ಹಿಂದೂ ಹೆಸರಲ್ಲಿ ಜಾತಿಗಳ ವರ್ಗೀಕರಣ ನಿಲ್ಲಲಿ
Team Udayavani, Jan 23, 2021, 8:01 PM IST
ಕೋಲಾರ: ಹಿಂದುತ್ವದ ಹೆಸರಿನಲ್ಲಿ ಜಾತಿಗಳನ್ನು ವರ್ಗೀಕರಣ ಮಾಡುವುದನ್ನು ಬಿಟ್ಟರೆ ಮಾತ್ರ ಜಾತಿ ವ್ಯವಸ್ಥೆ ನಾಶವಾಗಿ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ವೇಮಗಲ್ನಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದು ನಾವು ಎಲ್ಲಾ ಒಂದು ಎಂದುಕೊಂಡೇ ಆಧುನಿಕತೆ ಬೆಳೆದಂತೆಲ್ಲ ಶೂದ್ರ ಸಮುದಾಯದವರು ಎಂದು ಅಗೌರವ ಅಪಮಾನಗಳ ಮಧ್ಯೆ ಬದುಕುವಂತಾಗಿದೆ.
ಸಂವಿಧಾನದ ಚೌಕಟ್ಟಿನಲ್ಲಿ ನಿರಾಸೆ ನೋವು ಕೋಪ ತಾಪಗಳಲ್ಲಿ ಬದುಕುವಂತಾಗಿದೆ ಎಂದರು. ಮನುಷ್ಯ ನೆಮ್ಮದಿಯ ಬದುಕು ಸಾಗಿಸಲು ಆಧ್ಯಾತ್ಮಿಕ ಹಾಗೂ ಭಕ್ತಿ ಭಾವ ಬಹಳ ಅವಶ್ಯಕ. ಹೀಗಾಗಿ ಪ್ರತಿ ಗ್ರಾಮಗಳಲ್ಲಿ ಇಂತಹ ದೇವಾಲಯಗಳು ಬಹಳ ಅವಶ್ಯಕವಾಗಿದೆ. ಮನಸ್ಸು ಶುದ್ಧಿ ಆಗಬೇಕಾದರೆ ಭಕ್ತಿ ಭಾವ ಮುಖ್ಯ. ಹಾಗಾಗಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ : 10 ದಿನಗಳಲ್ಲಿ ಪತ್ತೆಯಾದ 2ನೇ ಸುರಂಗ
ದೇವಾಲಯಗಳು ಮುಖ್ಯ: ಪ್ರಾಸ್ತಾವಿಕವಾಗಿ ಮಾತ ನಾಡಿದ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಗುಡಿ, ಚರ್ಚ್ ಮಸೀದಿಗಳಲ್ಲಿ ಪ್ರಾರ್ಥನೆ ಇಲ್ಲದೇ ಹೋಗಿದ್ದರೆ ಮನುಷ್ಯ ಹುಚ್ಚರಾಗುತ್ತಾ ಇದ್ದರು. ಜಗತ್ತಿನಲ್ಲಿ ದೇವರ ಮೇಲಿನ ಭಕ್ತಿ ಮಾನವನ ಏಳಿಗೆಗೆ ಸಾಧ್ಯ. ವೈವಿಧ್ಯತೆಯಲ್ಲಿ ಏಕತೆ ಕಾಣಲು ಭಾರತದ ಸಾಂಸ್ಕೃತಿಕ ಪರಂಪರೆ ಮುಂದುವರಿಸಿಕೊಂಡು ಹೋಗಲು ದೇವಾಲಯಗಳು ಮುಖ್ಯವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಭೈರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಬಿ. ಉದಯ್ ಶಂಕರ್, ದೇವಾಲಯದ ಧರ್ಮದರ್ಶಿಗಳು ಪಿ.ವೆಂಕಟೇಶ್, ಗ್ರಾಪಂ ಅಧ್ಯಕ್ಷ ಬಿ.ನಾಗರಾಜ್, ಶಶಿಕಲಾ ನಾಗೇಶ್, ಊರಿನ ಹಲವಾರು ಗಣ್ಯರು, ಮುಖಂಡರು, ಹಿರಿಯ ಪ್ರಮುಖರು ಯುವಕರು ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ