದೆ. ತಾಲೂಕಿನ ಐದು ಕ್ಷೇತ್ರಗಳಪೈಕಿ ಈ ಕ್ಷೇತ್ರವು ಹೆಚ್ಚು ಮಹತ Ì ಪಡೆದುಕೊಂಡಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದಂತೆ, ಈಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಗೆ 2 ರಿಂದ 3 ಕೋಟಿರೂ. ಖರ್ಚು ಮಾಡುವ ಸಾಧ್ಯತೆ ಇದೆ.
ಈಕ್ಷೇತ್ರದಲ್ಲಿ ಪಕ್ಷ ಸಂಘಟನೆಗಿಂತ ಹಣ ಖರ್ಚುಮಾಡುವವರ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವಬಗ್ಗೆ ರಾಜಕೀಯ ಪಕ್ಷಗಳು ಚಿಂತನೆ ನಡೆಸುತ್ತಿವೆಎನ್ನಲಾಗಿದೆ.
ಹುಣಸವಳ್ಳಿ ಕ್ಷೇತ್ರ: ಹುಣಸನಹಳ್ಳಿ ಜಿಪಂ ಕ್ಷೇತ್ರವುಎಸ್ಸಿಗೆ ಮೀಸಲಾಗಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಪೈಪೋಟಿ ಇದೆ. ಡಿ.ಕೆ.ಹಳ್ಳಿ ಕ್ಷೇತ್ರದಲ್ಲಿ ಜಿಪಂಸದಸ್ಯರಾಗಿದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಪುತ್ರ ಬಿ.ವಿ.ಮಹೇಶ್ ಬಿಜೆಪಿಯಿಂದಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ,ಬಿ.ವಿ.ಮಹೇಶ್ 2023ರ ವಿಧಾನಸಭೆ ಚುನಾವಣೆಗೆ ಬಂಗಾರಪೇಟೆ ಕ್ಷೇತ್ರದ ಪ್ರಬಲ ಆಕಾಂಕ್ಷಿ ಆಗಿದ್ದಾರೆಂದು ಸ್ವತಃ ಪಕ್ಷದ ಸಂಸದ ಎಸ್.ಮುನಿಸಾ Ìಮಿ ಅವರೇ ಘೋಷಣೆ ಮಾಡಿರುವುದರಿಂದ ಬಿ.ವಿ.ಮಹೇಶ್ ಪ್ರಭಾವಿತರಾಗಿದ್ದಾರೆ.ಇನ್ನೂ ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಗಳಸಂಖ್ಯೆ ಹೆಚ್ಚಾಗಿದ್ದರೂ ಬಿಜೆಪಿಗೆ ನೇರ ಪೈಪೋಟಿನೀಡಲು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ