ಸೋಂಕಿತರ ಚಿಕಿತ್ಸೆಗೆ ಪೊಲೀಸ್‌ ಅಧಿಕಾರಿ ನೆರವು


Team Udayavani, May 10, 2021, 6:47 PM IST

Police officer assisting in the treatment of the infected

ಕೋಲಾರ: ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋಲಾರ ಸೇರಿ9 ಜಿಲ್ಲೆಗಳಿಗೆ 24 ಆಮ್ಲಜನಕ ಸಾಂದ್ರತೆ ಯಂತ್ರಗಳನ್ನುಕೊಡುಗೆಯಾಗಿ ನೀಡುವಲ್ಲಿ ಹಿರಿಯ ಪೊಲೀಸ್‌ಅಧಿಕಾರಿ ಯಶಸ್ವಿಯಾಗಿದ್ದಾರೆ.

ಇಡೀ ದೇಶವೇ ಆಮ್ಲಜನಕ ಕೊರತೆಯನ್ನುಎದುರಿಸುತ್ತಿರುವ ಗಂಡಾಂತರಕಾರಿ ದಿನಗಳಲ್ಲಿಎಸಿಬಿಯ ಎಡಿಜಿಪಿ ಸೀಮಾಂತ್‌ಕುಮಾರ್‌ ಸಿಂಗ್‌ತಾವು ಮತ್ತು ತಮ್ಮ ದಾನಿ ಗೆಳೆಯರ ಸಹಾಯದಿಂದ ಆಮ್ಲಜನಕ ಸಾಂದ್ರತೆ ಯಂತ್ರಗಳನ್ನು ನೀಡುವ ಮೂಲಕಮಾನವೀಯತೆ ಮೆರೆದಿದ್ದಾರೆ.

ಎಸ್ಪಿಗಳ ಮೂಲಕ ವಿತರಣೆ: ಕೇಂದ್ರ ವಲಯದಕೋವಿಡ್‌ ನೋಡಲ್‌ ಅಧಿಕಾರಿಯಾಗಿಯೂ ಆಗಿರುವಸೀಮಾಂತ್‌ಕುಮಾರ್‌ ಸಿಂಗ್‌ ಆಮ್ಲಜನಕ ಕೊರತೆಅರಿತುಕೊಂಡು ತಮ್ಮ ಕೈಲಾದ ನೆರವು ನೀಡಲುಮುಂದಾಗಿದ್ದಾರೆ.

ಆಯಾ ಜಿಲ್ಲೆಗಳ ಎಸ್ಪಿಗಳ ಮೂಲಕಜಿಲ್ಲಾ ಆಸ್ಪತ್ರೆಗಳಿಗೆ ಈ ಆಮ್ಲಜನಕ ತಲುಪಿಸಲಾಗುತ್ತಿದೆ.ರಾಜ್ಯದ ಕೋವಿಡ್‌ ಚಿಕಿತ್ಸಾ ಕೇಂದ್ರಗಳಿಗೆ 200ಸಂಖ್ಯೆಯ ಆಮ್ಲಜನಕ ಸಾಂದ್ರತೆಗಳನ್ನು ವಿತರಿಸುವಗುರಿಯನ್ನು ಹೊಂದಲಾಗಿದೆ. ಮೊದಲ ಹಂತದಲ್ಲಿಕೋಲಾರ, ತುಮಕೂರು, ಚಿಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಆಸ್ಪತ್ರೆಗಳಿಗೆ ತಲಾ ಮೂರುಸಾಂದ್ರಕಗಳು, ಮೈಸೂರು ಪೊಲೀಸ್‌ ಕೋವಿಡ್‌ ಕೇರ್‌ಸೆಂಟರ್‌ ಹಾಗೂ ರಾಮನಗರ ಆಸ್ಪತ್ರೆಗೆ ತಲಾ ಎರಡು,ಕೋಲಾರ ಜಿಲ್ಲೆಯ ಕೆಜಿಎಫ್ ಆಸ್ಪತ್ರೆಗೆ ತಲಾ ಒಂದುಸಾಂದ್ರತೆ ಯಂತ್ರಗಳನ್ನು ವಿತರಿಸಲಾಗಿದೆ.

ಉದ್ಯಮಿ ಕೊಡುಗೆ: ಇನ್ನು 7ಆಮ್ಲಜನಕ ಸಾಂದ್ರತೆಗಳನ್ನು ಕೊ±ಳ ‌³ ಆಸ್ಪತ್ರೆಗೆ 2 ಮತ್ತು ಬಳ್ಳಾರಿ ಆಸ್ಪತ್ರೆಗೆ 5 ರಂತೆ ವಿತರಿಸಲಾಗಿದೆ. ಇನ್ನೂ 10ಸಾಂದ್ರತೆಗಳು ವಿತರಣೆಗೆ ಸಜ್ಜಾಗಿದ್ದು, ಸೋಮವಾರಬೇಡಿಕೆ ನೋಡಿಕೊಂಡು ವಿತರಿಸಲುಕ್ರಮವಹಿಸಲಾಗಿದೆ. ತಲಾ 80 ಸಾವಿರ ರೂ. ಮೌಲ್ಯದಐದು ಲೀಟರ್‌ಗಳ ಈ ಅಮ್ಲಜನಕ ಸಾಂದ್ರಕಗಳನ್ನು ಎ1ಗೋಲ್ಡ್‌ ಕಂಪನಿಯ ಮುಖ್ಯಸ್ಥರಾದ ಜೂಲಿಯಾನಎಂಬುವ ಉದ್ಯಮಿ ಕೊಡುಗೆಯಾಗಿ ನೀಡಿದ್ದಾರೆ.

ವ್ಯಾಟ್ಸ್‌ ಆ್ಯಪ್‌ ಗುಂಪಿನ ನೆರವು: ಕೊರೊನಾ ಮೊದಲಅಲೆಯ ಸಂದರ್ಭದಲ್ಲಿಯೇ ಜನರಿಗೆ ನೆರವಾಗುವಸಲುವಾಗಿ ಹಿರಿಯ ಪೊಲೀಸ್‌ ಅಧಿಕಾರಿ ಸೀಮಾಂತ್‌ಕುಮಾರ್‌ಸಿಂಗ್‌ ಎರಡು ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನುರಚಿಸಿ ಬಂಧು ಮಿತ್ರರಿಂದಸಹಾಯವನ್ನು ಯಾಚಿಸಿದರು .ಮೊದಲ ಅಲೆಯ ಸಂದರ್ಭದಲ್ಲಿ ದಾನಿಗಳು ಜನಸಮುದಾಯಕ್ಕೆ ನೆರವಾಗಲು ಉದಾರವಾಗಿ ಮುಂದಾಗಿದ್ದು, ನೆರವು ಬಯಸುತ್ತಿರುವರಿಗೆ ವಲಸೆಕಾರ್ಮಿಕರಿಗೆ ಆಹಾರ ಕಿಟ್‌ಗಳು, ವೈದ್ಯಕೀಯ ನೆರವು,ಆಸ್ಪತ್ರೆ ವೆತ್ಛ ಇತ್ಯಾದಿಗಳನ್ನು ಒದಗಿಸಿ ಸಮಾಜ ಸೇವೆಮಾಡಿದ್ದರು.

ನಾಲ್ಕು ತಂಡ ರಚನೆ: ಇದೀಗ ಎರಡನೇ ಅಲೆಯಲ್ಲಿಇಡೀ ದೇಶವೇ ಆಮ್ಲಜನಕ ಕೊರತೆಯನ್ನುಎದುರಿಸುತ್ತಿರುವುದರಿಂದ ಬೇಡಿಕೆ ಇರುವ ಆಸ್ಪತ್ರೆಗಳಿಗೆಆಮ್ಲಜನಕ ಕೊರತೆ ನೀಗುವ ಉದ್ದೇಶವನ್ನು ಹೊಂದಿತಮ್ಮ ವಾಟ್ಸ್‌ಆ್ಯಪ್‌ ಗುಂಪಿನ ಮೂಲಕ ನೆರವು ಬಯಸಿದ್ದರು.

ಆಮ್ಲಜನಕ ಬೇಡಿಕೆಯನ್ನು ಈಡೇರಿಸುವಸಲುವಾಗಿಯೇ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ನಾಲ್ಕುತಂಡಗಳನ್ನು ರಚಿಸಿಕೊಳ್ಳಲಾಗಿದೆ. ಈ ತಂಡಗಳುಚೀನಾ, ತೈವಾನ್‌, ಕೆನಡಾ ಮತ್ತು ಭಾರತದ ಇನ್ನಿತರರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿ ಆಮ್ಲಜನಕಸಾಂದ್ರಕಗಳನ್ನು ಖರೀದಿಸುತ್ತಿದೆ.ಕೆನಡಾ ಕನ್ನಡಿಗರ ನೆರವು: ಸೀಮಾಂತ್‌ಕುಮಾರ್‌ಸಿಂಗ್‌ರ ಸಹಾಯ ಹಸ್ತ ವಾಟ್ಸ್‌ಆ್ಯಪ್‌ ಗುಂಪಿನಪ್ರಯತ್ನಕ ಸ್ಕೆ ‌³ಂದಿಸಿರುವ ಕೆನಡಾ ಕನ್ನಡಿಗರ ತಂಡವು 30ಆಮ್ಲಜನಕ ಸಾಂದ್ರಕಗಳನ್ನು ತಾವು ಕಳುಹಿಸುವುದಾಗಿ ವಾಗ್ಧಾನ ಮಾಡಿದ್ದು, ಒಂದು ವಾರದೊಳಗೆಬೆಂಗಳೂರು ತಲುಪುವ ನಿರೀಕ್ಷೆ ಇದೆ.

ಇದೇ ಗುಂಪಿನಮೂಲಕ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ತಲಾ 1.25 ಲಕ್ಷ ರೂ ವೆತ್ಛದ 10 ಲೀಟರ್‌ ಸಾಮರ್ಥ್ಯದ50 ಆಮ್ಲಜನಕ ಸಾಂದ್ರತೆಗಳನ್ನು ಕೆನಡಾ ಮತ್ತುಲಭ್ಯವಿರುವ ದೇಶಗಳಿಂದ ಖರೀದಿಸಲುಮುಂದಾಗಿದ್ದಾರೆ.ಬೆಂಗಳೂರು ತಲುಪಲಿರುವ ಈ ಆಮ್ಲಜನಕಸಾಂದ್ರತೆಗಳನ್ನು ಆಸ್ಪತ್ರೆಗಳ ಬೇಡಿಕೆ ಆಧಾರದ ಮೇಲೆರಾಜ್ಯದ ಇನ್ನಿತರ ಜಿಲ್ಲೆಯ ಆಸ್ಪತ್ರೆಗಳಿಗೆ ವಿತರಿಸಲುಕ್ರಮವಹಿಸಲಾಗುತ್ತಿದೆ.

ನಿರ್ವಹಣೆ ಸುಲಭ: ಈಗಾಗಲೇ ವಿತರಿಸುತ್ತಿರುವಆಮ್ಲಜನಕ ಸಾಂದ್ರತೆಗಳ ನಿರ್ವಹಣೆ ಸುಲಭವಾಗಿದೆ.ಆಮ್ಲಜನಕ ತಯಾರಿಕೆಗೆ ಬೇರಾವುದೇ ಮೂಲವಸ್ತುಗಳನ್ನು ಜೋಡಿಸುವ ಅಗತ್ಯವಿಲ್ಲ. ಈ ಯಂತ್ರಗಳನ್ನುಸ್ವಿಚ್‌ ಹಾಕಿದರೆ ಸಾಕು ಯಂತ್ರವು ತಾನೇ ತಾನಾಗಿಆಮ್ಲಜನಕ ಉತ್ಪಾದಿಸಿ ಅಗತ್ಯವಿರುವ ರೋಗಿಗಳಿಗೆ ವಿತರಿಸಲಿದೆ.

ಕೋಲಾರ ಸೇರಿದಂತೆ ಏಳೆಂಟುಜಿಲ್ಲೆಗಳಲ್ಲಿ ಅಳವಡಿಸಿರುವ ಈ ಯಂತ್ರಗಳಿಂದ ನಿತ್ಯವೂಹಲವು ಜೀವಗಳನ್ನು ಉಳಿಸಲು ನೆರವಾಗುತ್ತಿದೆ. ಈರೀತಿಯ ಮತ್ತಷ್ಟು ಯಂತ್ರಗಳನ್ನು ವಿತರಣೆಗೆ ಹಿರಿಯಪೊಲೀಸ್‌ ಅಧಿಕಾರಿಗೆ ಪ್ರೇರಣೆಯಾಗಿದೆ.

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.