ಕೆಜಿಎಫ್: ಭಾಷೆ ಹೆಸರಿನಲ್ಲಿ ಪ್ರಚೋದನೆ
Team Udayavani, Jul 21, 2021, 7:15 PM IST
ಕೆಜಿಎಫ್: ಭಾಷೆ ಹೆಸರಿನಲ್ಲಿ ಪ್ರಚೋದನೆ ನಡೆಸಿರುವವರನ್ನು ಪೊಲೀಸ್ಇಲಾಖೆಈಗಾಗಲೇ ಗುರ್ತಿಸಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್ ಹೇಳಿದ್ದಾರೆ.
ನಗರದ ರಾಬರ್ಟಸನ್ಪೇಟೆ ನಗರಸಭೆ ಬಸ್ನಿಲ್ದಾಣದಲ್ಲಿ ತಮಿಳು ನಾಮಫಲಕ ವಿಚಾರವಾಗಿಉದ್ಬವಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮನ್ನುಭೇಟಿ ಮಾಡಿದ ಕನ್ನಡ ಪರ ಸಂಘಟನೆಗಳ ಮುಖಂಡರಿಂದ ಮನವಿ ಸ್ವೀಕರಿಸಿ ಮಾತನಾಡಿದರು.
ಯೂಟ್ಯೂಬ್ ವರದಿಗಾರರಿಗೆ ಸೂಚನೆ:ಈಗಾಗಲೇ ವಿವಾದ ಮುಗಿದಿದೆ. ಇನ್ನೂ ಪ್ರಚೋದನೆಕಾರಿಯಾಗಿ ಮಾತನಾಡುವವರ ವಿರುದ್ಧಕಾನೂನುಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆನೀಡಲಾಗಿದೆ. ಡಿವೈಎಸ್ಪಿ ಮುರಳೀಧರ್ ಅವರುನಗರದ ಯೂಟ್ಯೂಬ್ ವರದಿಗಾರರನ್ನು ಕರೆಯಿಸಿಎಚ್ಚರಿಕೆ ನೀಡಿದ್ದಾರೆ. ಪ್ರಚೋದಿತ ಹೇಳಿಕೆಗಳನ್ನುನೀಡದಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಭಾಷಾ ಸೌಹಾರ್ದತೆಗೆ ಧಕ್ಕೆ ಆಗದಿರಲಿ: ವಾಟಾಳ್ ನಾಗರಾಜ್ ನಗರಕ್ಕೆ 26 ರಂದು ಮುತ್ತಿಗೆಹಾಕುವುದಾಗಿ ಹೇಳಿದ್ದಾರೆ. ಹಿರಿಯ ಅಧಿಕಾರಿಗಳಸೂಚನೆಯಂತೆ ಅವರನ್ನು ಜಿಲ್ಲೆಯೊಳಗೆ ಬಿಡದಂತೆ ನಿರ್ಬಂಧ ಹೇರಲಾಗುವುದು. ಭಾಷಾ ಸೌಹಾರ್ದತೆ ಕುರಿತಂತೆ ಎಲ್ಲಾ ಭಾಷಿಕರ ಸಭೆ ಕರೆಯಬೇಕೆಂದು ಇಚ್ಛಿಸಲಾಗಿದೆ.ಯಾವುದೇಕಾರಣದಿಂದಲೂಭಾಷಾ ಸೌಹಾರ್ದತೆಗೆಧಕ್ಕೆ ಬರದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಕನ್ನಡ ಪರ ಸಂಘಟನೆಗಳ ಮುಖಂಡರಾದ ಎನ್.ಆರ್.ವಿಜಯಶಂಕರ್,ರಾಜಗೋಪಾಲಗೌಡ, ವಿ.ಎಸ್.ಪ್ರಕಾಶ್, ಅಶೋಕ್ಲೋಣಿ, ಬಾ.ಹಾ.ಶೇಖರಪ್ಪ ಕೆಜಿಎಫ್ ನಲ್ಲಿ ಕನ್ನಡಭಾಷೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.ವಾಟಾಳ್ ನಾಗರಾಜ್ ಅವರು ಇಲ್ಲಿನಕನ್ನಡ ಪರಸಂಘಟನೆಗಳ ಪ್ರತಿನಿಧಿಗಳಿಗೆ ಯಾವುದೇ ಸೂಚನೆ ನೀಡದೆ,
ಬಂದಿದ್ದಾರೆ. ಅವರಿಗೆ ನಾಮಫಲಕದಕುರಿತು ಯಾವುದೇ ರೀತಿಯ ಬೆಂಬಲ ಇಲ್ಲ. ಅದೇರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿಕನ್ನಡಿಗರನ್ನು ಹೀಯಾಳಿಸುವ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಪ್ರಸನ್ನರೆಡ್ಡಿ, ಶ್ರೀನಿವಾಸ್,ಮದಿರಪ್ಪ, ನಂಜುಂಡಪ್ಪ, ಶಿವಪ್ರಕಾಶ್,ವೀರವೆಂಕಟಪ್ಪ, ವಿ.ಬಿ.ದೇಶಪಾಂಡೆಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
LS polls 2024: ಕೋಲಾರ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ; ಜೆಡಿಎಸ್ ಮುಖಂಡರು ಗೈರು