ಫುಟ್ಪಾತ್ ಅಂಗಡಿಗಳ ತೆರವು ಕಾರ್ಯ
ಬೆಳ್ಳಂಬೆಳಗ್ಗೆ ಹಳೆ ಬಸ್ ನಿಲ್ದಾಣದಲ್ಲಿ ಗೂಡಂಗಡಿಗಳ ತೆರವು
Team Udayavani, Jul 24, 2019, 1:40 PM IST
ಕೋಲಾರ ನಗರದ ಹಳೇ ಬಸ್ ನಿಲ್ದಾಣ ಮತ್ತು ಮೆಕ್ಕೆ ವೃತ್ತದಿಂದ ಕಾಲೇಜು ವೃತ್ತದವರೆಗೂ ಪೆಟ್ಟಿಗೆ ಅಂಗಡಿ ಮತ್ತು ಫುಟ್ಪಾತ್ ತೆರವುಗೊಳಿಸಲಾಯಿತು.
ಕೋಲಾರ: ತಡವಾಗಿಯಾದರೂ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಇಟ್ಟಿದ್ದ ಪೆಟ್ಟಿಗೆ ಅಂಗಡಿ ಹಾಗೂ ಫುಟ್ಪಾತ್ ಅಂಗಡಿಗಳನ್ನು ತೆರವುಗೊಳಿಸಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ಹೂ, ಹಣ್ಣು ಮತ್ತು ಟೀ ಅಂಗಡಿಗಳನ್ನು ಅಕ್ರಮವಾಗಿ ಅತಿಕ್ರಮಿಸಿದ್ದ ಅಂಗಡಿಗಳನ್ನು ಪೊಲೀಸರ ಸರ್ಪಗಾವಲಿನಲ್ಲಿ ನಗರಸಭೆ ಸಿಬ್ಬಂದಿ ತೆರವು ಕಾರ್ಯ ನಡೆಸಿದರು.
ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಜೆಸಿಬಿ ಜತೆಗೆ ಬಂದಿರುವುದನ್ನು ಅರಿತ ಕೆಲ ಹೂವಿನ ಅಂಗಡಿ, ಟೀ ಅಂಗಡಿ ಹಾಗೂ ಹೋಟೆಲ್ ಮಾಲಿಕರು ಸ್ವಯಂ ಪ್ರೇರಿತರಾಗಿ ತೆರವಿಗೆ ಮುಂದಾದರು. ತಾವು ಅಂಗಡಿಗೆ ಹಾಕಿಕೊಂಡಿದ್ದ ಶೀಟ್, ಚಪ್ಪರ, ಟಾರ್ಪಲ್, ಅಂಗಡಿ ಮುಂದೆ ಹಾಕಿದ್ದ ನಾಮಫಲಕ ಮತ್ತಿತರ ವಸ್ತುಗಳನ್ನು ತೆಗೆದುಕೊಂಡರು.
ಮೊದಲು ಸರ್ವಜ್ಞ ಉದ್ಯಾನ ಮುಂಭಾಗ ಇಟ್ಟಿದ್ದ ಪೆಟ್ಟಿಗೆ ಅಂಗಡಿಗಳು ಆನಂತರ ನಗರದ ನಚಿಕೇತ ನಿಲಯದ ಮುಂಭಾಗ ಅಕ್ರಮವಾಗಿ ಅತಿಕ್ರಮಿಸಿದ್ದ ಹಣ್ಣು ಅಂಗಡಿಗಳ ತೆರವು ಗೊಳಿಸಿದ ನಂತರ ಹಳೇ ಬಸ್ ಬಿಲ್ದಾಣದಲ್ಲಿ ನೂರಾರು ಹೂವಿನ ಅಂಗಡಿಗಳು ತಲೆ ಎತ್ತಿದ್ದ ಅಂಗಡಿ ತೆರವುಗೊಳಿಸಿದರು.
ಜಾಗ ಅತಿಕ್ರಮಣ:ಹೂವಿನ ಅಂಗಡಿ ಮಾಲಿಕರು ವಿದ್ಯುತ್ ಸಂಪರ್ಕ ಪಡೆಯಬೇಕೆಂದರೆ ನಗರಸಭೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಆದರೆ, ಇಲ್ಲಿನ ಅಂಗಡಿ ಮಾಲಿಕರು ಯಾವುದನ್ನೂ ಪಡೆಯದೇ ನಗರಸಭೆ ಜಾಗವನ್ನು ಆಕ್ರಮಿಸಿಕೊಂಡಿದ್ದರು.
ಮಂಗಳವಾರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ್ದು ತೆರವು ಗೊಂಡ ಜಾಗದಲ್ಲಿ ನಗರಸಭೆ ವತಿಯಿಂದ 1.35 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು 15 ದಿನಗಳೊಳಗೆ ಟೆಂಡರ್ ಕರೆದು ಅತಿ ಶೀಘ್ರದಲ್ಲೇ ಪೂರ್ಣಗೊಳಿಸಿ ಹೂವಿನ ಮಾರುಕಟ್ಟೆಯನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.
2 ದಿನ ಕಾರ್ಯಾಚರಣೆ:ಮೊದಲನೇ ಹಂತವಾಗಿ ಕೋಲಾರ ನಗರದ ಹಳೆ ಬಸ್ ನಿಲ್ದಾಣದಲ್ಲಿ ತೆರವುಗೊಳಿಸಿದ್ದು, ಬುಧವಾರವೂ ನಗರದ ವಿವಿಧ ಕಡೆ ತೆರವು ಕಾರ್ಯ ಮುಂದುವರಿಯಲಿದೆ, ನಗರದಲ್ಲಿ ಎಲ್ಲೇ ಫುಟ್ಪಾತ್ ಮತ್ತು ನಗರಸಭೆಗೆ ಸೇರಿದ ಜಾಗ ಒತ್ತುವರಿಗೊಂಡವರ ವಿರುದ್ಧ ಎರಡು ದಿನಗಳ ಕಾಲ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ನಗರಸಭೆ ಆಯುಕ್ತ ಸತ್ಯನಾರಾಯಣ ತಿಳಿಸಿದರು.
ನಿರ್ಲಕ್ಷ್ಯಿಸಿದ್ದರು: ಫುಟ್ಪಾತ್ ಅಂಗಡಿಗಳ ತೆರವುಗೊಳಿಸುವ ಮುನ್ನಾ ದಿನವೇ ಆಟೋ ಪ್ರಚಾರದ ಮೂಲಕ ತೆರವುಗೊಳಿಸುವ ಎಚ್ಚರಿಕೆ ನೀಡಲಾಗಿತ್ತು. ಆದರೂ, ಕೆಲವು ಅಂಗಡಿ ಮಾಲಿಕರು ನಗರಸಭೆಯದು ಮಾಮೂಲಿ ಎಚ್ಚರಿಕೆ ಎನ್ನುವಂತೆ ನಿರ್ಲಕ್ಷಿಸಿದ್ದರು.
ಮಂಗಳವಾರ ಬೆಳಗ್ಗೆ ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಪೆಟ್ಟಿಗೆ ಅಂಗಡಿಗಳನ್ನು ನಗರಸಭೆ ಲಾರಿಗೆ ತುಂಬುವ ಸಂದರ್ಭದಲ್ಲಿ ಮಾಲಿಕರು ಪೆಟ್ಟಿಗೆ ಉಳಿಸುವಂತೆ ನಗರಸಭೆ ಅಧಿಕಾರಿಗಳೊಂದಿಗೆ ಗೋಗೆರೆದರೂ ಅಧಿಕಾರಿಗಳು ಬಿಡಲಿಲ್ಲ.
ಕೆಲವು ದಿನಗಳ ಹಿಂದಷ್ಟೇ ಗ್ರಂಥಾಲಯ ಹಾಗೂ ಟಿ.ಚನ್ನಯ್ಯ ರಂಗಮಂದಿರದ ಮುಂಭಾಗ ಹಣ್ಣಿನ ಹಾಗೂ ತರಕಾರಿ ಅಂಗಡಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಗರಸಭೆ ನಡೆಸಿತ್ತು. ಆದರೆ, ಮತ್ತೇ ಮೂರೇ ದಿನಕ್ಕೆ ಮತ್ತೇ ಅಂಗಡಿಗಳನ್ನು ಇಡಲಾಗಿತ್ತು. ಈಗಲೂ ನಗರಸಭೆ ಇಂತದ್ದೇ ಕಾರ್ಯಾಚರಣೆ ನಡೆಸಿ ನಂತರ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಫುಟ್ಪಾತ್ ಅತಿಕ್ರಮಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸಾರ್ವಜನಿಕರು ದೂರುತ್ತಿದ್ದುದು ಕೇಳಿ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಜೆಡಿಎಸ್ ಮುಖಂಡರು ಗೈರು
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್