ರಂಗಭೂಮಿ ಸೌಂದರ್ಯ ಕಟ್ಟಿ ಬೆಳೆಸೋಣ
Team Udayavani, Feb 27, 2021, 3:21 PM IST
ಕೋಲಾರ: ಆದಿಮ ರಂಗಗುಡಿ, ನೆಲಗುಡಿ ಇದ್ದಂತೆ, ಇಲ್ಲಿ ಕಲಿತೆವು ಎಂಬುದನ್ನು ಮರೆಯೋಣ, ನೆಲ ಸಂಸ್ಕೃತಿಯ ನೆನಪುಗಳೊಂದಿಗೆ ನಡೆಯೋಣ, ರಂಗಭೂಮಿ ಸೌಂದರ್ಯವನ್ನು ಕಟ್ಟಿ ಬೆಳೆಸೋಣಎಂದು ಸಾಹಿತಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ನಗರದ ಅಂತರಗಂಗೆ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಐದು ದಿನಗಳ ಕಾಲ ಜರುಗಿದ ರಂಗ ನೇಪಥ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ನೇಪಥ್ಯ ಅಂದರೆ ರಂಗಭೂಮಿಗೆ ಸಂಬಂಧಿಸಿದ ಅಭಿನ್ನವಾಗಿರುವ ನಾಟಕದ ವಿಭಾಗವಲ್ಲ. ಅದು ನಾಟಕದ ವಸ್ತುವಿನ್ಯಾಸದ (ಕಾನ್ಸೆಪ್ಟ್) ಜೊತೆಗೆ ಬೆಳಕು,ವಸ್ತ್ರಾಲಂಕಾರ, ಧ್ವನಿ, ಪ್ರಸಾಧನ, ಸಂಗೀತ ಇಷ್ಟೆಲ್ಲಾಅಂಶಗಳನ್ನು ಒಳಗೊಂಡಿರುತ್ತದೆ. ಆದಿಮ ನೆಲದಲ್ಲಿಹುಟ್ಟಿರುವ ನಾಟಕಗಳಲ್ಲಿ ಇಂತ ಅನೇಕ ಪ್ರಯೋಗಗಳನ್ನು ಮಾಡಲಾಗಿದೆಯೆಂದು ವಿವರಿಸಿದರು.ನಿಕಟಪೂರ್ವ ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತಿನ ಜೆ.ಜಿ.ನಾಗರಾಜ್ ಸಮಾರೋಪ ನುಡಿಗಳನ್ನಾಡಿ, ನಗರ ಕೇಂದ್ರವಾಗಿರುವ ರಂಗಚಟುವಟಿಕೆಗಳು ಮತ್ತೆ ಗ್ರಾಮೀಣಕ್ಕೆ ತರುವಪ್ರಯತ್ನ ನಾಟಕ ಅಕಾಡೆಮಿ ಹಾಗೂ ಆದಿಮ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ರಂಗವಿಜಯ ಸಂಸ್ಥೆಯ ಮುಖ್ಯಸ್ಥ ಮಾಲೂರು ವಿಜಿ, ಹಾ.ಮಾ.ರಾಮಚಂದ್ರ, ನಾಟಕ ಅಕಾಡೆಮಿ ಸದಸ್ಯ ಗುಣಶೀಲನ್ ಮಾತನಾಡಿದರು.ಕಲಾವಿದರಿಗೆ ಬೇಕಾದ ರಂಗ ಶಿಸ್ತು, ಸಮಯ ಬದ್ಧತೆ ಕುರಿತು ಶಿಬಿರದ ನಿರ್ದೇಶಕ ನವೀನ್ ಶಕ್ತಿ ಸಣ್ಣ ಸಣ್ಣ ತುಣುಕು ದೃಶ್ಯಗಳ ಕಟ್ಟಿ ಪ್ರದರ್ಶಿಸಿದರು.ಶಿಬಿರದ ಬಗ್ಗೆ ಶಿಬಿರಾರ್ಥಿಗಳಾದ ಜಯಮಾಲ ಹಾಗೂ ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ವೆಂಕಟಲಕ್ಷ್ಮಮ್ಮ ನಾಡಗೀತೆ ಹಾಡಿದರು.ಮುಂಜುಳಾ ಕೊಂಡರಾಜನಹಳ್ಳಿ ಆದಿಮ ಆಶಯಗೀತೆ ಹಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ನವೀನ್ ಶಕ್ತಿ, ಶಿಬಿರದಸಂಯೋಜಕ ಮೋಹನ್, ಕಿರುತೆರೆ ನಟ, ನಿರ್ದೇಶಕ ಸತೀಶ್ರೆಡ್ಡಿ, ನಟ, ನಾಟಕಕಾರ ನಾವೆಂಕಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ