ಉಚಿತ ಪಡಿತರ ಧಾನ್ಯ ವಿತರಣೆಗೆ ಆಗ್ರಹ
Team Udayavani, Jul 24, 2020, 8:19 AM IST
ಮಾಲೂರು: ಕೋವಿಡ್-19ನಿಂದ ರಾಜ್ಯದ ಜನ ತತ್ತರಿಸಿದ್ದು, ಎಲ್ಲರಿಗೂ ಉಚಿತ ಪಡಿತರ ಧಾನ್ಯ ವಿತರಿಸುವ ಜೊತೆಗೆ ಪ್ರತಿ ಕುಟುಂಬಕ್ಕೂ ಮಾಸಿಕ 7500 ರೂ. ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್ ಎಂ.ಮಂಜುನಾಥ್ಗೆ ಸಿಐ ಟಿಯು, ಕರ್ನಾಟಕ ಪ್ರಾಂತ ರೈತ ಸಂಘ ಮನವಿ ಸಲ್ಲಿಸಿತು.
ಕೆಪಿಆರ್ಎಸ್ನ ತಾಲೂಕು ಅಧ್ಯಕ್ಷ ಮುನಿಸ್ವಾಮಿ ಗೌಡರ ನೇತೃತ್ವದಲ್ಲಿ ಸಂಘಟಿತರಾದ ಕಾರ್ಯಕರ್ತರು ತಾಲೂಕು ಕಚೇರಿಗೆ ತೆರಳಿ ಮನವಿ ನೀಡಿದರು. ಸಮಾಜದ ಎಲ್ಲಾ ವರ್ಗದ ಜನರು ಕೋವಿಡ್-19ನಿಂದ ಸೂಕ್ತ ರಕ್ಷಣೆ ಕೈಗೊಳ್ಳುವ ಜೊತೆಗೆ ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುವ ಕಾರ್ಯಕ್ರಮ ರೂಪಿಸಿ, ರಾಜ್ಯದ ಅಂಗನ ವಾಡಿ, ಬಿಸಿಊಟದ ನೌಕರರು ಮತ್ತು ಅಶಾ ಕಾರ್ಯಕರ್ತರಿಗೆ ಕನಿಷ್ಠ ವೇತನದೊಂದಿಗೆ ಬಾಕಿ ಇರುವ ವೇತನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಗ್ರಹಿಸಿದ್ದಾರೆ. ಕೆಪಿಆರ್ಎಸ್ನ ತಾಲೂಕು ಗೌರವಾಧ್ಯಕ್ಷ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಸಿಐಟಿಯುನ ತಾಲೂಕು ಅಧ್ಯಕ್ಷ ಬಿ.ಎಸ್.ನಾಗರತ್ನ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್