ಭೂ ಮಂಜೂರಲ್ಲಿ ಬಡವರನ್ನು ಕೈಬಿಟ್ಟರೆ ಸುಮ್ಮನಿರಲ್ಲ


Team Udayavani, Jan 30, 2019, 7:29 AM IST

bhu-manj.jpg

ಶ್ರೀನಿವಾಸಪುರ: 1992 ರಲ್ಲಿ ಬಡವರು ಕೊಟ್ಟಿರುವ ಅರ್ಜಿದಾರರಿಗೆ ಸಾಗುವಳಿ ಚೀಟಿ ಕೊಡದೆ ಅರಣ್ಯ ಭೂಮಿ ಎಂದು ನೋಟಿಸ್‌ ನೀಡಿ, ಡಾಬಾಗಳಲ್ಲಿ ಕುಳಿತು ಅರಣ್ಯ ಒತ್ತುವರಿ ಮಾಡಿದ ಬಲಾಡ್ಯರಿಗೆ ಆರಿrಸಿ ಕೊಟ್ಟಿರುವುದು ತನಗೆ ಗೊತ್ತಿದೆ. ಕೂಡಲೇ 4 ತಿಂಗಳೊಳಗೆ ಇರುವ ಫೈಲು, ಪಿ.ನಂಬರ್‌ ಭೂಮಿ ಕ್ಲಿಯರ್‌ ಮಾಡಬೇಕೆಂದು ತಹಶೀಲ್ದಾರ್‌ರಿಗೆ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಬಡವರ ಅಕ್ರಮ ಸಕ್ರಮ ಅರ್ಜಿಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಆತುರ ಬೀಳಲ್ಲ: 1992ರಲ್ಲಿ ಪಡೆದ 248 ಅರ್ಜಿ ಪೈಕಿ ಇನ್ನೂ 124 ಅರ್ಜಿದಾರರು ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆಂದು ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ತಿಳಿಸಿದಾಗ ಬಡವರ ಫೈಲು ಕೆಳಗಾಕಿ ಕೊಂಡರೆ ರೈತರೇನಾಗಬೇಕೆಂದು ಕೆಂಡಾಮಂಡಲ ವಾದರು. ಅಲ್ಲ ದೇ, ನಾವು ಮಾತಾಡಿದರೆ ರಾಜಕಾ ರಣಿಗಳೆನ್ನುತ್ತಾರೆ. ಆದರೆ ತಾನು ಆತುರಬಿದ್ದು ಮಾತನಾಡುವುದಿ ಲ್ಲ. ರೈತರು, ಬಡವರು, ಕೂಲಿಕಾರರು, ಪರಿಶಿಷ್ಟರು ಎಕರೆ, ಅರ್ಧ ಎಕರೆ ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದರೆ, ಅದನ್ನು ನೀವೇ ಅರಣ್ಯ ಭೂಮಿ ಎನ್ನಲು ನಿಮಗೇನು ಗೊತ್ತಿದೆ. ಬಲಾಡ್ಯರು ನೂರಾರು ಎಕರೆ ಒತ್ತುವರಿ ಮಾಡಿದರೆ ಅದನ್ನು ಮಂಜೂರು ಮಾಡಿ, ಬಡವರನ್ನು ಕೈ ಬಿಡುವುದಾ ದರೆ ತಾನು ಸುಮ್ಮನಿರುವುದಿಲ್ಲ ಎಂದರು.

ಅರ್ಜಿ ಕೊಟ್ಟಿರುವ ಬಡವರು ತನ್ನನ್ನು ಕೇಳುತ್ತಾರೆ. ನೀವು ನೋಡಿದರೆ ಅರ್ಜಿ ವಜಾಗೊಂಡಿದೆ ಎನ್ನುತ್ತೀರಿ, ಇದು ತರವಲ್ಲ. ಯಾವತ್ತಾದರೂ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕುಲ, ಗೋತ್ರ ಏನೆಂದು ತಿಳಿಯದ ನೀವು, ಅರಣ್ಯದವರು ಬಂದು ಹೇಳಿದರೆ ಅದು ಅರಣ್ಯ ಭೂಮಿ ಎಂದು ನೀವು ನೋಂದಣಿ ಮಾಡ್ತೀರಿ. ಕಾನೂನು ಮತ್ತು ನಿಯಮಗಳು ಏನು ಹೇಳುತ್ತೆ ಅದನ್ನು ನೋಡಿ ಸರ್ವೆ ಮಾಡಿ ಪೋಡಿ ಮಾಡಿ. ಅರಣ್ಯ ಇಲಾಖೆ ಬಸ್‌ ನಿಲ್ದಾಣ, ತಾಲೂಕು ಕಚೇರಿ ಸಹ ನಮಗೆ ಸೇರಿದೆ ಎಂದರೆ ಸೇರಿಸಿ ಬಿಡಿ ಎಂದ ಅವರು, ಮೊದಲು ಲ್ಯಾಂಡ್ರಿ ಫಾರಂ ಓದಿದ್ದೀರಾ. ಅರಣ್ಯ ಯಾವುದನ್ನು ಡಿ.ಮಾರ್ಕ್‌ ಮಾಡಿಲ್ಲವೆಂದು ಕಿಡಿಕಾರಿದರು.

ಜಿಲ್ಲಾಧಿಕಾರಿಗೆ ಕರೆ: ಜಿಲ್ಲಾಧಿಕಾರಿಯವ ರನ್ನು ದೂರವಾಣಿಯಲ್ಲಿ ಮಾತಾಡಿ ಪೋಡಿ ಪರಸ್ಪರ ಸರ್ವೇ ಇಂಡಿಕಲ್‌ ಮಾಡಿಲ್ಲ. ಗ್ರ್ಯಾಂಟ್ ಆಗಿದೆ. ಫೈಲ್‌ ಇಲ್ಲ ಅಂದರೆ ಏನರ್ಥ. 92ರಲ್ಲಿ ಕೊಟ್ಟಿರುವ ಅರ್ಜಿಗಳು ಆರಿrರ್ಸಿ ಎಂಟ್ರಿ ಮಾಡಿದ್ದಾರೆ. ಅರಣ್ಯದವರು ನೋಟಿಸ್‌ ಕೊಟ್ಟು ಫೈನಲ್‌ ಮಾಡಿದ್ದರೆ. ಇವರಿಷ್ಟ ಬಂದಂಗೆ ಅನಕ್ಷ ರಸ್ಥರು ಮತ್ತು ಬಡವರ ಜಮೀನುಗಳನ್ನು ಅರಣ್ಯಕ್ಕೆ ಸೇರಿಸಿ, ಹಣವಂತರಿಗೆ ಸಾಗುವಳಿ ಚೀಟಿ ಕೊಟ್ಟಿದ್ದಾರೆ. ನಿಮಗೆ ಎಲ್ಲಾ ಗೊತ್ತಿದೆ. ಬಡವರಿ ಗ್ಯಾಕೆ ಈ ರೀತಿ ಮಾಡಿದ್ದಾರೆ ಗೊತ್ತಾಗುತ್ತಿಲ್ಲ. ಇದನ್ನು ನೀವೇ ಪರಿಶೀಲಿಸಿ ಸರಿಪಡಿಸುವಂತೆ ಹೇಳಿ ಸಭೆಗೆ ತೆರೆ ಎಳೆದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಗೋವಿಂದಸ್ವಾಮಿ ಇದ್ದರು.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.