ಕುಂಬಾರಿಕೆ ಯಂತ್ರೋಪಕರಣಗಳ ಕಳವು
Team Udayavani, Jun 14, 2021, 8:52 PM IST
ಕೋಲಾರ: ತಾಲೂಕಿನ ನರಸಾಪುರಗ್ರಾಮದಲ್ಲಿ ಕುಂಬಾರರು ಮಡಿಕೆಮಾಡುವ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿ, ಸಲಕರಣೆಗಳನ್ನು ಧ್ವಂಸಮಾಡಿರುವುದರ ಜತೆಗೆ ಶೆಡ್ಗೆಪೆಟ್ರೋಲ್ ಸುರಿದು ಬೆಂಕಿ ಇಟ್ಟು 15 ದಿನ ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ವೃದ್ಧೆ ಸುಶೀಲಮ್ಮ ಆರೋಪಿಸಿದ್ದಾರೆ.
ಗ್ರಾಮದ ಮುನಿರಾಮಯ್ಯ ಇವರ ಕುಟುಂಬದವರು 35 ರಿಂದ 40ವರ್ಷಗಳಿಂದ ಕುಂಬಾರ ವೃತ್ತಿಯನ್ನುಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.ಕೆಲವು ದಿನಗಳ ಹಿಂದೆನರಸಾಪುರದಲ್ಲಿರುವ ಮುನಿರಾಮಯ್ಯಇವರ ತಮ್ಮ ಗೋದಾಮಿನಲ್ಲಿ ಸಿದ್ಧಪಡಿಸಿಇಟ್ಟಿದ್ದ ಒಲೆ, ಮಡಕೆ, ಮಣ್ಣಿನದೀಪಗಳು ಹಾಗೂ ಇವುಗಳನ್ನುತಯಾರು ಮಾಡುವ ಯಂತ್ರೋಪಕರಣಗಳನ್ನು ಯಾರೋಅಪರಿಚಿತರು ಗೋದಾಮಿನ ಕಿಟಕಿಮೂಲಕ ಒಳಗೆ ನುಗ್ಗಿ ಅನೇಕಸಲಕರಣೆಗಳನ್ನು ನಾಶ ಮಾಡಿದ್ದಾರೆ.ಅಲ್ಲದೆ, ಅನೇಕ ಬೆಲೆ ಬಾಳುವ ಉಪಕರಣಗಳನ್ನು ಕದ್ದುಪರಾರಿಯಾಗಿದ್ದಾರೆ.
ಅಷ್ಟೇ ಅಲ್ಲದೆ,ಶೆಡ್ ಅನ್ನು ಪೆಟ್ರೋಲ್ ಸುರಿದು ಬೆಂಕಿಇಟ್ಟು ಧ್ವಂಸ ಮಾಡಿದ್ದಾರೆ.ಈ ಘಟನೆಯ ಬಗ್ಗೆ ಮಾತನಾಡಿದಸುಶೀಲಮ್ಮ, ನಾವು ಹಗಲು ಇರುಳುಕಷ್ಟ ಪಟ್ಟು ಮಡಕೆ, ದೀಪ, ಒಲೆಮುಂತಾದ ವಸ್ತುಗಳನ್ನು ತಯಾರುಮಾಡುತ್ತಿದ್ದೆವು. ಆದರೆ, ಕೆಲವು ದಿನಗಳಹಿಂದೆ ಕಿಡಿಗೇಡಿಗಳು ನಮ್ಮಗೋದಾಮಿಗೆ ಹೋಗಿ ನುಗ್ಗಿ ಕಳ್ಳತನಮಾಡಿದ್ದಾರೆ. ಈ ಬಗ್ಗೆ ವೇಮಗಲ್ಪೊಲೀಸ್ ಠಾಣೆಯಲ್ಲಿ ದೂರನ್ನುದಾಖಲಿಸಲಾಗಿದೆ.
ಈ ದೂರಿನ ಅನ್ವಯಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿಪರಿಶೀಲಿಸಿದ್ದಾರೆ. ಆದರೆ, ನಮಗೆನ್ಯಾಯ ಸಿಕ್ಕಿಲ್ಲ ಎಂದರು.ಈ ಘಟನೆ ನಡೆದು 15 ದಿನಗಳಾದ್ರೂಪೊಲೀಸ್ ಅಧಿಕಾರಿಗಳು ತನಿಖೆನಡೆಸುತ್ತಿಲ್ಲ. ವಿಳಂಬ ಮಾಡುತ್ತಿದ್ದಾರೆಎಂದು ಮುನಿರಾಮಯ್ಯ ಹಾಗೂಪಾರ್ವತಮ್ಮ ಆರೋಪಿಸಿ ನ್ಯಾಯಕೊಡಿಸಲು ಮನವಿ ಮಾಡಿ, ಕುಂಬಾರವೃತ್ತಿಯಿಂದಲೇ ಜೀವನ ನಡೆಸುತ್ತಿರುವನಮಗೆ ಸಹಾಯ ಮಾಡುವಂತೆ ಮನವಿಮಾಡಿದ್ದಾರೆ.ಈ ವೇಳೆಯಲ್ಲಿ ಮುನಿರಾಮಯ್ಯ,ಸುಶೀಲಮ್ಮ, ಗೋವಿಂದಪ್ಪ,ಪಾರ್ವತಮ್ಮ, ಚಂದ್ರಪ್ಪ, ರಾಘವೇಂದ್ರ,ಪ್ರಭು, ಗೋಪಾಲಕೃಷ್ಣ ಇನ್ನಿತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…