2 ತಿಂಗಳಾದ್ರೂ ರಸ್ತೆ ಕಾಮಗಾರಿ ಆರಂಭಿಸಿಲ್ಲ
Team Udayavani, Oct 7, 2019, 3:20 PM IST
ಮಾಸ್ತಿ: ಗ್ರಾಮದಿಂದ ಹಸಾಂಡಹಳ್ಳಿ ಮಾರ್ಗವಾಗಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಯಾಗಿದೆ. ಇದನ್ನು ಮನಗಂಡು ಶಾಸಕ ಕೆ.ವೈ.ನಂಜೇಗೌಡ ಎರಡು ತಿಂಗಳ ಹಿಂದೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿದ್ದರಾದರೂ ಇನ್ನೂ ಕಾರ್ಯಾಂಭವಾಗಿಲ್ಲ, ಬಹುತೇಕ ಗ್ರಾಮಗಳಿಗೆ ತೊರಲಕ್ಕಿ ರಸ್ತೆಯು ಪ್ರಮುಖ ಸಂಪರ್ಕ ಕೊಂಡಿ ಯಾಗಿದೆ. ಮಾಸ್ತಿಯಿಂದ ಹಸಾಂಡಹಳ್ಳಿ ಮಾರ್ಗವಾಗಿ ಓಬಟ್ಟಿ ಅಗ್ರಹಾರ ಸಮೀಪದ ಟೇಕಲ್ ರಸ್ತೆಗೂ ಇದು ಸಂಪರ್ಕಿಸುತ್ತದೆ. ಹಸಾಂಡಹಳ್ಳಿ ಮಾರ್ಗವಾಗಿ ಪಿಚ್ಚಗುಂಟ್ರಹಳ್ಳಿ, ನಟುವರಹಳ್ಳಿ, ಹಸಾಂಡಹಳ್ಳಿ, ಕುಪ್ಪೂರು, ತೊಳಸನದೊಡ್ಡಿ, ಮುತ್ತೇನಹಟ್ಟಿ, ರಾಯಸಂದ್ರ, ದೊಡ್ಡದಾನವಹಳ್ಳಿ, ತೊರಲಕ್ಕಿ ಸೇರಿ ಟೇಕಲ್, ಕೋಲಾರ ಹಾಗೂ ಬಂಗಾರಪೇಟೆ, ಕೆಜಿಎಫ್ಕಡೆಗೆ ನೂರಾರು ದ್ವಿಚಕ್ರ ವಾಹನ, ಸರ್ಕಾರಿ, ಖಾಸಗಿ ಬಸ್ ಹೆಚ್ಚಾಗಿ ಸಂಚರಿಸುತ್ತವೆ.
ಹೆದರುವ ವಾಹನ ಸವಾರರು: ಈ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಸಂಪೂರ್ಣವಾಗಿ ಹಾಳಾಗಿದೆ. ಭಾರೀ ಗಾತ್ರದ ಗುಂಡಿಗಳು ಬಿದ್ದಿದ್ದು, ಜಲ್ಲಿ ಕಲ್ಲುಗಳು ಮೇಲೆದ್ದಿವೆ. ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅಲ್ಲದೆ, ಕೆಸರು ಗದ್ದೆಯಾಗಿ ಮಾಪಾಡಾಗುತ್ತದೆ. ಬೇಸಿಗೆಯಲ್ಲಿ ದೂಳು ತುಂಬಿಕೊಳ್ಳುತ್ತದೆ. ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ. ಬಸ್ಗಳು ಪ್ರಯಾಣಿಕರು ಸೀಟ್ ಮೇಲೆ ಕೂರಲಾಗದೇ, ಗುಂಡಿಗಳಿಂದ ಸೊಂಟು ನೋವು ಭರಿಸಿಕೊಳ್ಳುವಂ ತಾಗಿದೆ. ದ್ವಿಚಕ್ರ ವಾಹನ ಸವಾರರು ಜೀವವನ್ನು ಅಂಗೈಲಿಟ್ಟುಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಶಾಸಕರಿಗೆ ಮನವಿ ಮಾಡಿದ
ಕಾರಣ 8 ಕಿ.ಮೀ. ಇರುವ ರಸ್ತೆ ಅಭಿವೃದ್ಧಿಗೆ ಸರ್ಕಾರವು ಒಆರ್ಎಫ್ ಯೋಜನೆಯಡಿ 2 ಕೋಟಿ ರೂ. ಬಿಡುಗಡೆಗೆ ಮಾಡಿತ್ತು. ನಂತರ 2 ತಿಂಗಳ ಹಿಂದೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ವೈ.ನಂಜೇಗೌಡ ಭೂಮಿ ಪೂಜೆ ನೆರವೇರಿಸಿದ್ದರು. ಯಾವುದೇ ಕಾರಣಕ್ಕೂ ಕಾಮಗಾರಿ ತಡಮಾಡದೇ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದರು. ಎರಡು ತಿಂಗಳು ಕಳೆದರೂ ರಸ್ತೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ, ಇದರಿಂದ ಈ ಭಾಗದ ಜನತೆಗೆ ರಸ್ತೆಯ ಅಭಿವೃದ್ಧಿಯ ಕನಸು ಕನಸಾಗಿ ಉಳಿದಿದೆ. ಆದಷ್ಟು ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಹಾಳಾಗಿರುವ ಮಾಸ್ತಿ- ಹಸಾಂಡಹಳ್ಳಿ ರಸ್ತೆ ಸರಿಪಡಿಸಿ ವಾಹನ ಹಾಗೂ ನಾಗರಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
-ಎಂ.ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ