ಸಂತೆ ಮೈದಾನ ಕಬಳಿಸುವ ಯತ್ನಕ್ಕೆ ಹೈಕೋರ್ಟ್ ತಡೆಯಾಜ್ಞೆ
ನಗರಸಭಾ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದರು. ಆಯುಕ್ತರು ಕೋರ್ಟ್ಗೆ ಹಾಜರಾಗಿರಲಿಲ್ಲ.
Team Udayavani, Jul 7, 2022, 6:19 PM IST
ಕೋಲಾರ: ನಗರದ ಟಿ.ಚನ್ನಯ್ಯ ಸಂತೆ ಮೈದಾನದ ಸ್ವತ್ತಿಗೆ ನಗರಸಭಾ ಸದಸ್ಯರಿಂದ ಅತಿಕ್ರಮಣ ಮತ್ತು ಕಬಳಿಕೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಚೆನ್ನಯ್ಯ ಅವರ ಪುತ್ರ ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ತಿಳಿಸಿದ್ದಾರೆ.
ಸಂತೆ ಮೈದಾನದ ರೈತರು, ತಕರಾರಿ ವ್ಯಾಪಾರಸ್ಥರು, ಮತ್ತು ಬೆಳೆಗಾರರು ಸಂತೆ ಮೈದಾನಕ್ಕೆ ಕಾಯ್ದಿರಿಸಿದ ಸ್ವತ್ತಿನಲ್ಲಿ ಅಂದರೆ 0.22 ಗುಂಟೆ (6. 29 ಎಕರೆ ಪೈಕಿ) ಈ ಹಿಂದೆ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ವೇಳೆಯಲ್ಲಿ ಸ್ವತ್ತಿನಲ್ಲಿ ಏಕಾಏಕಿ ನಗರಸಭಾ ಸದಸ್ಯರಾದ ಮಂಜುನಾಥ್ ಮತ್ತು ಇದಾಯತ್ವುಲ್ಲಾ ರವರುಗಳು ದೌರ್ಜನ್ಯದಿಂದ ಕೊಳವೆ ಬಾವಿ ಮತ್ತು ಗುಂಡಿ ತೋಡಿದ್ದರು.
ಕೋರ್ಟಿನ ಹಿಂದಿನ ಆದೇಶವಿದ್ದರೂ ಕಾನೂನು ಬಾಹಿರವಾಗಿ ಸಂತೆ ಮೈದಾನದ ಪ್ರದೇಶದಲ್ಲಿ ಸ್ವತ್ತನ್ನು ಮತ್ತು ವ್ಯಾಪಾರ ಮಾಡುವ ಸ್ಥಳವನ್ನು ದ್ವಂಸ ಮಾಡಿದ್ದಾರೆ ಎಂದು ದೂರಿರುವ ಅವರು, ಈ ಬಗ್ಗೆ ಸಂತೆ ಮೈದಾನದ ವರ್ತಕರು ಮತ್ತು ರೈತರು ಹೈಕೋರ್ಟ್ ಮೊರೆ ಹೋಗಿ ದಾಖಲೆಗಳನ್ನು ಹಾಜರು ಪಡಿಸಿದ್ದು, ಕೋರ್ಟ್ ಈ ಬಗ್ಗೆ ನಗರಸಭಾ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದ್ದರು. ಆಯುಕ್ತರು ಕೋರ್ಟ್ಗೆ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ದಾಖಲೆ ಮತ್ತು ಹಿಂದೆ ಆದೇಶದನ್ವಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಹಿಂದೆ ನಗರಸಭಾ ಆಯುಕ್ತರಿಗೆ ನೀಡಿದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿ ರುವು ದಿಲ್ಲ. ಆದ್ದರಿಂದ ವ್ಯಾಪರಸ್ಥರು ಮತ್ತು ರೈತರು ನಗರ ಸಭಾ ಆಯುಕ್ತರು ಇದಕ್ಕೆ ಪ್ರೇರಣೆ ಕೊಟ್ಟಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರಕರಣದ ಪರವಾಗಿ ಉಚ್ಛ ನ್ಯಾಯಾಲಯದಲ್ಲಿ ವಕೀಲರಾದ ಎಂ.ಶಿವಪ್ರಕಾಶ್ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಜೆಡಿಎಸ್ ಮುಖಂಡರು ಗೈರು
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್