ಕೃಷಿ ಹೊಂಡದ ನೀರಿಗೆ ವಿಷ ಹಾಕಿದ ಕಿಡಿಗೇಡಿಗಳು: ಮೀನುಗಳ ಸಾವು
Team Udayavani, Sep 15, 2021, 4:20 PM IST
ಮುಳಬಾಗಿಲು: ತಾಲೂಕಿನ ಚಿಕ್ಕಗುಟ್ಟಹಳ್ಳಿ ಗ್ರಾಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಸಿ. ವೆಂಕಟರಾಮಪ್ಪ ಅವರ ಕೃಷಿ ಹೊಂಡದಲ್ಲಿ
ಸಾಕಾಣಿಕೆ ಮಾಡಲಾಗಿದ್ದ ಮೀನುಗಳಿಗೆ ಅಪರಿಚಿತ ವ್ಯಕ್ತಿಗಳು ವಿಷ ಹಾಕಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ 11 ತಿಂಗಳಿನಿಂದ 11 ಸಾವಿರ ವಿವಿಧ ಬಗೆಯ ಮೀನಿನ ತಳಿಗಳನ್ನು ಕೃಷಿ ಹೊಂಡದಲ್ಲಿ ಸಾಕಾಣಿಕೆ ಮಾಡಲಾಗುತ್ತಿತ್ತು. ಕೆಲ ವ್ಯಕ್ತಿಗಳು
ಆಗಾಗ ಮೀನಿಗೆ ವಿಷ ಪ್ರಯೋಗಗಳನ್ನು ಮಾಡುತ್ತಿದ್ದು, ಮೀನುಗಳು ಕೆಲವು ಮಾತ್ರ ಸಾಯುತ್ತಿದ್ದವು, ಆದರೆ, ವಿಷ ಪ್ರಯೋಗ ಆಗಿರುವ ಬಗ್ಗೆ ಯಾವುದೇ ರೀತಿಯ ಮಾಹಿತಿ ದೊರೆಯುತ್ತಿಲ್ಲ, ಇದೀಗ 9 ಸಾವಿರ ಮೀನುಗಳು ಏಕಕಾಲದಲ್ಲಿ ಸಾವನ್ನಪ್ಪಿದ ಕಾರಣದಿಂದ ವಿಷ ಪ್ರಯೋಗ ನಡೆದಿರಬಹುದೆಂದು ನಂಬಲಾಗಿದೆ ಎಂದು ಮೀನು ಸಾಕಾಣಿಕೆದಾರ ವೆಂಕಟ ರಾಮಪ್ಪ ತಿಳಿಸಿದರು.
ಇದನ್ನೂ ಓದಿ:ಹಿಂದೂಗಳು ಇಡೀ ಜಗತ್ತಿನಲ್ಲಿಯೇ ಅತ್ಯಂತ ಸಹಿಷ್ಣುತೆ ಹೊಂದಿರುವವರು: ಜಾವೇದ್ ಅಖ್ತರ್
ಬೇತಮಂಗಲದಲ್ಲಿ ರಾಹು ಮತ್ತು ಸಿಸಿ ತಲಾ 2 ಸಾವಿರ, ಆಂಧ್ರಪ್ರದೇಶದಿಂದ ಒಂದು ಮೀನಿಗೆ 6 ರೂ. ನಂತೆ 6 ಸಾವಿರ ಹಾಗೂ ಮುಳಬಾಗಿಲಿನ ಕೃಷಿ ಇಲಾಖೆಯಿಂದ 1 ಸಾವಿರ ಮೀನು ಸಾಕಾಣಿಕೆ ಮಾಡಲಾಗುತ್ತಿತ್ತು. ಆದರೆ, ಈಗ ಮೀನು ಸತ್ತಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ವೆಂಕಟರಾಮಪ್ಪ ಅಳಲು ತೊಡಗಿಕೊಂಡರು. ಈ ಕುರಿತು ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್