ಕೆ.ಸಿ. ವ್ಯಾಲಿ: ಕೋರ್ಟ್‌ಗೆ ಹೋದವರ ವಿರುದ್ಧ ದಂಗೆ ಏಳಿ


Team Udayavani, Jan 25, 2019, 6:44 AM IST

kc-vall.jpg

ಕೋಲಾರ: ಹಸಿರು ಶಾಲು ಹಾಕಿಕೊಂಡು ಕೆ.ಸಿ. ವ್ಯಾಲಿ ನೀರನ್ನು ವಿರೋಧಿಸುವರು ನಿಜವಾದ ರೈತರಲ್ಲ, ಕೆ.ಸಿ.ವ್ಯಾಲಿ ಯೋಜನೆ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿ ತಡೆ ತರುವ ಮೂಲಕ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆಗೆ ದ್ರೋಹವೆಸಗಿರುವವರ ವಿರುದ್ಧ ಜನತೆ ದಂಗೆ ಏಳಬೇಕು ಎಂದು ಶಾಸಕ ಕೆ. ಶ್ರೀನಿವಾಸಗೌಡ ಹೇಳಿದರು.

ಗುರುವಾರ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘ ಆಯೋಜಿಸಿದ್ದ ಜಿಲ್ಲಾ ರೇಷ್ಮೆ ಬೆಳೆಗಾರರ ತಾಂತ್ರಿಕ ಸಮಾವೇಶ, ಕ್ಯಾಲೆಂಡರ್‌ ಬಿಡುಗಡೆ ಹಾಗೂ ಷೇರು ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾಣತನಕ್ಕೆ ಏನೆನ್ನಬೇಕು: ಜಿಲ್ಲೆಯ ಜನತೆ ಈಗಾಗಲೇ ಅಂತರ್ಜಲ 2000 ಅಡಿಗೆ ಹೋಗಿ ಸಂಕಷ್ಟ ಅನುಭವಿಸುತ್ತಿದ್ದಾರೆ, ಕೊಳವೆ ಬಾವಿ ಕೊರೆದು ನೀರಿಲ್ಲದೇ ಸಾಲದಲ್ಲಿ ಸಿಲುಕಿದ್ದಾರೆ, ಇಂತಹ ಜಿಲ್ಲೆಗೆ ಅಂತರ್ಜಲ ವೃದ್ಧಿಗಾಗಿ ತಂದ ಕೆ.ಸಿ. ವ್ಯಾಲಿಗೂ ತಡೆ ತಂದಿರುವ ಮಹನೀಯರ ಜಾಣತನಕ್ಕೆ ಏನೆನ್ನಬೇಕು ಎಂದು ಪ್ರಶ್ನಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಹಾಲು, ರೇಷ್ಮೆ ಬೆಳೆಯೇ ಜೀವನಾಧಾರ. ರೇಷ್ಮೆ ಇಲ್ಲದಿದ್ದರೆ ತೀವ್ರ ಕಷ್ಟಕ್ಕೆ ಸಿಲುಕಬೇಕಾಗಿತ್ತು. ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಿ ಲಾಭದಾಯಕವಾಗಿ ರೇಷ್ಮೆ ಕೃಷಿ ಮುಂದುವರೆಸಿ ಎಂದು ಸಲಹೆ ನೀಡಿದರು.

ಹಸಿರು ಶಾಲು ಹಾಕಿದವರು ರೈತರಲ್ಲ: ಕೆ.ಸಿ. ವ್ಯಾಲಿಗೆ ತಡೆಯಾಜ್ಞೆ ತಾರದೇ ಇದ್ದಿದ್ದರೆ ಈವರೆಗೆ 10 ಕೆರೆಗಳು ತುಂಬುತ್ತಿತ್ತು. ಸುಪ್ರೀಂ ಕೋರ್ಟ್‌ಗೆ ಹೋದವರನ್ನು ಯಾವ ರೀತಿ ನೋಡಬೇಕೋ ಗೊತ್ತಾಗುತ್ತಿಲ್ಲ. ಇಂದು ಹಸಿರು ಶಾಲು ಹಾಕಿದವರೆಲ್ಲ ರೈತರಾಗಿ ಬಿಟ್ಟಿದ್ದಾರೆ ಎಂದು ಛೇಡಿಸಿದರು.

ಕೋರ್ಟ್‌ನಲ್ಲಿ ಲಕ್ಷಾಂತರ ರೂ. ನೀಡಿ ಪ್ರಕರಣ ನಡೆಸುವುದರ ಹಿಂದೆ ರೈತ ವಿರೋಧಿಗಳಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನಿರದೆ ದಂಗೆ ಏಳಬೇಕು. ರೈತರ ಹೊಟ್ಟೆ ಮೇಲೆ ಹೊಡೆಯುವವರು ನಮ್ಮ ಶತ್ರುವೆಂದು ನೋಡಿ ಶಾಸ್ತಿ ಮಾಡಬೇಕು ಎಂದರು.

ರೈತರ ಅಭಿವೃದ್ಧಿಗೆ ಒತ್ತು: ಕೋಲಾರ, ಬಂಗಾರಪೇಟೆ, ಮಾಲೂರಿಗೆ ಕುಡಿಯುವ ನೀರು ಒದಗಿಸುವ 155 ಕೋಟಿ ವೆಚ್ಚದ ಯರಗೋಳು ಯೋಜನೆಗೆ 10 ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ನಂತರ ಬಂದ ಮಹಾನುಭಾವರು ಗಮನಹರಿಸಲಿಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, ಸಮಾಜ, ರೈತರ ಅಭಿವೃದ್ಧಿಗೆ ಒತ್ತು ನೀಡುವವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಮೋರಿಸನ್‌, ಜನತೆ ಮಿಶ್ರತಳಿ ರೇಷ್ಮೆ ಹುಳು ಸಾಕಾಣೆ ಬಿಟ್ಟು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆ„ವೋಲ್ಟೀನ್‌ಗೆ ಬೇಡಿಕೆ ಇರುವುದರಿಂದ ರೈತರು ಇದನ್ನೇ ಬೆಳೆಯಬೇಕು ಎಂದರು.

ಉತ್ತಮ ಇಳುವರಿ: ಮಿಶ್ರತಳಿ ಗೂಡು ಬೆಳೆಯುತ್ತಿದ್ದರೆ ಒಂದುದಿನ ಟೊಮೇಟೋವನ್ನು ರಸ್ತೆಗೆ ಸುರಿಯುವಂತೆ ರೇಷ್ಮೆ ಗೂಡನ್ನೂ ಎಸೆಯಬೇಕಾದೀತು. ತೋಟ ನಿರ್ವಹಣೆ, ಸೋಂಕುನಿವಾರಣೆ ಮತ್ತು ಉತ್ತಮ ಚಾಕಿ ಸೆಂಟರ್‌ನಿಂದ ಹುಳು ತಂದು ಸಾಕಿದರೆ ಬೆ„ವೋಲ್ಟೀನ್‌ನಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ಲಾಭ ಗಳಿಸಿ: ಹಿರಿಯ ವಿಜ್ಞಾನಿ ಡಾ.ಎಚ್.ತಿಮ್ಮಾರೆಡ್ಡಿ ಮಾತನಾಡಿ, ಮರ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಹಿಪ್ಪುನೇರಳೆ ಸಿಗುತ್ತಿಲ್ಲ. ಹೆಚ್ಚು ರೆಂಬೆ ಇಲ್ಲದೆ ಸೊಪ್ಪು ಸಿಗುತ್ತಿಲ್ಲ. ಕನಿಷ್ಠ ಎರಡು ಮರದಲ್ಲಿ ಒಂದು ಮೊಟ್ಟೆಯನ್ನು ಮೇಯಿಸುವಷ್ಟಾದರೂ ಸಾಧ್ಯವಾದರೆ ರೇಷ್ಮ ಕೃಷಿ ಆರ್ಥಿಕವಾಗಿ ಲಾಭದಾಗಬಹುದು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಹೇಳಿದರು.

ಪ್ರಗತಿಪರ ರೇಷ್ಮೆ ಕೃಷಿಕರಾದ ವೇಮಗಲ್‌ ಸೀತಪ್ಪ, ಬಂಗಾರಪೇಟೆಯ ರಾಮಚಂದ್ರ, ಕರಿಪಲ್ಲಿಯ ರಾಮಕೃಷ್ಣ, ಮಾಲೂರಿನ ದಾಸರಹಳ್ಳಿಯ ಶಾಮಣ್ಣ, ಎಚ್.ಮುರುಳಿ, ರೀಲರ್‌ಗಳಾದ ಅನ್ಸರ್‌, ಎಂ.ಆರ್ಪಾಷ, ನಿಸಾರ್‌ ಅಹಮದ್‌ರನ್ನು ಸನ್ಮಾನಿಸಲಾಯಿತು.

ರೇಷ್ಮೆ ಜಂಟಿ ನಿರ್ದೇಶಕ ಎಸ್‌.ವಿ ಕುಮಾರ್‌, ಜಿಲ್ಲಾ ಉಪ ನಿರ್ದೇಶಕ ಎಂ.ಕೆ ಪ್ರಭಾಕರ್‌, ಸಂಘದ ಅಧ್ಯಕ್ಷ ಸಿ.ವಿ.ನಾರಾಣಸ್ವಾಮಿ, ಉಪಾಧ್ಯಕ್ಷ ಎನ್‌. ಗೋಪಾಲಪ್ಪ,ಪ್ರಧಾನ ಕಾರ್ಯದರ್ಶಿ ಬಳಗೆರೆ ಬಿ.ಎಂ ಶಂಕರೇಗೌಡ, ಸಂಘಟನಾ ಕಾರ್ಯದರ್ಶಿ ನಾಗನಾಳ ವೈ.ಶ್ರೀನಿವಾಸ್‌,ಅಂಕತಟ್ಟಿ ಗೋವಿಂದರಾಜು, ಚಿನ್ನ ಹಳ್ಳಿ ನಾಗರಾಜ್‌, ವೆಂಕಟೇಶಪ್ಪ, ಚಿನ್ನಾಪುರ ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕರಾದ ವೆಂಕ ಟೇಶ್‌, ಎಸ್‌.ಎನ್‌ ಶ್ರೀನಿವಾಸ್‌, ನಾಗರಾಜ್‌, ಮಂಜುನಾಥ್‌, ಅಶ್ವಥ್‌ನಾರಾಯಣ್‌ ಇದ್ದರು.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.