ಶಾಲಾ ಶೌಚಾಲಯ, ಕಸ ಸ್ವಚ್ಛ ಮಾಡಿದ ಬಿಇಒ
ಮೂರು ದಿನದಲ್ಲಿ ಕ್ರಮವಹಿಸದಿದ್ದಲ್ಲಿ ಕಠಿಣ ಕ್ರಮ: ನಾಗರಾಜಗೌಡ
Team Udayavani, Jul 17, 2019, 5:24 PM IST
ಕೋಲಾರ ತಾಲೂಕಿನ ಈಚಲ ದಿನ್ನೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ ಬಿಇಒ ನಾಗರಾಜಗೌಡ.
ಕೋಲಾರ: ಮುಂದಿನ ಮೂರು ದಿನಗಳಲ್ಲಿ ಕಲಿಕೆಗೆ ಪೂರಕ ವಾತಾವರಣ, ಸಮರ್ಪಕ ದಾಖಲೆಗಳ ನಿರ್ವಹಣೆ, ಸ್ವಚ್ಛತೆಯಲ್ಲಿ ಸುಧಾರಣೆ ಮಾಡದಿದ್ದಲ್ಲಿ ಶಿಸ್ತು ಕ್ರಮ ಖಚಿತ ಎಂದು ತಾಲೂಕಿನ ಈಚಲ ದಿನ್ನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಂ.ನಾರಾಯಣಸ್ವಾಮಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ದೂರು ಹಾಗೂ ಜಿಪಂ ಸಿಇಒ ಅವರ ಸೂಚನೆ ಹಿನ್ನೆಲೆಯಲ್ಲಿ ಶಾಲೆಗೆ ದಿಢೀರ್ ಭೇಟಿ ನೀಡಿದ ಅವರು, ಶಾಲೆಯ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿ, ಶಾಲೆಯಲ್ಲಿ ಇರುವ 4 ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುವ ಕುರಿತು ಬೇಸರ ವ್ಯಕ್ತಪಡಿಸಿದರು.
ಶೌಚಾಲಯ ಸ್ವಚ್ಛತೆ: ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದೆ, ಕಾಂಪೌಂಡ್ ನಿರ್ಮಾಣಕ್ಕೂ ನಿರ್ಲಕ್ಷ್ಯ ತೋರಲಾಗಿದೆ, ಶೌಚಾಲಯ ಬಳಸದ ಕಾರಣ ಜೇಡರ ಬಲೆಗಳು ಕಟ್ಟಿ ಹಾಳು ಕೊಂಪೆಯಂತಾಗಿದ್ದು, ಸ್ವತಃ ಬಿಇಒ ಅವರೇ ಶೌಚಾಲಯದಲ್ಲಿನ ಗೂಡುಗಳನ್ನು ಪೊರಕೆ ಸಹಾಯದಿಂದ ಸ್ವಚ್ಛಗೊಳಿಸಿದರು. ಶಾಲಾ ಕೊಠಡಿಯಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು, ಮೂಲೆಗಳಲ್ಲಿ ಹಳೆ ಪೇಪರ್ ಚೂರುಗಳು, ಕಸ ರಾಶಿಯಾಗಿ ಬಿದ್ದಿದ್ದು, ಸ್ವಚ್ಛತೆಗೆ ಕ್ರಮವಹಿಸಲು ಸೂಚಿಸಿದರು.
ದಾಖಲೆ ಇಟ್ಟಿಲ್ಲ: ಶಾಲೆಯ ಎಸ್ಡಿಎಂಸಿ ಖಾತೆಯಲ್ಲಿ 52 ಸಾವಿರ ರೂ. ಇದೆ ಎಂದು ಮೌಖೀಕವಾಗಿ ಶಿಕ್ಷಕರು ತಿಳಿಸಿದರೂ ಈ ಸಂಬಂಧ ಯಾವುದೇ ದಾಖಲೆಗಳನ್ನು ಇಟ್ಟಿಲ್ಲ, ಮಕ್ಕಳ ಹಾಜರಾತಿ, ಶಿಕ್ಷಕರ ಹಾಜರಾತಿಯೂ ಇಲ್ಲ ಎಂಬ ಮಾಹಿತಿಯಿಂದ ಬಿಇಒ ಸಿಡಿಮಿಡಿಗೊಂಡರು.
ಕಳೆದ 8 ವರ್ಷಗಳಿಂದ ಇದೇ ಶಾಲೆಯಲ್ಲಿರುವ ಶಿಕ್ಷಕ ನಾರಾಯಣಸ್ವಾಮಿ, ಮುರುಕಲು ಟೇಬಲ್, ಚೇರುಗಳನ್ನೇ ಬಳಸುತ್ತಿದ್ದು, ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ರಸ್ತೆ ಬದಿಯೇ ಶಾಲೆ ಇರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾಂಪೌಂಡ್ ಅಗತ್ಯವಿದೆ. ಈ ಸಂಬಂಧ ಬಿಇಒ ಅವರು, ಗ್ರಾಪಂ ಸದಸ್ಯ ರವಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಕಾಂಪೌಂಡ್ ಕಟ್ಟಿಸಿಕೊಡುವ ಭರವಸೆ ನೀಡಿದರು.
ಅಂಗನವಾಡಿಯೂ ಅವ್ಯವಸ್ಥೆ ಆಗರ: ಶಾಲಾ ಶಿಥಿಲ ಕಟ್ಟಡದಲ್ಲೇ ಇರುವ ಅಂಗನವಾಡಿಯಲ್ಲೂ ಐದು ಮಕ್ಕಳಿದ್ದು, ಅದು ಬೀಳುವ ಸ್ಥಿತಿಯಲ್ಲಿದೆ, ಎಂದು ದೂರಿದರು. ಈ ವೇಳೆ ಕ್ಷೇತ್ರ ಸಮನ್ವಯಾಕಾರಿ ರಾಮಕೃಷ್ಣಪ್ಪ, ಇಸಿಒ ಶ್ರೀನಿವಾಸನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ
Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ
Lok Sabha Election ಬಳಿಕವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ