ಕೆರೆಯಲ್ಲಿ ಮೀನುಗಳ ಸಾವು: ಪ್ರತಿಭಟನೆ
Team Udayavani, Mar 2, 2019, 7:16 AM IST
ಕೆಜಿಎಫ್: ಅಕ್ಕಿ ಗಿರಣಿಯಿಂದ ಬರುವ ಮಲಿನ ತ್ಯಾಜ್ಯ ಕೆರೆಯಲ್ಲಿರುವ ಜೀವರಾಶಿಗಳನ್ನು ನಾಶಮಾಡಿದೆ ಎಂದು ಆರೋಪಿಸಿ ಕರ್ನಾಟಕ ಸಿಂಹ ಘರ್ಜನೆ ಸಂಘಟನೆ ಕಾರ್ಯಕರ್ತರು ದಾಸರಹೊಸಹಳ್ಳಿ ಬಳಿ ಪ್ರತಿಭಟನೆ ನಡೆಸಿದರು.
ಕೆರೆಯ ಮಲಿನ ನೀರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಚಿನ್ನಕೋಟೆ ಗ್ರಾಪಂ ಮುಂಭಾಗದಲ್ಲಿ ಕೊಂಚ ಕಾಲ ಧರಣಿ ನಡೆಸಿದ ಕಾರ್ಯಕರ್ತರು, ನಂತರ ಖಾಸಗಿ ಅಕ್ಕಿ ಗಿರಣಿಮುಂಭಾಗದಲ್ಲಿ ಸತ್ತ ಮೀನುಗಳನ್ನು ಸುರಿದು ಪ್ರತಿಭಟನೆ ಮಾಡಿದರು.
ಕೆರೆಗೆ ತ್ಯಾಜ್ಯ ನೀರನ್ನು ಬಿಡಬಾರದು ಎಂದು ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಗ್ರಾಪಂಗೆ ತಿಳಿಸಲಾಗಿತ್ತು. ಆದರೆ, ಅಧಿಕಾರಿಗಳು ಅಕ್ಕಿ ಗಿರಣಿ ಮಾಲಿಕರೊಂದಿಗೆ ಶಾಮೀಲಾಗಿ, ಕ್ರಮ ಕೈಗೊಂಡಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಪಿಡಿಒ, ಗಿರಣಿ ಮಾಲಿಕರನ್ನು ಸ್ಥಳಕ್ಕೆ ಕರೆಸಿದರು. ಇನ್ನು ಮುಂದೆ ಗಿರಣಿ ತ್ಯಾಜ್ಯವನ್ನು ಕೆರೆಗೆ ಬಿಡಬಾರದು ಎಂದು ಎಚ್ಚರಿಕೆ ನೀಡಿದರು. ಕೂಡಲೇ ಜೆಸಿಬಿ ತಂದು ಕೆರೆಗೆ ಹೋಗುತ್ತಿದ್ದ ನೀರಿಗೆ ತಡೆ ಹಾಕಿದರು.
ಸಂಘದ ರಾಜ್ಯ ಅಧ್ಯಕ್ಷ ಪ್ರಸನ್ನಕುಮಾರ ಸ್ವಾಮಿ, ಪದಾಧಿಕಾರಿಗಳಾದ ಉರಿಗಿಲಿ ಚಲಪತಿ, ಸುರೇಶ್ ನಾಯಕ್, ಎಸ್.ಜಿ.ಕೋಟೆ ಶ್ರೀನಿವಾಸ್, ರವಿಕುಮಾರ್, ಗೌರಿಶಂಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ