2ನೇ ದಿನವೂ ನಡೆದ ಚಪಾತಿ ತಯಾರಿ ಕಾರ್ಯ

ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರಿಂದ ಲಕ್ಷ ರೂ.ಗೂ ಹೆಚ್ಚು ಹಣ, ಬಟ್ಟೆ, ಹೊದಿಕೆ, ಹಾಲು, ಔಷಧಿಗಳ ಸಂಗ್ರಹ

Team Udayavani, Aug 13, 2019, 4:22 PM IST

kolar-tdy-1

ಕೋಲಾರ ನಗರದ ಶಾರದಾಂಭ ಛತ್ರದಲ್ಲಿ ಎರಡನೇ ದಿನವೂ ನೆರೆ ಸಂತ್ರಸ್ತರಿಗೆ ಚಪಾತಿ ತಯಾರಿಸುವ ಕಾರ್ಯ ಭರದಿಂದ ಸಾಗಿತು.

ಕೋಲಾರ: ರಾಜ್ಯದ ನೆರೆ ಪೀಡಿತ ಜಿಲ್ಲೆಗಳ ಸಂತ್ರಸ್ತರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ನಗರದ ಜನತೆ ಸ್ವಯಂ ಪ್ರೇರಿತರಾಗಿ ಎರಡನೇ ದಿನವಾದ ಸೋಮವಾರವೂ ಬಂದು ಸಹಕಾರ ನೀಡಿದರು. ನಗರದ ದೊಡ್ಡಪೇಟೆಯ ಶಾರದಾಂಬ ಛತ್ರದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಚಪಾತಿ ಮಾಡುವ ಕಾರ್ಯ ಆರಂಭವಾಗಿ, ಸೋಮವಾರವು ಮುಂದುವರಿದು ಈ ಕಾರ್ಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರಾಗಿ ಆಗಮಿಸಿ ದುಡಿದರು. ಈ ಕಾರ್ಯದಲ್ಲಿ ನಾಗರಾಜ್‌, ಎಸ್‌.ವಿ.ವಿಜಯಕುಮಾರ್‌, ನಗರಸಭಾ ಮಾಜಿ ಸದಸ್ಯ ಮಂಜುನಾಥ್‌, ಸೋಮಶೇಖರ್‌, ಮಹೇಂದ್ರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘ ಹಾಗೂ ವಾಸವಿ ಮಹಿಳಾ ಮಂಡಳಿಯ ಸದಸ್ಯರು, ನಾಗರಿಕರು ತಮ್ಮನ್ನು ತೊಡಗಿಸಿಕೊಂಡಿದ್ದರು.

ನಗರದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಂಗ್ರಹ ಕಾರ್ಯ ಎರಡನೇ ದಿನವೂ ಮುಂದುವರಿದಿದ್ದು, ಸೋಮವಾರ ಮಾತ್ರವೇ ಲಕ್ಷ ರೂ. ಹೆಚ್ಚು ಹಣ, ಬಟ್ಟೆ, ಹೊದಿಕೆ, ಔಷಧಿಗಳು, ಗುಡ್‌ಲೈಫ್‌ ಹಾಲು ಮತ್ತಿತರ ವಸ್ತುಗಳು ಸಂಗ್ರಹವಾದವು.

ಬಿಜೆಪಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಈ ಸಂಬಂಧ ಮಾಹಿತಿ ನೀಡಿ, ಸೋಮವಾರ ಸಂತ್ರಸ್ತರ ಪರಿಹಾರ ನಿಧಿಗೆ ಜನತೆ ಒಂದು ಲಕ್ಷ ರೂ. ಹೆಚ್ಚಿನ ಹಣ ನೀಡಿದ್ದಾರೆ. ಜತೆಗೆ ತಲಾ 25 ಕೆ.ಜಿ.ಯ 50 ಚೀಲ ಅಕ್ಕಿ, 300 ಲೀಟರ್‌ ಗುಡ್‌ಲೈಫ್‌ ಹಾಲು, ಶುದ್ಧನೀರು, ಅಡುಗೆ ಎಣ್ಣೆ, ಬ್ರೆಡ್‌, 400 ಹೊಸ ಹೊದಿಕೆಗಳು, ಬಟ್ಟೆ, ಮಹಿಳೆಯರ ದಿನಬಳಕೆ ವಸ್ತುಗಳು ಸಂಗ್ರಹವಾಗಿದೆ ಎಂದು ತಿಳಿಸಿದರು.

ನೆರವಿನ ಮಹಾಪೂರ: ಅನೇಕ ಮಂದಿ ದಾನಿಗಳು ಸ್ವಯಂಪ್ರೇರಿತರಾಗಿ ನೆರವು ನೀಡುತ್ತಿದ್ದು, ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ, ಬರ ಜಿಲ್ಲೆಯ ಜನತೆ ನೆರೆಪೀಡಿತರಿಗೆ ನೆರವಿನ ಮಹಾಪೂರ ಹರಿಸುತ್ತಿದ್ದಾರೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್‌.ಬಿ.ಮುನಿವೆಂಕಟಪ್ಪ, ನಮ್ಮ ನಾಡಿನ ಸೋದರರು ಸಂಕಷ್ಟದಲ್ಲಿದ್ದಾರೆ, ನಾವೆಲ್ಲಾ ಮಾನವೀಯತೆಯಿಂದ ನೆರವಾಗೋಣ, ಪ್ರತಿಯೊಬ್ಬರೂ ಕೈಜೋಡಿಸಿದರೆ ಹೆಚ್ಚಿನ ನೆರವು ಹರಿಸಲು ಸಾಧ್ಯ ಎಂದರು.

ಸಹೋದರರ ಕೈಹಿಡಿಯೋಣ: ಇತರೆ ಬಿಜೆಪಿ ಮುಖಂಡರು ಮಾತನಾಡಿ, ಜಿಲ್ಲೆಯಿಂದ ಹೆಚ್ಚಿನ ನೆರವನ್ನು ಸಂತ್ರಸ್ತರಿಗೆ ನೀಡೋಣ, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಹಣ, ಹೊಸ ಬಟ್ಟೆ, ದವಸ ಧಾನ್ಯಗಳು, ಬಿಸ್ಕತ್‌, ಔಷಧಿಗಳು, ಕುಡಿಯುವ ನೀರು ನೀಡೋಣ, ನಮ್ಮ ಸಹೋದರರ ಕೈಹಿಡಿಯೋಣ ಎಂದು ಕರೆ ನೀಡಿದರು.

ಮಾನವೀಯತೆ ಮೆರೆದವರಿಗೆ ಧನ್ಯವಾದ: ಬಿಜೆಪಿ ಮುಖಂಡ ಮಾಗೇರಿ ನಾರಾಯಣಸ್ವಾಮಿ, ಕೋಲಾರ ನಗರದಲ್ಲಿ ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ, ಸಂತ್ರಸ್ತರ ನೆರವಿಗೆ ಸ್ವಯಂಪ್ರೇರಿತರಾಗಿ ನೆರವಾಗಲು ಮುಂದೆ ಬರುತ್ತಿದ್ದು, ನೆರವು ನೀಡುತ್ತಿರುವ ಮಾನವೀಯ ಹೃದಯಗಳಿಗೆ ಧನ್ಯವಾದ ಸಲ್ಲಿಸಿದ ಅವರು, ಜನತೆಯಿಂದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸುವ ಈ ಹಣ, ವಸ್ತುಗಳನ್ನು ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ನಿರ್ವಹಿಸಲಿದೆ ಎಂದು ತಿಳಿಸಿದರು.

ಪರಿಹಾರ ಸಂಗ್ರಹ ಕಾರ್ಯದಲ್ಲಿ ಮುಖಂಡರಾದ ಸತ್ಯನಾರಾಯಣ, ಸುರೇಶ್‌, ಬೈಚಪ್ಪ, ಸಿ.ಡಿ.ರಾಮಚಂದ್ರಗೌಡ, ಬಿಜೆಪಿ ಎಸ್ಟಿ ಮೋರ್ಚಾದ ತಿಮ್ಮರಾಯಪ್ಪ, ಮುಖಂಡರಾದ ವಿಜಯಕುಮಾರ್‌, ಸಾಮಾ. ಅನಿಲ್ಕುಮಾರ್‌, ಸುರೇಶ್‌, ಪ್ರಕಾಶ್‌, ರಮೇಶ್‌, ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಹಿಂದುಳಿದ ಮೋರ್ಚಾದ ಮಂಜು, ಮಂಜುನಾಥ್‌, ವೇಣುಗೋಪಾಲ್, ವೆಂಕಟೇಶ್‌, ಸಂದೀಪ್‌, ನಟರಾಜ್‌, ಕಿಟ್ಟಿ,ಸುನೀಲ್ ಮತ್ತಿತರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.