ಅಪಾಯ ಸಂಭವಿಸುವ ಮುನ್ನವೇ ಕಾಂಪೌಂಡ್ ಸರಿಪಡಿಸಿ
ಶಿಥಿಲಗೊಂಡಿರುವ ಪಶು ವೈದ್ಯ ಆಸ್ಪತ್ರೆ ಕಾಂಪೌಂಡು
Team Udayavani, Aug 3, 2019, 4:26 PM IST
ಮುಳಬಾಗಿಲು ನಗರದ ಪಶು ವೈದ್ಯ ಆಸ್ಪತ್ರೆ ಕಾಂಪೌಂಡ್ ಬಿರುಕು ಬಿಟ್ಟಿರುವುದು.
ಮುಳಬಾಗಿಲು: ನಗರದಲ್ಲಿರುವ ಪಶು ವೈದ್ಯ ಆಸ್ಪತ್ರೆ ಮತ್ತು ಸಹಾಯಕ ನಿರ್ದೇಶಕರ ಕಚೇರಿಗೆ ಹಾಕಿರುವ ಕಾಂಪೌಂಡ್ ಸಂಪೂರ್ಣ ಶಿಥಿಲಗೊಂಡಿದ್ದು, ಅವಘಡ ಸಂಭವಿಸುವ ಮುನ್ನಾ ತೆರವು ಮಾಡಿ ಹೊಸದಾಗಿ ನಿರ್ಮಿಸಬೇಕಿದೆ.
ನಗರದಲ್ಲಿ ಆಲಂಗೂರು ಪಿ.ಚಂಗೇಗೌಡರು ದಾನ ಮಾಡಿದ್ದ ಸ್ಥಳದಲ್ಲಿ 1940ರಲ್ಲಿ ಪಶು ವೈದ್ಯ ಆಸ್ಪತ್ರೆ ನಿರ್ಮಿಸಲಾಗಿತ್ತು. ಸದ್ಯ ಸಹಾಯಕ ನಿರ್ದೇಶಕರು, ನಾಲ್ವರು ಪಶು ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ತಾಲೂಕಿನ ರೈತರು, ನಗರದಲ್ಲಿ ಸಾಕಿರುವ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಅನುಕೂಲವಾಗಿದೆ. ಹಳೇಯದಾದ ಕಟ್ಟಡಕ್ಕೆ ಹಾಕಿದ್ದ ನಾಮಫಲಕ ಕಿತ್ತುಹೋಗಿತ್ತು. 5 ವರ್ಷಗಳ ಹಿಂದೆ ಅಂದಿನ ಸಹಾಯಕ ನಿರ್ದೇಶಕ ಡಾ.ರಮಾನಂದ್ ಹೊಸದಾಗಿ ಹಾಕಿಸಿದ್ದರು. ಆದರೆ, ಶಿಥಿಲಗೊಂಡಿರುವ ಗೋಡೆ ಯಾರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಕಲ್ಲು ತೆಗೆದರೆ ಬೀಳುತ್ತದೆ: ಕಚೇರಿ ರಕ್ಷಣೆ ದೃಷ್ಟಿಯಿಂದ ಹಾಕಿದ್ದ ಕಾಂಪೌಂಡ್ ಗೋಡೆ ಹಲವು ವರ್ಷಗಳಿಂದ ಬಿರುಕುಬಿಟ್ಟು, ಬಿದ್ದು ಹೋಗುವಂತಿದೆ. ಅಧಿಕಾರಿಗಳು ಅದನ್ನು ಸರಿಪಡಿಸುವ ಬದಲು, ಕಲ್ಲು ಚಪ್ಪಡಿ ಇಟ್ಟು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಅನಾರೋಗ್ಯ, ವಿಮೆ ಹೀಗೆ ಹಲವು ಕಾರಣಗಳಿಗಾಗಿ ಜಾನುವಾರುಗಳನ್ನು ಇಲ್ಲಿಗೆ ರೈತರು ಕರೆದುಕೊಂಡು ಬರುತ್ತಾರೆ. ಒಂದು ವೇಳೆ ಕಾಂಪೌಂಡು ಪಕ್ಕದಲ್ಲಿ ನಡೆದು ಹೋಗಬೇಕಾದ್ರೆ, ಒರಗಿನಿಂತಾದ ಗೋಡೆ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಗೇಟ್ ಅಳವಡಿಸಿರುವ ಜಾಗದಲ್ಲೇ ಗೋಡೆ ಸಂಪೂರ್ಣ ಶಿಥಿಲಗೊಂಡಿದೆ. ಕಲ್ಲು ಚಪ್ಪಡಿ ತೆಗೆದರೆ ಗೋಡೆ ಕೆಳಗೆ ಬೀಳುತ್ತದೆ. ಇದನ್ನು ನೋಡಿಕೊಂಡು ಓಡಾಡುವ ಪಶು ವೈದ್ಯರಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸದಿರುವುದು ವಿಪರ್ಯಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ