ಅಧಿಕಾರಿಗಳ ನಿರ್ಲಕ್ಷ್ಯ : ಮಗಳ ವಿದ್ಯಾಭ್ಯಾಸದ ದಾಖಲೆಗಾಗಿ ಮಳೆಯಲ್ಲೇ ತಂದೆಯ ಪ್ರತಿಭಟನೆ
Team Udayavani, Sep 3, 2020, 12:29 PM IST
ಮುಳಬಾಗಿಲು: ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗಳ ಬಿಎಸ್ಸಿ ಕೃಷಿ ವ್ಯಾಸಂಗಕ್ಕೆ ಅಗತ್ಯ ವ್ಯವಸಾಯಗಾರರ ಪತ್ರ ಸಿಗದೆ ಶಿಕ್ಷಣದಿಂದ ವಂಚಿತಗೊಂಡಿದ್ದು, ಮನನೊಂದ ತಂದೆಯೊಬ್ಬ ಕಣ್ಣೀರು ಹಾಕುತ್ತ, ಮಳೆಯಲ್ಲಿಯೇ ವಿಷ ಸೇವಿಸುವುದಾಗಿ ಪ್ರತಿಭಟನೆ ನಡೆಸಿದ ದಾರುಣ ಘಟನೆ ನಗರದಲ್ಲಿ ನಡೆಯಿತು.
ನಗರದ ಮುತ್ಯಾಲಪೇಟೆ ಸ್ಟಾಂಪ್ ವೆಂಡರ್ ವೆಂಕಟಾಚಲಪತಿ ತನ್ನ ಪುತ್ರಿ ಚಂದನಳನ್ನು ಬಿಎಸ್ಸಿ ಕೃಷಿ ವ್ಯಾಸಂಗಕ್ಕೆ ಕಳುಹಿಸಬೇಕೆಂದು ವ್ಯವಸಾಯಗಾರರ ಪತ್ರಕ್ಕಾಗಿ ವಂಶವೃಕ್ಷ ಮತ್ತು ವಾಸಸ್ಥಳ ಪತ್ರಕ್ಕಾಗಿ ಆ.13 ರಂದು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರತಿನಿತ್ಯ
ಕಚೇರಿಗೆ ಅಲೆದಾಡಿದರೂ ಕೊನೆಗೆ ಉಪತಹಶೀಲ್ದಾರ್ ನಾಗಮಣಿ ಗುರುತಿನ ಚೀಟಿ ಲಗತ್ತಿಸಿಲ್ಲವೆಂದು ಸಬೂಬು ನೀಡಿ ಅರ್ಜಿ ಸೆ.1 ರಂದು ರದ್ದುಗೊಳಿಸಿದ್ದಾರೆ.
ನಿಗದಿತ ಕಾಲಾವಧಿಯಲ್ಲಿ ದಾಖಲೆಗಳ ಸಿಗದೇ ತನ್ನ ಮಗಳ ಬಿಎಸ್ಸಿ ಕೃಷಿ ವ್ಯಾಸಂಗದ ಕನಸು ನುಚ್ಚುನೂರಾಗಿದೆ. ಇದರಿಂದ ಬೇಸತ್ತ ತಂದೆಯು ತಹಶೀಲ್ದಾರ್ ರಾಜಶೇಖರ್ ಬಳಿ ತನ್ನ ಮನದಾಳ ತೋಡಿಕೊಂಡಾಗ ಮತ್ತೂಂದು ಅರ್ಜಿ ಸಲ್ಲಿಸಿ ಇತರೇ ತಾಂತ್ರಿಕ ಶಿಕ್ಷಣಕ್ಕಾದರೂ (ಸಿಇಟಿಗೆ) ಅನು ಕೂಲವಾದೀ ತೆಂದು ತಿಳಿಸಿ ಕೂಡಲೇ ಅರ್ಜಿಯಾನು ಸಾರ ದಾಖಲೆ ನೀಡು ವಂತೆ ಸ್ವತಃ ತಹಶೀಲ್ದಾರ್ ಅವರೇ ಉಪ ತಹಶೀಲ್ದಾರ್ಗೆ
ಸೂಚಿಸಿದ್ದರು.ವಂಶವೃಕ್ಷ ಮತ್ತು ವಾಸಸ್ಥಳ ಪತ್ರ ನೀಡಲು ಒಪ್ಪದೇ ಹೋದಾಗ ವಿದ್ಯಾರ್ಥಿನಿಯ ತಂದೆ ಅಳುತ್ತ, ಜೋರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು. ಮುಖಂಡರು ರೊಚ್ಚಿಗೆದ್ದಿದ್ದರಿಂದ ದಾಖಲೆ ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ