ಎಪಿಎಂಸಿಯಲ್ಲಿ ಮಾವು ವಹಿವಾಟು ಗೊಂದಲ
ರೈತರು, ಟ್ರೇಡರ್, ಅಧಿಕಾರಿಗಳ ಜೊತೆ ಈಗಾಗಲೇ ನಾಲ್ಕು ಬಾರಿ ಚರ್ಚೆ
Team Udayavani, May 9, 2020, 1:44 PM IST
ಸಾಂದರ್ಭಿಕ ಚಿತ್ರ
ಶ್ರೀನಿವಾಸಪುರ: ಕೋವಿಡ್ ಎಚ್ಚರಿಕೆ ನಡುವೆ ಈ ಬಾರಿ ಎಪಿಎಂಸಿಯಲ್ಲಿ ಮಾವು ವಹಿವಾಟು ನಡೆಸಲು ಸಿದ್ಧತೆ ನಡೆದಿದ್ದು, ಪರ- ವಿರೋಧ ಹೇಳಿಕೆಗಳು ವ್ಯಕ್ತವಾಗಿವೆ. ಈ ವರ್ಷ ಮಾವು ಸೀಜನ್ ಸಮಯಕ್ಕೆ ಕೋವಿಡ್ ಆವರಿಸಿರುವು ದರಿಂದ ರೈತರು, ವ್ಯಾಪಾರಸ್ಥರು, ಟ್ರೇಡರ್ನವರು, ಎಪಿಎಂಸಿ ಆಡಳಿತ ಮಂಡಳಿ, ತಾಲೂಕು ಆಡಳಿತಕ್ಕೆ ಮಾವು ವಹಿವಾಟು ಹೇಗೆ ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಈಗಾಗಲೇ ರೈತರು, ಟ್ರೇಡರ್, ಅಧಿಕಾರಿಗಳ ಜೊತೆ ಎಪಿಎಂಸಿನಲ್ಲಿ 4 ಬಾರಿ ಚರ್ಚೆ ಮಾಡಲಾಗಿದೆ. ಎಪಿಎಂಸಿನಲ್ಲಿ ಮಾವು ವಹಿವಾಟು ಬೇಕೆ? ಬೇಡವೇ? ಎಂಬ ಚರ್ಚೆಯಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ರೈತ ಪರ ಸಂಘಟನೆಗಳು, ಮಾವು ಬೆಳೆಗಾರರ ಸಂಘದ ಮುಖ್ಯಸ್ಥರಾದ ಪಿ.ಆರ್. ಸೂರಿ, ನೀಲಟೂರು ಚಿನ್ನಪ್ಪರೆಡ್ಡಿ, ಎಸ್.ಜಿ.ವೀರಭದ್ರ ಸ್ವಾಮಿ, ಎನ್. ಜಿ.ಶ್ರೀರಾಮರೆಡ್ಡಿ ಕೋವಿಡ್ ಇರುವುದರಿಂದ ಎಪಿಎಂಸಿನಲ್ಲಿ ಮಾವು ವಹಿವಾಟು ನಡೆಸುವುದು ಬೇಡ ಎಂದಿದ್ದಾರೆ. ಅದೇ ರೀತಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್ ಸಹ ರೈತ ತೋಟಗಳಿಂದಲೇ ಮಾವು ಖರೀದಿಯಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದುನೋಡಬೇಕು.
ಈಗಾಗಲೇ 4 ಬಾರಿ ಎಪಿಎಂಸಿ ಪ್ರಾಂಗಣದಲ್ಲಿ ಶಾಸಕ ಕೆ.ಆರ್.ರಮೇಶ್ಕುಮಾರ್, ಜಿಲ್ಲಾಧಿಕಾರಿ ಸತ್ಯ ಭಾಮಾ ಸಮ್ಮು ಖದಲ್ಲಿ ರೈತರು, ಟ್ರೇಡರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ. ರೈತಪರ ಸಂಘಟನೆಗಳು ಎಪಿಎಂಸಿನಲ್ಲಿ ವಹಿವಾಟು ಬೇಡ ಎಂದರೆ, ಮಂಡಿಗಳವರು ಇಲ್ಲೇ ಮಾಡಿ ಎನ್ನುತ್ತಿದ್ದಾರೆ. ಆದರೂ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಮಂಗಳವಾರ ಸಹಕಾರ ಸಚಿವರ ಚರ್ಚೆ ನಡೆಯಲಿದೆ.
●ಎನ್.ರಾಜೆಂದ್ರಪ್ರಸಾದ್, ಅಧ್ಯಕ್ಷ, ಎಪಿಎಂಸಿ ಶ್ರೀನಿವಾಸಪುರ
ಎಪಿಎಂಸಿಗೆ ಸಾವಿರಾರು ಜನ ಬರುವುದರಿಂದ ಕೋವಿಡ್ ಸೋಂಕು ಹರಡು ವು ದನ್ನು ತಡೆಯುವುದು ಕಷ್ಟ. ಆದ್ದರಿಂದ ಈ ಬಾರಿ ಮಾವು ವಹಿವಾಟು ನಡೆಸುವುದು ಬೇಡ.
●ಎನ್.ಜಿ.ಶ್ರೀರಾಮರೆಡ್ಡಿ, ಅಧ್ಯಕ್ಷ, ರಾಜ್ಯ ರೈತ ಸಂಘ ಶ್ರೀನಿವಾಸಪುರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ