ರಾಷ್ಟ್ರೀಯ ಹೆದ್ದಾರಿಯಲ್ಲೇ ಒಕ್ಕಣೆ


Team Udayavani, Nov 5, 2019, 6:11 PM IST

kolar-tdy-1

ಮುಳಬಾಗಿಲು: ರೈತರು ಬೆಳೆಯುವ ಧಾನ್ಯಗಳ ಒಕ್ಕಣೆಗಾಗಿ ಸರ್ಕಾರ ಕೃಷಿ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ವಿತರಣೆ ಮಾಡುತ್ತಿದೆ. ಆದರೂ ರೈತರು ರಸ್ತೆಗಳಲ್ಲೇ ಒಕ್ಕಣೆ ಮಾಡುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ತಾಲೂಕಿನಲ್ಲಿ ಹಲವು ವರ್ಷಗಳ ಹಿಂದೆ ರೈತರು ಬೆಳೆದ ರಾಗಿ, ಭತ್ತ, ಜೋಳ, ತೊಗರಿ, ಅವರೆ, ಹುರಳಿ, ನವಣೆ, ಸಜ್ಜೆಯಂತಹ ಬೆಳೆಯನ್ನು ತಮ್ಮ ಜಮೀನಿನಲ್ಲೇ ಕಣ ಮಾಡಿ ಇಲ್ಲವೆ, ಬಂಡೆಗಳ ಮೇಲೆ ಎತ್ತುಗಳಿಂದ ತುಳಿಸಿ, ಕಲ್ಲಿನ ಗುಂಡು ಉರುಳಿಸಿ ಧಾನ್ಯಗಳ ಒಕ್ಕಣೆ ಮಾಡುತ್ತಿದ್ದರು. ಇದ್ದರಿಂದ ಆರೋಗ್ಯ ಭರಿತ ಧಾನ್ಯ ಮನೆಗೆ ಬರುತ್ತಿತ್ತು. ಅಂತಹ ಧಾನ್ಯಗಳ ಬಳಕೆಯಿಂದ ರೈತರ ಆರೋಗ್ಯ ಕೂಡ ಸದೃಢವಾಗಿರುತ್ತಿತ್ತು.

ಒಕ್ಕಣೆ ನಿಂತಿಲ್ಲ: ಕಾಲ ಬದಲಾದಂತೆ ಒಕ್ಕಣೆಗೆ ಎತ್ತುಗಳು ಹಾಗೂ ಆಳುಗಳ ಕೊರತೆ ಉಂಟಾದ ಕಾರಣ ಗ್ರಾಮಗಳಲ್ಲಿನ ರಸ್ತೆ, 24 ಗಂಟೆ ಸಾವಿರಾರು ವಾಹನ ಸಂಚರಿಸುವ ಹೆದ್ದಾರಿ ಗಳಲ್ಲೂ ಒಕ್ಕಣೆ ಮಾಡಲು ಆರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಕಮದಟ್ಟಿ, ಕಾಮನೂರು, ದೇವರಾಯ ಸಮುದ್ರ, ಕಾಂತರಾಜವೃತ್ತ, ಜಮ್ಮನಹಳ್ಳಿ ಗೇಟ್‌, ಶೀಗೇನಹಳ್ಳಿ, ಕಪ್ಪಲ ಮಡಗು, ಶ್ರೀರಂಗಪುರ, ಪದ್ಮಘಟ್ಟ, ತಾತಿಕಲ್ಲು, ಹಳೆಕುಪ್ಪ, ನಂಗಲಿ, ಮುಷ್ಟೂರು ಕ್ರಾಸ್‌ ಯಡಹಳ್ಳಿ, ಚೆನ್ನಾಪುರ ಮತ್ತು ರಾಷ್ಟ್ರೀಯ ಹೆದ್ದಾರಿ 234ರ ಸೊನ್ನವಾಡಿ, ಕವತನಹಳ್ಳಿ, ಕಾಡು ಕಚ್ಚನಹಳ್ಳಿ, ವಜ್ರನಾಗೇನಹಳ್ಳಿ, ದೊಮ್ಮಸಂದ್ರ, ತಿಮ್ಮನಾಯ ಕನಹಳ್ಳಿ, ಮಲ್ಲನಾಯಕನಹಳ್ಳಿ, ಮೋಪರಹಳ್ಳಿ, ಕರವಿರೆಡಿಹಳ್ಳಿ ಸೇರಿ ವಿವಿಧ ಊರಗಳಲ್ಲೂ ಒಕ್ಕಣೆ ಮಾಡುತ್ತಿದ್ದಾರೆ. ಧಾನ್ಯಗಳ ಮೇಲೆ ಸಂಚರಿಸಿದ್ರೆ ಅಪಘಾತ: ಹುಲ್ಲಿನ ಮೆದೆಗಳ ಮೇಲೆ ನೂರಾರು ವಾಹನಗಳು ಓಡಾಡುವುದರಿಂದ ಗಂಟೆಯೊಳಗೆ ಒಕ್ಕಣೆ ಮುಗಿಯುತ್ತದೆ. ಹುಲ್ಲು ಪುಡಿಯಾದರೂ ಧಾನ್ಯ ಜಾರುವುದರಿಂದ ದ್ವಿಚಕ್ರ ವಾಹನಗಳು ಅಪಘಾತಕ್ಕೆ ತುತ್ತಾಗುತ್ತವೆ.

ಒಕ್ಕಣೆ ನಿಲ್ಲಿಸಿಲ್ಲ: ವಾಹನಗಳಲ್ಲಿನ ಇಂಧನ ಧಾನ್ಯಗಳ ಮೇಲೆ ಸೋರಿಕೆಯಾಗಿ, ಚಕ್ರಗಳಲ್ಲಿನ ಮಣ್ಣು ಹಾಗೂ ಹೊಲಸು ಎಲ್ಲರೂ ಧಾನ್ಯದೊಂದಿಗೆ ಬೆರೆತು ಆಹಾರ ಧಾನ್ಯ ಮಲಿನವಾಗುತ್ತಿದೆ. ಇಂತಹ ಧಾನ್ಯಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದಾಗಿದೆ. ಇಷ್ಟಾದರೂ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ರೈತರು ನಿಲ್ಲಿಸುತ್ತಿಲ್ಲ ಮುಖ್ಯವಾಗಿ ದಿನದ 24 ಗಂಟೆ ವಾಹನ ಸಂಚಾರವಿರುವ ರಾಷ್ಟ್ರೀಯ ಹೆದ್ದಾರಿ 75ರ ಪದ್ಮಘಟ್ಟ ಬಳಿ ಇರುವ ಆರ್‌ಟಿಒ ಕಚೇರಿ ಎದುರೇ ರೈತರೊಬ್ಬರು ನೆಲಗಡೆಲೆ ಕಾಯಿಗಳನ್ನು ರಸ್ತೆಯಲ್ಲಿಯೇ ಒಣಗಿ ಹಾಕಿದ್ದರೂ ಇತ್ತ ಕಡೆ ಗಮನ ಹರಿಸಿಲ್ಲ. ಇದು ವಾಹನ ಸವಾರರಿಗೆ ಬೇಸರ ಉಂಟು ಮಾಡಿದೆ. ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ರೈತರು, ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಕೈ ಬಿಡಬೇಕಾಗಿದೆ. ಅಲ್ಲದೆ, ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.

 

-ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.