ಜಿಲ್ಲೆಯ ಜನರಿಗೆ ಪದೇಪದೆ ಪಂಗನಾಮ

ಐಎಂಎನಿಂದ 100 ಕೋಟಿ ರೂ.ಗೂ ಹೆಚ್ಚು ವಂಚನೆ • ಕೈ ಕೊಟ್ಟ ಎಕೆಎನ್‌ ಫೌಂಡೇಷನ್‌ ಪರಾರಿ?

Team Udayavani, Jun 16, 2019, 1:31 PM IST

kolar-tdy-1..

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಎಎಂಐನಿಂದ ಮೋಸ ಹೋಗಿರುವ ಕುರಿತು ತಮ್ಮಲ್ಲಿರುವ ಹಣ ಹೂಡಿಕೆ ದಾಖಲೆ ಪತ್ರಗಳನ್ನು ಪ್ರದರ್ಶಿಸಿದರು.

ಕೋಲಾರ: ಬೆಂಗಳೂರಿನ ಐಎಂಎ ಜುವೆಲರಿಯಲ್ಲಿ ಹಣ ಹೂಡಿಕೆ ಮಾಡಿ ಜಿಲ್ಲೆಯ ನೂರಾರು ಮಂದಿ 100 ಕೋಟಿ ರೂ.ಗೂ ಅಧಿಕ ಹಣ ಕಳೆದು ಕೊಂಡಿರುವ ಮಾಹಿತಿ ಲಭ್ಯವಾಗುತ್ತಿದೆ. ಈಗಾಗಲೇ ಮಾಲೂರು ತಾಲೂಕಿನ ಹಲವರು ಬಹಿರಂಗವಾಗಿ ಐಎಂಎಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಕುರಿತು ದೂರಿದ್ದಾರೆ. ಆದರೆ, ಇದಕ್ಕಿಂತಲೂ 20 ಪಟ್ಟು ಜನ ಐಎಂಎಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿರುವುದನ್ನು ಬಹಿರಂಗವಾಗಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಮೂಕಾಂಬಿಕಾ ಮೋಸ: 30 ವರ್ಷಗಳ ಹಿಂದೆ ಕೋಲಾರದ ಪಿ.ಸಿ. ಬಡಾವಣೆಯಲ್ಲಿ ತಮಿಳುನಾಡು ಮೂಲದ ಕೆಲವರು ಮನೆಯೊಂದನ್ನು ಬಾಡಿಗೆ ಪಡೆದು ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತು ನೀಡುವ ಆಮಿಷ ತೋರಿಸಿ, ಆರಂಭದಲ್ಲಿ ನೂರು ಇನ್ನೂರು ಠೇವಣಿ ಇಟ್ಟವರಿಗೆ ಸರಿಯಾಗಿ ಒಂದು ತಿಂಗಳ ಅದೇ ದಿನಾಂಕಕ್ಕೆ ಠೇವಣಿಗಿಂತಲೂ ಹತ್ತು ಪಟ್ಟು ಮೌಲ್ಯದ ವಸ್ತುಗಳನ್ನು ನೀಡುವುದಾಗಿ ಸಂಸ್ಥೆ ಹೇಳಿತ್ತು.

ಆರಂಭದಲ್ಲಿ ನೂರು ಇನ್ನೂರು ನೀಡಿ ಗೃಹೋಪಯೋಗಿ ವಸ್ತುಗಳನ್ನು ಪಡೆದುಕೊಂಡಿದ್ದವರು ಆನಂತರ ಸಾವಿರಾರು ರೂ. ಅನ್ನು ಸಂಸ್ಥೆಯಲ್ಲಿ ತೊಡಗಿಸಿದ್ದರು. ಕಡಿಮೆ ದರಕ್ಕೆ ಮಾರುತಿ ಕಾರು ನೀಡುವುದಾಗಿ ಪ್ರಕಟಿಸಿದ್ದ ಸಂಸ್ಥೆಯು, ಕಾರು ನಿಲ್ಲಿಸಲು ಶೆಡ್‌ ನಿರ್ಮಾಣವನ್ನು ಮಾಡುತ್ತಿತ್ತು. ಕಚೇರಿ ಕೆಲಸಕ್ಕೆ ಸ್ಥಳೀಯರನ್ನೇ ನೇಮಕ ಮಾಡಿಕೊಂಡಿತ್ತು. ಸಂಸ್ಥೆಯು ಇಲ್ಲೇ ಉಳಿಯುತ್ತದೆ ಎಂದು ಭಾವಿಸಿದ್ದ ಜನ ಆಗಿನ ಕಾಲಕ್ಕೆ ನೂರಾರು ಮಂದಿ ಕೋಟ್ಯಂತರ ರೂ. ಅನ್ನು ಮೂಕಾಂಬಿಕೆ ಸಂಸ್ಥೆಯಲ್ಲಿ ತೊಡಗಿಸಿದ್ದರು.

ದೊಡ್ಡ ಮೊತ್ತ ಕ್ರೋಡೀಕರಣವಾಗುತ್ತಿದ್ದಂತೆ ನಾಲ್ಕು ಮಂದಿ ಸುಳಿವು ನೀಡದೆ ಕಾರು ಸಮೇತ ರಾತ್ರೋ ರಾತ್ರಿ ನಾಪತ್ತೆಯಾಗಿದ್ದರು. ಅಳಿದುಳಿದ ವಸ್ತುಗಳನ್ನು ಕೆಲವರು ಕೈಗೆ ಸಿಕ್ಕಷ್ಟು ದೋಚಿದರು. ಬಹುತೇಕ ಕೋಲಾರಕ್ಕೆ ಆಘಾತ ತಂದಿದ್ದ ಈ ಘಟನಾವಳಿ ನೆನಪಿದ್ದವರು ಯಾರೂ ಸುಲಭದ ಆಮಿಷಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿರಲಿಲ್ಲ. ಇದರ ಭೀತಿಯಲ್ಲಿ ಹತ್ತಾರು ವರ್ಷ ಕಾಲ ಕೋಲಾರದಲ್ಲಿ ಯಾವುದೇ ಬ್ಲೇಡ್‌ ಕಂಪನಿ ತಲೆ ಎತ್ತಿರಲಿಲ್ಲ.

ಹಲವು ಕಂಪನಿಗಳ ಮೋಸ: ಮೂಕಾಂಬಿಕೆ ಸಂಸ್ಥೆಯ ಮೋಸದ ನಂತರ ಕೋಲಾರ ಜನತೆ ಒಂದಷ್ಟು ಹುಷಾರಾಗಿದ್ದರೂ, ಅವರನ್ನು ವಿವಿಧ ರೀತಿಯಲ್ಲಿ ಮರಳು ಮಾಡುವ ಸಂಸ್ಥೆಗಳು ಆಗಾಗ್ಗೆ ವಿವಿಧ ರೂಪಗಳಲ್ಲಿ ತಲೆ ಎತ್ತುತ್ತಲೇ ಇವೆ. ಕೆಲವರು ದೀಪಾವಳಿ, ತಿಂಗಳ ಚೀಟಿ, ಲಕ್ಕಿ ಡ್ರಾ, ವಾಹನಗಳ ಚೀಟಿ, ವಿದೇಶ ಪ್ರವಾಸದ ಚೀಟಿ, ದುಬಾರಿ ಬಡ್ಡಿ ಚೀಟಿ ಹೆಸರಿನಲ್ಲಿ ಮೋಸ ಹೋಗುತ್ತಿರುವುದು, ಆನ್‌ಲೈನ್‌ ವಂಚನೆ… ನಡೆದೇ ಇದೆ. ಮೋಸ ಹೋಗುವವರು ಇರುವಷ್ಟು ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದು ಕೋಲಾರದಲ್ಲಿ ನಡೆದ ಅನೇಕ ಘಟನೆಗಳು ಸಾಬೀತು ಮಾಡಿವೆ.

ಪೈಸೆಯೂ ವಾಪಸ್‌ ಬಂದಿಲ್ಲ: ಇವೆಲ್ಲಾ ಘಟನೆಗಳ ನಡುವೆಯೂ ಬಹುರಾಷ್ಟ್ರೀಯ ಕಂಪನಿಗಳ ಸ್ಪರೂಪದಲ್ಲಿ ಕೋಲಾರಕ್ಕೆ ಕಾಲಿಟ್ಟ ಸ್ವಯಂಕೃಷಿ, ಅಗ್ರಿ ಗೋಲ್ಡ್ನಂತ ಮತ್ತಿತರ ಸಂಸ್ಥೆಗಳ ಮೂಲಕವೂ ಜಿಲ್ಲೆಯ ಜನತೆ ಕೋಟ್ಯಂತರ ರೂ. ತೊಡಗಿಸಿ ಮೋಸ ಹೋಗಿದ್ದರು. ಈ ಸಂಸ್ಥೆಗಳಲ್ಲಿ ಹಣ ತೊಡಗಿಸಿದ್ದವರು ಈಗಲೂ ಹಣ ಬರುವಿಕೆಗಾಗಿ ಕಾದಿದ್ದಾರೆಯೇ ಹೊರತು ಒಂದು ಪೈಸೆಯೂ ವಾಪಸ್‌ ಬಂದಿಲ್ಲ.

ಮೋಸ ಮಾಡಿದವನಿಗೆ ಥಳಿತ: 15 ದಿನಗಳ ಹಿಂದಷ್ಟೇ ಹೊಸಕೋಟೆ ಮೂಲದ ವ್ಯಕ್ತಿಯೊಬ್ಬರು ವೇಮಗಲ್, ನರಸಾಪುರ ಭಾಗದ ನೂರಾರು ರೈತರಿಂದ ಸೌಹಾರ್ದ ಸಹಕಾರ ಬ್ಯಾಂಕ್‌ ನೆಪದಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿ ಮೋಸ ಮಾಡಿ, ಕೋಲಾರಕ್ಕೆ ಬಂದು ಶಾಖೆ ಆರಂಭಿಸಿದ್ದರು. ಇದನ್ನು ಗಮನಿಸಿದ್ದ ಜನತೆ ಆ ವ್ಯಕ್ತಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿ ಹಣ ವಾಪಸ್‌ ಮಾಡುವ ವಾಗ್ಧಾನ ಪಡೆದುಕೊಂಡಿದ್ದರು.

● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

11

Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.