ಗೌರಿಪೇಟೆ, ಕುರುಬರಪೇಟೆ ಸೀಲ್ಡೌನ್ ತೆರವು
Team Udayavani, Jun 30, 2020, 6:56 AM IST
ಕೋಲಾರ: ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸೀಲ್ ಡೌನ್ ಮಾಡಿದ್ದ ಗೌರಿಪೇಟೆ ಹಾಗೂ ಕುರುಬರಪೇಟೆಯನ್ನು ಸೋಮವಾರ ಮುಕ್ತಗೊಳಿಸಲಾಯಿತು. ಈ ವೇಳೆ ಕೋವಿಡ್ 19 ವಾರಿಯರ್ಸ್, ಸ್ವಯಂ ಸೇವಕರಿಗೆ, ನಗರಸಭೆ ಹಾಗೂ ಪೊಲೀಸ್ ಸಿಬ್ಬಂದಿಗೆ ಸ್ಥಳೀಯ ನಿವಾಸಿಗಳು ಅಭಿನಂದನೆ ಸಲ್ಲಿಸಿದರು.
ಗೌರಿಪೇಟೆ, ಕುರುಬರಪೇಟೆ, ಜೂನಿಯರ್ ಕಾಲೇಜ್ ವೃತ್ತದಿಂದ ಇಟಿಸಿಎಂ ವೃತ್ತದ ರಸ್ತೆ ಸೀಲ್ ಡೌನ್ ತೆರವುಗೊಳಿಸಲಾಯಿತು. ತೆರವಿನ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಶ್ರೀಕಾಂತ್, ಸೋಂಕಿತ ಪಿ-3007 ವಾಸವಿದ್ದ ವಾರ್ಡ್ ಅನ್ನು ಒಂದು ತಿಂಗಳ ಹಿಂದೆ ಜಿಲ್ಲಾಡಳಿತ ಸೀಲ್ ಡೌನ್ ಮಾಡಿತ್ತು. ಸೋಂಕಿತ ಗುಣಮುಖವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
28 ದಿನಗಳ ಕಾಲ ಸೀಲ್ಡೌನ್ ಸಮಯದಲ್ಲಿ ಈ ಭಾಗದ ಜನರು ಜಿಲ್ಲಾಡಳಿತದ ಜತೆ ಸಹಕಾರ ನೀಡಿದ್ದಾರೆ. ಹಗಲು ರಾತ್ರಿಯನ್ನದೆ ಸ್ವಯಂಸೇವಕರು, ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸೇವೆ ಸಲ್ಲಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೀಲ್ ಡೌನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ ಸ್ವಯಂಸೇವಕರಿಗೆ ನಗರಠಾಣೆ ನಿರೀಕ್ಷಕ ಅಣ್ಣಯ್ಯ ಕೃತಜ್ಞತೆ ಸಲ್ಲಿಸಿದರು.
ನಗರದ ಗೌರಿಪೇಟೆ, ಕೋಟೆ, ಗಾಂಧಿ ನಗರ ಹಾಗು ಹಾರೋಹಳ್ಳಿ ಸೇರಿ ನಾಲ್ಕು ಕಡೆ ಚೆಕ್ ಪೋಸ್ಟ್ ತೆರವುಗೊಳಿಸಲಾಗಿದ್ದು. ಕಂಟೇನ್ಮೆಂಟ್ ಪ್ರದೇಶದಲ್ಲಿದ್ದ 14 ಚೆಕ್ ಪೋಸ್ಟ್ ಗಳಲ್ಲಿ 4 ತೆರವುಗೊಳಿಸಲಾಗಿದೆ. ಅಲ್ಲಿ ನಿಯೋಜಿಸಲಾಗಿದ್ದ ಅಧಿಕಾರಿಗಳನ್ನು ಬೇರೆಡೆ ನಿಯೋಜಿಸಲಾಗಿದೆ. ಸೀಲ್ ಡೌನ್ ತೆರವಿನ ವೇಳೆ ಸ್ವಯಂ ಸೇವಕರಾದ ವೈ.ಹರ್ಷಿತ್, ಲಕ್ಷಿಪತಿ(ಬಾಯ್ಸ) ರೇಣು, ಚಂದ್ರಮೋಹನ್, ವಿಜಯಕುಮಾರ್, ಮಂಜುನಾಥ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…